ಸ್ಯಾಂಡಲ್ವುಡ್ ನ ಮೋಸ್ಟ ಎಕ್ಸ್ಪೆಕ್ಟೆಡ್ ಸಿನಿಮಾ ಎಂದರೆ ಅದು “ವಿಕ್ರಾಂತ್ ರೋಣ”. ಈಗಾಗಲೇ ಹಾಡುಗಳು ಮತ್ತು ಟ್ರೈಲರ್ ಮೂಲಕ ಸಿನಿಮಾ ಸಕತ್ ಸೌಂಡ್ ಮಾಡುತ್ತಿದೆ. ಸಿನಿಮಾ ಬಿಡುಗಡೆ ಯಾಗಲು ಇನ್ನು ಕೇವಲ ಎರಡು ದಿನಗಳು ಮಾತ್ರ ಬಾಕಿ ಇದ್ದು, ಈಗಲೂ ಸಹ ಸಿನಿಮಾ ತಂಡ ಪ್ರಮೋಷನ್ ನಲ್ಲಿ ಬ್ಯುಸಿ ಯಾಗಿದೆ. ಇಂತಹ ಸಂಧರ್ಭದಲ್ಲಿ ಮುಂಬೈ ನಲ್ಲಿ ನಡೆಯುತಿದ್ದ ಪ್ರಮೋಷನ್ ಕಾರ್ಯಕ್ರಮದಲ್ಲಿ ನಟ ಸಲ್ಮಾನ್ ಖಾನ್ ಕತ್ರಿನಾ ಕೈಫ್ ಅವರನ್ನು ನೆನಪಿಸಿಕೊಂಡಿದ್ದಾರೆ.
ವಿಕಾರಂತ್ ರೋಣ ಸಿನಿಮಾದ ಪ್ರಮೋಷನ್ ನಲ್ಲಿ ಬ್ಯುಸಿ ಯಾಗಿರುವ ಸಿನಿಮಾ ತಂಡ ಇತ್ತೀಚಿಗೆ ಮುಂಬೈ ನಗರದಲ್ಲಿ ಸಿನಿಮಾದ ಪ್ರಿ-ರಿಲೀಸ್ ಇವೆಂಟ್ ಅನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಸಲ್ಮಾನ್ ಖಾನ್ ಅವರು ಅತಿಥಿಯಾಗಿ ಬಂದಿದ್ದರು. ಹೀಗೇ ಮಾತನಾಡುತ್ತಿದ್ದಾಗ ಸಲ್ಮಾನ್ ಖಾನ್ ವೇದಿಕೆಯ ಮೇಲೆ ಕತ್ರಿನಾ ಕೈಫ್ ಅವರ ಹೆಸರನ್ನು ಹೇಳಿದರು. ಇದಕ್ಕೆ ಅವರು ನೀಡಿದ ಕಾರಣ ಮಾತ್ರ ಪ್ರತಿಯೊಬ್ಬರನ್ನು ರಂಜಿಸಿತು.
ವಿಕ್ರಾಂತ್ ರೋಣ ಪ್ರಿ- ರಿಲೀಸ್ ಇವೆಂಟ್ ನಲ್ಲಿ ಜಾಕ್ವಲಿನ್ ಫರ್ನಾಂಡಿಸ್ ಅವರಿಗೆ ಮೊದಲು ಇಷ್ಟು ಚೆನ್ನಾಗಿ ಡಾನ್ಸ್ ಮಾಡಲು ಬರುತ್ತಿರಲಿಲ್ಲ ಎಂದು ಸಲ್ಮಾನ್ ಖಾನ್ ಹೇಳಿದರು. ಇದಕ್ಕೆ ಪ್ರತಿಯಾಗಿ ರಿತೇಶ್ ದೇಶಮುಖ್ ‘ತುಂಬ ವರ್ಷಗಳ ಹಿಂದೆ ನಾನು ಮತ್ತು ಜಾಕ್ವೆಲಿನ್ ಜೊತೆಯಾಗಿ ಕೆಲಸ ಮಾಡಿದ್ದೆವು. ಆಗ ಭಾರತೀಯ ಡ್ಯಾನ್ಸ್ ಪ್ರಕಾರವನ್ನು ಕಲಿಯಲು ಅವರು ತುಂಬ ಕಷ್ಟಪಟ್ಟಿದ್ದರು. ಆದರೆ ಈಗ ಅವರು ಭಾರತದ ಅತ್ಯುತ್ತಮ ಡ್ಯಾನ್ಸರ್ಗಳಲ್ಲಿ ಒಬ್ಬರಾಗಿದ್ದಾರೆ’ ಎಂದು ಅವರನ್ನು ಹೊಗಳಿದರು.
ಇದೆ ಸಂಧರ್ಭದಲ್ಲಿ ಸಲ್ಮಾನ್ ಖಾನ್ ಕತ್ರಿನಾ ಕೈಫ್ ಅವರು ಸಹ ಕಷ್ಟಪಟ್ಟಿದ್ದಾರೆ ಎಂದು ಹೇಳಿದರು. ಸಲ್ಮಾನ್ ಖಾನ್ ಅವರ ಈ ಮಾತನ್ನು ಕೇಳಿ ಆಳಿದ್ದ ಪ್ರೇಕ್ಷಕರು ನಕ್ಕರು. ಸಲ್ಮಾನ್ ಖಾನ್ ಮತ್ತು ಕಿಚ್ಚ ಸುದೀಪ್ ಅವರ ಸ್ನೇಹ ಎಷ್ಟರಮಟ್ಟಿಗೆ ಇದೆ ಎಂಬುದಕ್ಕೆ ಸಲ್ಮಾನ್ ಖಾನ್ ಅವರನ್ನು ವಿಕ್ರಾಂತ್ ರೋಣ ಪ್ರಿ -ರಿಲೀಸ್ ಇವೆಂಟ್ ಗೆ ಆಹ್ವಾನಿಸಿರುವುದೇ ಮುಖ್ಯ ಕಾರಣ ಎಂದು ಹೇಳಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
