ನಟ ಹ್ಯಾಟ್ರಿಕ್ ಹೀರೋ ಶಿವ್ ರಾಜ್ ಕುಮಾರ್ ಇತ್ತೀಚಿಗೆ 60 ನೇ ವಸಂತಕ್ಕೆ ಕಾಲಿಟ್ಟರು. ಆದರೆ ತನ್ನ ಮುದ್ದಾದ ತಮ್ಮ ಅಪ್ಪು ಅಗಲಿಕೆಯ ನೋವಿನಲ್ಲಿದ್ದ ಶಿವಣ್ಣ ತಮ್ಮ ಹುಟ್ಟು ಹಬ್ಬವನ್ನು ಆಚರಿಸಲಿಲ್ಲ. ಆದರೆ ಈ ಬಾರಿ ಶಿವಣ್ಣನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಮಾಡಬೇಕೆಂದು ಅಪ್ಪು ಅಸೆ ಪಟ್ಟಿದ್ದರಂತೆ. ಆದರೆ ಅವರ ಅಸೆ ಪೂರ್ತಿ ಆಗೋ ಮುಂಚೆಯೇ ಅವರು ನಮ್ಮನ್ನು ದೈಹಿಕವಾಗಿ ಅಗಲಿ ಹೊರೆಟು ಹೋದರು. ಆದರೆ ಇದೀಗ ಅಪ್ಪು ಅವರ ಆಸೆಯನ್ನು ಸಾಕಾರಗೊಳಿಸುವ ಕನಸಿಗೆ ಮತ್ತೆ ಜೀವ ತುಂಬಿದಂತಾಗಿದೆ.
ಅಣ್ಣ ಶಿವಣ್ಣನ ಹುಟ್ಟುಹಬ್ಬವನ್ನು ಪ್ಯಾಲೇಸ್ ಗ್ರೌಂಡ್ ನಲ್ಲಿ ದೊಡ್ಡದಾಗಿ ಮಾಡಬೇಕು. ಭಾರತ ಸಿನಿಮಾರಂಗದ ಸೂಪರ್ ಸ್ಟಾರ್ ಗಳೆಲ್ಲಾ ಇದರಲ್ಲಿ ಪಾಲ್ಗೊಳ್ಳಬೇಕು. ಅಂಬಿ ಸಂಭ್ರಮದಂತೆ ಶಿವಣ್ಣ ಸಂಭ್ರಮ ನಡೆಸಬೇಕೆಂದು ಅಪ್ಪು ಆಸೆಪಟ್ಟಿದ್ದರು. ಇದೀಗ ಅಪ್ಪು ಆಸೆಯನ್ನು ಈಡೇರಿಸಲು ಕರ್ನಾಟಕ ಫಿಲಂ ಚೇಂಬರ್ ರೆಡಿಯಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ. ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಭಾಮಾ ಹರೀಶ್ ಅವರ ಸಾರಥ್ಯದಲ್ಲಿ ಇಂತದ್ದೊಂದು ಪ್ಲಾನ್ ನಡೆಯುತ್ತಿದ್ದು, ಇದಕ್ಕಾಗಿ ತಯಾರಿ ಕೂಡ ನಡೆಯುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.
ಆದರೆ ಈ ಬಾರಿ ಶಿವಣ್ಣ ಮತ್ತು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಹೆಸರಿನಿಂದ ಉತ್ಸವ ನಡೆಸಬೇಕೆಂದು ಚರ್ಚೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಇಬ್ಬರು ಸಿನಿ ರಂಗದಲ್ಲಿ ಗಣ್ಯರು, ಸಮಾನ ವಯಸ್ಕರು, ಅದಕ್ಕಿಂತ ಹೆಚ್ಚಾಗಿ ಒಳ್ಳೆ ಸ್ನೇಹಿತರು ಕೂಡ. ಆದ್ದರಿಂದ ಇಬ್ಬರಿಗೂ ಸಮಾನ ಗೌರವ ಸಲ್ಲಿಸುವ ಉದ್ದೇಶದಿಂದ ಇಬ್ಬರ ಹೆಸರಿನಲ್ಲಿ ಕಾರ್ಯಕ್ರಮ ಮಾಡಬೇಕೆಂದು ಸಿನಿಮಾ ಮಂದಿ ನಿರ್ಧರಿಸಿದ್ದಾರೆ. ಈಗಾಗಿ ಅಪ್ಪು ಅವರ ಆಸೆಯನ್ನು ಈಡೇರಿಸಲು ಕರ್ನಾಟಕ ಫಿಲಂ ಚೇಂಬರ್ ರೆಡಿ ಆಗಿದೆ ಎಂದು ಹೇಳಬಹುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
