“ಬಿಗ್ ಬಾಸ್”, “ಲಕ್ಷ್ಮಿ ಬಾರಮ್ಮ” ಖ್ಯಾತಿಯ ಚಂದನ್ ಅವರ ಮೇಲೆ ತೆಲುಗು ಧಾರಾವಾಹಿ ತಂಡದಿಂದ ಹಲ್ಲೆ ನಡೆದಿದೆ. ತೆಲುಗು ಧಾರಾವಾಹಿಯ ಶೂಟಿಂಗ್ ಸೆಟ್ ನಲ್ಲಿ ನಡೆದ ಗಲಾಟೆಯ ವಿಡಿಯೋ ಇದೀಗ ಎಲ್ಲಾ ಕಡೆ ಸಕತ್ ವೈರಲ್ ಆಗುತ್ತಿದೆ.
ಕನ್ನಡ ಕಿರುತರೆ ದಾರಾವಾಹಿಗಳಲ್ಲದೆ, ಇತರೆ ಭಾಷೆಯ ಧಾರಾವಾಹಿಗಳಲ್ಲಿ ಚಂದನ್ ನಟಿಸಿದ್ದಾರೆ. ಇತ್ತೀಚಿಗೆ ಅವರು ತೆಲುಗಿನ ‘ಸಾವಿತ್ರಮ್ಮ ಗಾರಿ ಅಬ್ಬಾಯಿ’ ಧಾರಾವಾಹಿಯಲ್ಲಿ ಭಾಗಿಯಾಗಿದ್ದರು. ಈ ಧಾರಾವಾಹಿಯ ಶೂಟಿಂಗ್ ನಡೆಯ್ತುತ್ತಿರುವ ವೇಳೆ ಚಂದನ್ ಸೀರಿಯಲ್ ತಂತ್ರಜ್ಞರ ಜೊತೆ ಕಿರಿಕ್ ಮಾಡಿಕೊಂಡಿದ್ದ ಕಾರಣ ಅವರ ಮೇಲೆ ಶೂಟಿಂಗ್ ತಂಡದಿಂದ ಹಲ್ಲೆ ನಡೆದಿದೆ.
ಅಷ್ಟಕ್ಕೂ ಶೂಟಿಂಗ್ ಸೆಟ್ ನಲ್ಲಿ ನಡೆದದ್ದೇನು?
ಚಂದನ್ ಕುಮಾರ್ ಪ್ರಕಾರ ರಂಜಿತ್ ಎಂಬ ವ್ಯಕ್ತಿ ಚಂದನ್ ಅವರನ್ನು ಪದೇ ಪದೇ ಕರೆಯುತ್ತಿದ್ದರು. ಅವಾಗ ನಾನು ನನಗೆ ಅರ್ಧ ಗಂಟೆ ರೆಸ್ಟ್ ಬೇಕು ಎಂದು ಹೇಳಿದೆ. ಸ್ವಲ್ಪ ಸಮಯದ ನಂತರ ಆ ವ್ಯಕ್ತಿ 5 ನಿಮಿಷ ಎಂದು ಅರ್ಧ ಗಂಟೆ ಮಲಗಿದ್ದಾನಲ್ಲೋ ಅವನು’ ಎಂದು ಕೂಗಿದ. ನಾನು ಅವನನ್ನು ಕರೆದು ಏನಾಯ್ತು ಎಂದು ಕೇಳಿದ. ಅದಕ್ಕೆ ಆತ ಡೈರೆಕ್ಟರ್ ಕರೀತಿದ್ದಾರೆ ಬರಬೇಕೆಂದು ಹೇಳಿದ. ನಾನು ಸುಮ್ಮನೆ ಹೋಗಪ್ಪ ಎಂದು ಆತನನ್ನು ತಳ್ಳಿದೆ. ಆದರೆ ಆತ ಡೈರೆಕ್ಟರ್ ಬಳಿ ಬೇರೇನೋ ಹೇಳಿ ಕಣ್ಣೀರು ಹಾಕಿದ್ದಾನೆ.
ನಂತರ ಎಲ್ಲರು ಬಂದು ಗಲಾಟೆ ಮಾಡಿದರು. ನಾನು ಶೂಟಿಂಗ್ ನಡೆಯೋದಿಲ್ಲ ಎಂದರೆ ಹೊರಡುವೆ ಎಂದು ಹೇಳಿದೆ. ಆಗ ಎಲ್ಲರು ಬಂದು ಅಡ್ಡಗಟ್ಟಿದರು. 3 ಗಂಟೆವರೆಗೂ ನೀವು ಎಲ್ಲೂ ಹೋಗಬಾರದೆಂದು ಹೇಳಿದರು. ಇದಾದ ನಂತರ ನಿರ್ದೇಶಕ ಸಂಘದವರು ಎಂದು ಕೆಲವರು ಬಂದರು. ನನ್ನ ಪರವಾಗಿ ಅಲ್ಲಿದ್ದವರಲ್ಲಿ ಯಾರು ಮಾತನಾಡಲಿಲ್ಲ. ನಾನು ಬೆಂಗಳೂರಿನಿಂದ ಬಂದಿದ್ದೇನೆ ಎಂಬ ಕಾರಣಕ್ಕಾಗಿ ಈ ರೀತಿ ಮಾಡಿದ್ದಾರೆ. ಹೊಡೆದು ಅವಮಾನ ಮಾಡಬೇಕು ಎಂಬ ಕಾರಣಕ್ಕಾಗಿ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು.
ತೆಲುಗು ಕಿರುತರೆಯಿಂದ ಹೊರನಡೆದ ಚಂದನ್!
‘ತೆಲುಗು ಜನತೆ ಕೂಡ ಇದನ್ನು ಒಪ್ಪಲ್ಲ. ನನ್ನ ತಾಯಿ ಭಾಷೆ ಕನ್ನಡ. ತೆಲುಗು ದೊಡ್ಡಮ್ಮ, ತಮಿಳು ಚಿಕ್ಕಮ್ಮ ಅಂತ ಅಂದುಕೊಂಡವನು ನಾನು. ಎಲ್ಲರೂ ಅಮ್ಮಂದಿರೇ. ಅವರು ಮಾಡಿರೋದು ಅನ್ಯಾಯ. ಧಾರಾವಾಹಿ ನಿರ್ದೇಶಕರು ಈಗಲೂ ನನ್ನ ಜತೆ ಚೆನ್ನಾಗಿದ್ದಾರೆ. ನಾನು ಧಾರಾವಾಹಿಯಿಂದ ಹೊರಬರುತ್ತಿದ್ದೇನೆ’ ಎಂದು ಚಂದನ್ ತಿಳಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
