ಬಿಗ್ ಬಾಸ್ ಕಾರ್ಯಕ್ರಮ ಶುರುವಾಗಿ 4 ದಿನಗಳು ಕಳೆದವು. ಮನೆಯಲ್ಲಿ ಪ್ರತಿ ದಿನ ಒಂದಲ್ಲ ಒಂದು ಸುದ್ದಿ ನಡೆಯುತ್ತಾನೆ ಇದೆ. ಒಂದು ದಿನ ಜಗಳ ವಾದರೆ ಮತ್ತೊಂದು ದಿನ ಪ್ರೇಮ ಪ್ರೀತಿ ಹೀಗೆ ಹಲವಾರು ವಿಷಯಗಳಲ್ಲಿ ಬಿಗ್ ಬಾಸ್ ಮನೆ ಸುದ್ದಿ ಯಾಗುತ್ತಿದೆ. ಇದೀಗ ಆರ್ಯವರ್ಧನ್ ಗುರೂಜಿ ಮತ್ತು ನಟ ಉದಯ್ ಸೂರ್ಯ ಇವರಿಬ್ಬರ ಮಧ್ಯೆ ಜಗಳ ಶುರುವಾಗಿದ್ದು, ಇದು ತಾರಕಕ್ಕೆ ಏರಿದೆ.
ಬಿಗ್ ಬಾಸ್ ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್ ಗುರೂಜಿ ಮನೆ ಒಳಗೆ ಪ್ರವೇಶಿಸಿದರು. ಇಷ್ಟು ದಿನ ಒಂದಲ್ಲ ಒಂದು ವಿಷಯದಲ್ಲಿ ಗುರೂಜಿ ತಕರಾರು ತೆಗೆಯುತ್ತಿದ್ದರು. ಆದರೆ ಇದೀಗ ಇಷ್ಟಕ್ಕೆ ಸುಮ್ಮನಿರದ ಗುರೂಜಿ ನಟ ಉದಯ್ ವಿರುದ್ಧ ಜಗಳಕ್ಕೆ ಇಳಿದಿದ್ದು, ಇದು ಭಯಂಕರವಾಗಿರುವುದನ್ನು ನಾವು ಪ್ರೋಮೋದಲ್ಲಿ ಕಾಣಬಹುದು.
ಜಗಳಕ್ಕೆ ಕಾರಣವೇನು?
ಬಿಗ್ ಬಾಸ್ ಮನೆ ಮಂದಿಗೆ ಒಂದು ಟಾಸ್ಕ್ ನೀಡಿದ್ದರು. ಅದೇನೆಂದರೆ ಪ್ರತಿ ತಂಡದ ಒಂದು ಸದಸ್ಯ ಸ್ಟೂಲ್ ಮೇಲೆ ನಿಂತು ತಿರುಗುವ ಕಂಬಿಯಿಂದ ಪಾರಾಗಬೇಕು. ಟಾಸ್ಕ್ ಶುರುವಾಗಿ ಸ್ಪರ್ಧಿಗಳು ಆಟವಾಡುತ್ತಿರುವಾಗ ಗುರೂಜಿ ನನ್ನನು ತಳ್ಳಿದ್ದಾರೆ ಎಂದು ಉದಯ್ ದೂಷಿಸುತ್ತಾರೆ. ಇದರಿಂದ ಉದಯ್ ನೆಲದ ಮೇಲೆ ಬಿದ್ದು ನೋವನ್ನು ಅನುಭವಿಸುತ್ತಾರೆ. ಬಳಿಕ ಎದ್ದು ಗುರೂಜಿ ಅವರ ವಿರುದ್ಧ ವಾಗ್ವಾದ ನಡೆಸುತ್ತಾರೆ. ಇಬ್ಬರು ದಿಂಬಿನಲ್ಲಿ ಜಗಳವಾಡಿ ಪರಸ್ಪರ ತಳ್ಳಿಕೊಳ್ಳುತ್ತಾರೆ. ಇದರಿಂದ ಕೋಪಗೊಂಡ ಗುರೂಜಿ ‘ ನಾನು ತಳ್ಳಿದರೆ ನೀನು 25 ಅಡಿ ದೂರ ಹೋಗಿ ಬೀಳ್ತೀಯಾ’ ಎಂದು ಉದಯ್ ಗೆ ಎಚ್ಚರಿಕೆ ನೀಡುತ್ತಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
