ಸಿನಿಮಾ ರಂಗದಲ್ಲಿ ಇತ್ತೀಚಿಗೆ ಹೆಚ್ಚು ಚರ್ಚೆಯಾಗುತ್ತಿದ್ದ ವಿಷಯವೆಂದರೆ ಅದು ನಾಗಚೈತನ್ಯ ಮತ್ತು ಸಮಂತಾ ಅವರ ವಿಚ್ಚೇದನದ ಕುರಿತು. ಇವರ ವಿಚೇದನ ಕುರಿತು ಹಲವಾರು ಉಹಾ ಪೋಹಗಳು ಹರಿದಾಡುತಿತ್ತು. ಆದರೆ ಇವರ ವಿಚೇದನಕ್ಕೆ ಸ್ಟಾರ್ ನಟರೊಬ್ಬರು ಕಾರಣ ಎಂಬ ಹೇಳಿಕೆ ಎಲ್ಲಾ ಕಡೆ ಹರಿದಾಡುತ್ತಿದೆ.
ನಾಗಚೈತನ್ಯ ಮತ್ತು ಸಮಂತಾ ಇಬ್ಬರು ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಅದ್ದೂರಿಯಾಗಿ ಮದುವೆಯಾಗಿದ್ದರು. ಆದರೆ ಕಳೆದ ವರ್ಷ ಅಕ್ಟೋಬರ್ ನಲ್ಲಿ ದಂಪತಿಗಳು ವಿಚೇದನ ಪಡೆಯುವ ಮೂಲಕ ತಮ್ಮ ಸಾಂಸಾರಿಕ ಜೀವನಕ್ಕೆ ಬ್ರೆಕ್ ಹಾಕಿಕೊಂಡಿದ್ದರು. ಇವರಿಬ್ಬರ ವಿಚ್ಚೇದನ ವಿಚಾರ ಕೇಳಿ ಅಭಿಮಾನಿಗಳಿಗೆ ಶಾಕ್ ಆಗಿತ್ತು. ಇದಾದ ನಂತರ ಇವರಿಬ್ಬರಿಗೆ ಸಂಬಂಧ ಪಟ್ಟ ಇಂತಹ ವಿಷಯವೇ ಆಗಿರಲಿ ಅದು ಕ್ಷಣಮಾತ್ರದಲ್ಲಿ ವೈರಲ್ ಆಗುತಿತ್ತು.
ಇತ್ತೀಚಿಗೆ ಕಾಫೀ ವಿತ್ ಕರಣ್ ಕಾರ್ಯಕ್ರಮದಲ್ಲಿ ನಾಗಚೈತನ್ಯ ಅವರ ಕುರಿತು ಸಮಂತಾ ಒಂದು ಅಚ್ಚರಿಯ ಹೇಳಿಕೆಯನ್ನು ಸಹ ನೀಡಿದ್ದರು. ಇದಕ್ಕೆ ನಾಗಚೈತನ್ಯ ಅವರು ಕಮೆಂಟ್ ಮಾಡಿ ಈಗ ತುಂಬಾ ಖುಷಿಯಾಗಿದ್ದೇನೆ ಎಂದು ಹೇಳುವ ಮೂಲಕ ಸಮಂತಾ ಅವರ ಕಮೆಂಟ್ ಗೆ ತಿರುಗೇಟು ನೀಡಿದರು. ಇವೆಲ್ಲ ವಿಷಯದ ನಂತರ ಇದೀಗ ಮತ್ತೊಂದು ಸುದ್ದಿ ಎಲ್ಲಾ ಕಡೆ ಸಕತ್ ಸೌಂಡ್ ಮಾಡುತ್ತಿದೆ.
ಹಲವಾರು ವಿವಾದಾತ್ಮಕ ಹೇಳಿಕೆಯನ್ನು ನೀಡುತ್ತಾ ಸುದ್ದಿ ಯಾಗುತ್ತಿದ್ದ ಶಾರುಖ್ ಖಾನ್ ಇದೀಗ ಮತ್ತೊಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಈ ಬರಿ ಅವರು ಸಮಂತಾ ಮತ್ತು ನಾಗಚೈತನ್ಯ ಅವರ ವಿಚೇದನ ಕುರಿತು ಒಂದು ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ. ಅದೇನೆಂದರೆ “ಟಾಲಿವುಡ್ ನ ಮಾಜಿ ಜೋಡಿ ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನಕ್ಕೆ ಆಮೀರ್ ಖಾನ್ ಕಾರಣ” ಎಂದು ಅವರು ಹೇಳಿದ್ದಾರೆ. ಇದೀಗ ಶಾರುಖ್ ಖಾನ್ ಅವರ ಹೇಳಿಕೆ ಎಲ್ಲಾ ಕಡೆ ಸಂಚಲವನ್ನು ಸೃಷ್ಟಿಸಿದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
