fbpx
ಸಮಾಚಾರ

ತನ್ನ ಪತಿ ಚಂದನ್ ಮೇಲೆ ನಡೆದ ಹಲ್ಲೆಯ ಕುರಿತು ಮೊದಲ ಬಾರಿಗೆ ಮಾಧ್ಯಮದ ಜೊತೆ ಮಾತನಾಡಿದ ಪತ್ನಿ ಕವಿತಾ ಗೌಡ! ಏನು ಹೇಳಿದರು ಗೊತ್ತಾ?

“ಬಿಗ್ ಬಾಸ್”, “ಲಕ್ಷ್ಮಿ ಬಾರಮ್ಮ” ಖ್ಯಾತಿಯ ಚಂದನ್ ಅವರ ಮೇಲೆ ತೆಲುಗು ಧಾರಾವಾಹಿ ತಂಡದಿಂದ ಹಲ್ಲೆ ನಡೆದಿದೆ. ತೆಲುಗು ಧಾರಾವಾಹಿಯ ಶೂಟಿಂಗ್ ಸೆಟ್ ನಲ್ಲಿ ನಡೆದ ಗಲಾಟೆಯ ವಿಡಿಯೋ ಇದೀಗ ಎಲ್ಲಾ ಕಡೆ ಸಕತ್ ವೈರಲ್ ಆಗುತ್ತಿದೆ.

ಕನ್ನಡ ಕಿರುತರೆ ದಾರಾವಾಹಿಗಳಲ್ಲದೆ, ಇತರೆ ಭಾಷೆಯ ಧಾರಾವಾಹಿಗಳಲ್ಲಿ ಚಂದನ್ ನಟಿಸಿದ್ದಾರೆ. ಇತ್ತೀಚಿಗೆ ಅವರು ತೆಲುಗಿನ ‘ಸಾವಿತ್ರಮ್ಮ ಗಾರಿ ಅಬ್ಬಾಯಿ’ ಧಾರಾವಾಹಿಯಲ್ಲಿ ಭಾಗಿಯಾಗಿದ್ದರು. ಈ ಧಾರಾವಾಹಿಯ ಶೂಟಿಂಗ್ ನಡೆಯ್ತುತ್ತಿರುವ ವೇಳೆ ಚಂದನ್ ಸೀರಿಯಲ್​ ತಂತ್ರಜ್ಞರ ಜೊತೆ ಕಿರಿಕ್ ಮಾಡಿಕೊಂಡಿದ್ದ ಕಾರಣ ಅವರ ಮೇಲೆ ಶೂಟಿಂಗ್ ತಂಡದಿಂದ ಹಲ್ಲೆ ನಡೆದಿದೆ.

ಇದೀಗ ಚಂದನ್ ಪತ್ನಿ ಮತ್ತು ನಟಿಯಾಗಿರುವ ಕವಿತಾ ಗೌಡ ಪತಿಯಮೇಲೆ ಆಗಿರುವ ಹಲ್ಲೆಯ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ್ದರು. ಈ ವೇಳೆಯಲ್ಲಿ ಅವರು “ಪತಿ, ನಟ ಚಂದನ್ ಮೇಲೆ ಆಗಿರುವ ಹಲ್ಲೆಗೆ ನಾನಂತೂ ನ್ಯಾಯ ಕೇಳುತ್ತೇನೆ. ಚಂದನ್ ಬರುತ್ತಾರೋ ಇಲ್ಲವೋ ಗೊತ್ತಿಲ್ಲ ಅದಕ್ಕಾಗಿ ನಾನು ಕಾಯುವುದಿಲ್ಲ. ನನ್ನ ಪತಿ ಮೇಲಿನ ಹಲ್ಲೆ ಎನ್ನುವುದಕ್ಕಿಂತ, ಒಬ್ಬ ಕಲಾವಿದನ ಮೇಲೆ ಆಗಿರುವ ಹಲ್ಲೆಗೆ ನಾನಂತೂ ನ್ಯಾಯ ಕೇಳುತ್ತೇನೆ” ಎಂದು ಹೇಳಿದ್ದಾರೆ. ಇದಲ್ಲದೆ ಈ ವಿಷಯ ನಿನ್ನೆಯಷ್ಟೇ ನನಗೆ ತಿಳಿಯಿತು ಎಂದು ತಿಳಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top