fbpx
ಸಮಾಚಾರ

ಪ್ರವೀಣ್ ಕುಮಾರ್ ಹತ್ಯೆಯನ್ನು ಖಂಡಿಸಿ ಹಾಡೊಂದನ್ನು ರಚಿಸಿದ ಮಂಗಳೂರಿನ ಸಾಮಾಜಿಕ ಹೋರಾಟಗಾರ ದೀಪು ಶೆಟ್ಟಿಗಾರ್! ವಿಡಿಯೋ ವೈರಲ್

ನಮ್ಮ ರಾಜ್ಯದಲ್ಲಿ ಇತ್ತೀಚಿಗೆ ಹತ್ಯೆ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಬಿಜೆಪಿ ಮುಖಂಡ ಪ್ರವೀಣ್ ಕುಮಾರ್ ನೆಟ್ಟಾರು ಅವರ ಹತ್ಯೆ ಪ್ರಕರಣ ಇಡೀ ದಕ್ಷಿಣ ಕನ್ನಡ ಜನತೆಯನ್ನು ಬೆಚ್ಚಿಬೀಳಿಸಿದೆ. ಇವರ ಸಾವಿನ ಸುತ್ತಾ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಇವೆಲ್ಲದರ ಮಧ್ಯೆ ದೀಪು ಶೆಟ್ಟಿಗಾರ್ ಅವರು ಹಾಡಿರುವ ಹಾಡು ಎಲ್ಲಾ ಕಡೆ ಸಕತ್ ವೈರಲ್ ಆಗುತ್ತಿದೆ.

 

 

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಅಭಿನಯಿಸಿ ಯಶಸ್ಸು ಗಳಿಸಿದ ಸಿನಿಮಾ ಎಂದರೆ ಅದು ರಾಮಚಾರಿ. ಈ ಸಿನಿಮಾದ ಪ್ರತಿಯೊಂದು ಹಾಡುಗಳು ಸಕತ್ ಹಿಟ್ ಆಗಿತ್ತು. ಅದರಲ್ಲೂ “ನಮ್ಮೂರ ಯುವರಾಣಿ” ಹಾಡು ಸಕತ್ ಖ್ಯಾತಿ ಗಳಿಸಿತ್ತು. ಇದೀಗ ಇದೆ ಹಾಡಿನ ಟ್ಯೂನ್ ಬಳಿಸಿ ತಮ್ಮದೇ ರೀತಿಯಲ್ಲಿ ದೀಪು ಶೆಟ್ಟಿಗಾರ್ ಹಾಡೊಂದನ್ನು ರಚಿಸಿದ್ದು, ಈ ಹಾಡು ಇದೀಗ ಎಲ್ಲಾ ಕಡೆ ಸಕತ್ ವೈರಲ್ ಆಗುತ್ತಿದೆ.

“ಆವೇಶ ಪಡಬೇಡಿ ಆಕ್ರೋಶ ದಿಂದ” ಎಂಬ ಸಾಲಿನಿಂದ ಶುರುವಾಗುವ ಈ ಹಾಡು ಎಷ್ಟು ಅರ್ಥಪೂರಿತವಾಗಿದೆ ಎಂಬುದನ್ನು ಈ ಹಾಡನ್ನು ಸಂಪೂರ್ಣವಾಗಿ ಕೇಳಿದ ನಂತರ ತಿಳಿಯುತ್ತದೆ. ಇದೀಗ ಇವರ ಹಾಡು ಎಲ್ಲಾ ಕಡೆ ಸಕತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಇವರ ಹಾಡಿಗೆ ಪ್ರಶಂಸೆಯ ಸುರಿಮಳೆಯನ್ನು ಹರಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top