fbpx
ಸಮಾಚಾರ

ಬಿಗ್ ಬಾಸ್ ಮನೆಯಲ್ಲಿ ಜಯಶ್ರೀ ಮತ್ತು ನಂದು ನಡುವೆ ನಡೆಯಿತು ಜಗಳ! ಬೇಸರದಲ್ಲಿದ್ದ ಜಯಶ್ರೀ ಕಣ್ಣೀರು ಒರೆಸಿದ ಸೋನು

ಬಿಗ್ ಬಾಸ್ ಮನೆಯಲ್ಲಿ ಜಗಳಗಳು ಸರ್ವೇ ಸಾಮಾನ್ಯಾವಾಗಿದೆ. ಒಂದಲ್ಲ ಒಂದು ಕಾರಣಕ್ಕೆ ಮನೆಯಲ್ಲಿ ಜಗಳಗಳು ನಡೆಯುತ್ತಿದೆ. ಅದರಂತೆ ಟಾಸ್ಕ್ ವಿಚಾರದಲ್ಲಿ ನಂದು ಮತ್ತು ಜಯಶ್ರೀ ನಡುವೆ ಜಗಳ ಶುರುವಾಗಿ ಜಯಶ್ರೀ ಬೇಸರದಲಿದ್ದರು. ಈ ವೇಳೆ ಬೇಸರದಲ್ಲಿದ್ದ ಜಯಶ್ರೀ ಅವರನ್ನು ಸೋನು ಸಮಾಧಾನ ಪಡಿಸಿದರು.

ಬಿಗ್ ಬಾಸ್ ಮನೆಯಲ್ಲಿ ತಾವು ಪ್ರತಿ ಹಂತದಲ್ಲೂ ಸೇಫ್ ಆಗಬೇಕಾದರೆ ಟಾಸ್ಕ್ ಗಳಲ್ಲಿ ಭಾಗವಹಸಿ ತಮ್ಮ ಸಾಮರ್ಥ್ಯವನ್ನು ತೋರಿಸಬೇಕು. ಇದೆ ಕಾರಣಕ್ಕಾಗಿ ಜಯಶ್ರೀ ಕೂಡ ಟಾಸ್ಕ್ ನಲ್ಲಿ ಭಾಗವಹಿಸಬೇಕೆಂಬ ಆಸೆಯನ್ನು ವ್ಯಕ್ತಪಡಿಸಿದರು. ಆದರೆ ಇವರ ಅನಿಸಿಕೆಗಳನ್ನು ಪರಿಗಣಿಸದೆ ನಂದು ತಮ್ಮ ತಂಡದಲ್ಲಿ ನಾನು (ನಂದು), ಜಸ್ವಂತ್ ಮತ್ತು ಚೈತ್ರ ಭಾಗವಹಿಸುತ್ತಿದ್ದೇವೆ ಎಂದು ಹೇಳಿದರು. ಇದರಿಂದ ಬೇಸರಗೊಂಡ ಜಯಶ್ರೀ ನಾನು ಟಾಸ್ಕ್ ಗಳಲ್ಲಿ ಭಾಗವಹಿಸುವುದಿಲ್ಲ ಎಂದು ಜಗಳವಾಡಲು ಶುರುಮಾಡಿದರು.

ಈ ವೇಳೆ ಮಾತು ಮುಂದುವರಿಸಿದ ಜಯಶ್ರೀ ” ಎಲ್ಲರೂ ನಿಮ್ಮದೇ ನಿರ್ಧಾರಗಳನ್ನು ತೆಗೆದುಕೊಂಡರೆ, ಟೀಮ್ ಅಂತ ಏನಿಕೆ ಇರೋದು, ಎಲ್ಲಾ ನಿರ್ಧಾರ ನೀವೇ ತೆಗೆದುಕೊಳ್ಳುತ್ತಿದ್ದೀರಾ, ನಾನು ಈ ಟೀಮ್ ನಲ್ಲಿ ಆಟವಾಡುವುದಿಲ್ಲ” ಎಂದು ತಮ್ಮ ಕೋಪವನ್ನು ನಂದು ಅವರ ಮೇಲೆ ತೋರಿಸಿದರು. ಇದಾದ ನಂತರ ನಂದು ಮುಂದಿನ ಟಾಸ್ಕ್ ಗಳಲ್ಲಿ ನಿನಗೆ ಆಡಲು ಅವಕಾಶ ಕೊಡುತ್ತೇನೆ ಎಂದು ಹೇಳಿದರು ಕೂಡ ಜಯಶ್ರೀ ಇವರ ಮಾತನ್ನು ಕೇಳಲಿಲ್ಲ. ಕೊನೆಗೆ ಬೇಸರದಲ್ಲಿದ್ದ ಜಯಶ್ರೀ ಅವರಿಗೆ ಸೋನು ಕಣ್ಣೀರು ಒರೆಸಿ ಸಮಾಧಾನ ತಿಳಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top