ನಟ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾದ ಸಕ್ಸಸ್ ನಲ್ಲಿ ಬ್ಯುಸಿ ಆಗಿದ್ದಾರೆ. ಇಷ್ಟೊಂದು ಬ್ಯುಸಿ ಷೆಡ್ಯೂಲ್ ಇದ್ದರು ಕೂಡ ತಮ್ಮ ವಿಶೇಷ ಅಭಿಮಾನಿಯನ್ನು ಭೇಟಿ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಪ್ರತಿಯೊಬ್ಬ ಸ್ಟಾರ್ ಸೆಲೆಬ್ರಿಟಿ ಯನ್ನು ಭೇಟಿ ಮಾಡಬೇಕೆಂದು ಅಭಿಮಾನಿಗಳಿಗೆ ಆಸೆ ಇರುತ್ತದೆ. ಅದರಂತೆ ವಿಶೇಷ ಅಭಿಮಾನಿಯೊಬ್ಬರಿಗೆ ಕಿಚ್ಚ ಸುದೀಪ್ ಅವರನ್ನು ಭೇಟಿಮಾಡಬೇಕೆಂಬ ಅಸೆ ಇತ್ತು. ಇದೀಗ ಕಿಚ್ಚ ಸುದೀಪ್ ಆ ಪುಟ್ಟ ಅಭಿಮಾನಿಯ ಆಸೆಯನ್ನು ಈಡೇರಿಸಿದ್ದಾರೆ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಪುಟ್ಟ ಕಂದಮ್ಮನಿಗೆ ತನ್ನ ನೆಚ್ಚಿನ ಹೀರೋ ಕಿಚ್ಚ ಸುದೀಪ್ ಅವರನ್ನು ನೋಡುವ ಅಸೆ ಇತ್ತು. ಇದರ ಕುರಿತು ಮಾಹಿತಿ ಪಡೆದ ಕಿಚ್ಚ ಕೊನೆಗೂ ಆ ಪುಟ್ಟ ಮಗುವಿಗೆ ತನ್ನ ದರ್ಶನದ ಭಾಗ್ಯವನ್ನು ನೀಡಿದ್ದಾರೆ. ಕಿಚ್ಚ ಸುದೀಪ್ ಅವರನ್ನು ನೋಡಿದ ಬಾಲಕ ಇದೀಗ ಸಕತ್ ಖುಷಿ ಯಾಗಿದ್ದಾನೆ.
ಈ ಬಾಲಕನ ಹೆಸರು ಆಜಾನ್ ಖಾನ್. ಈತ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ. ಈತನಿಗೆ ಕಿಚ್ಚ ಎಂದರೆ ಪಂಚಪ್ರಾಣ. ಹೀಗಾಗಿ ತಾನು ಒಂದು ಸಾರಿಯಾದರು ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಬೇಕೆಂಬ ಅಸೆ ಈ ಬಾಲಕನಿಗೆ ಇತ್ತು. ಕೊನೆಗೂ ಈ ಬಾಲಕನ ಅಸೆ ಈಡೇರಿತು. ವಿಕ್ರಾಂತ್ ರೋಣ ಸಿನಿಮಾದ ನಿರ್ದೇಶಕ ಜಾಕ್ ಮಂಜು ಅವರ ಸಹಾಯದಿಂದ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿದ್ದಾನೆ. ಭೇಟಿ ಮಾಡಿ ತನ್ನ ನೆಚ್ಚಿನ ನಟನ ಜೊತೆ ಫೋಟೋ ಕೂಡ ಕ್ಲಿಕ್ಕಿಸಿ ಸಂಭ್ರಮ ಪಟ್ಟಿದ್ದಾನೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
