fbpx
ಸಮಾಚಾರ

ಬಿಗ್ ಬಾಸ್ ಬಲಿಷ್ಠ ಸ್ಪರ್ಧಿ ಅರ್ಜುನ್ ರಮೇಶ್ ಔಟ್: ಆದರೆ ಎಲಿಮಿನೇಟ್ ಅಲ್ಲ; ಕಣ್ಣೀರಿಟ್ಟ ಸ್ಪರ್ಧಿಗಳು

ಕನ್ನಡ ಕಿರುತೆರೆ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮೊದಲ OTT ಸೀಸನ್ ನಲ್ಲಿ ಆಟ ಈಗ ಕಾವು ಪಡೆದುಕೊಳ್ಳುತ್ತಿದೆ. ಬಿಗ್ ಬಾಸ್ ಮನೆಯಿಂದ ಮೊದಲ ವಾರ ಕಿರಣ್ ಯೋಗೀಶ್ವರ್ ಎಲಿಮಿನೇಟ್ ಆಗಿದ್ದರು. ಅಂತೆಯೇ ಈ ವಾರ ಎಲಿಮಿನೇಟ್ ಆಗುವವರು ಯಾರು ಎಂಬ ಕುತೂಹಲ ಮೂಡಿತ್ತು. ಸ್ಪೂರ್ತಿ ಗೌಡ ಅಥವಾ ಅಕ್ಷತಾ ಕುಕ್ಕಿ ಔಟ್ ಆಗುತ್ತಾರೆ ಎಂದು ಊಹಿಸಲಾಗಿತ್ತು. ಆದರೆ ಊಹೆಗೂ ನಿಲುಕದಂತಹ ಘಟನೆಯೊಂದು ಬಿಗ್ ಬಾಸ್ ಮನೆಯಲ್ಲಿ ನಡೆದಿದೆ. ಈ ವಾರ ಬಿಗ್ ಬಾಸ್ ಮನೆಯಿಂದ ಅರ್ಜುನ್ ರಮೇಶ್ ಔಟ್ ಆಗಿದ್ದಾರೆ.

ಅರ್ಜುನ್ ರಮೇಶ್ ಅವರು ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಅತ್ಯಂತ ಬಲಿಷ್ಠ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಅಂತಯೇ ಮೊದಲ ವಾರದ ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ಗೆದ್ದು ಕ್ಯಾಪ್ಟನ್ ಕೂಡ ಆಗಿದ್ದರು. ಮನೆ ಹೊಳಗು ಸಹ ಅರ್ಜುನ್ ರಮೇಶ್ ಎಲ್ಲರ ಜೊತೆ ಸ್ನೇಹ ಸಂಪಾದಿಸಿದ್ದರು. ಆದರೆ ದುರದೃಷ್ಟವಶಾತ್ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಇದಕ್ಕೆ ಕಾರಣವಾಗಿದ್ದು ಅವರ ಗಾಯ.

ಮೊದಲ ವಾರದ ಕ್ಯಾಪ್ಟನ್ಸಿ ಟಾಸ್ಕ್ ವೇಳೆ ಆಟದಲ್ಲಿ ಕೈಗೆ ಏಟು ಮಾಡಿಕೊಂಡು ನೋವಿನಿಂದಲೇ ಇಷ್ಟು ದಿನ ಕಳೆದಿದ್ದಾರೆ. ನೋವು ನಿವಾರಣೆ ಆಗದೇ ಇರುವ ಕಾರಣಕ್ಕಾಗಿ ಅವರು ಅನಿವಾರ್ಯವಾಗಿ ಮನೆಯಿಂದ ಆಚೆ ಬರಬೇಕಾಗಿದೆ. ಅರ್ಜುನ್  ರಮೇಶ್ ಅವರನ್ನು ಎಲಿಮಿನೇಟ್ ಮಾಡದೇ ನೇರವಾಗಿಯೇ ಮನೆಯಿಂದ ಆಚೆ ಕಳುಹಿಸಲಾಗಿದೆ. ಹೀಗಾಗಿ ಇಡೀ ಮನೆಯಲ್ಲಿ ಭಾವುಕತೆ ತುಂಬಿತ್ತು. ಅರ್ಜುನ್ ರಮೇಶ್ ಅವರು ಮನೆಯಿಂದ ಹೊರ ಹೋಗುವಾಗ ಕೆಲ ಸ್ಪರ್ಧಿಗಳು ಕಣ್ಣೀರು ಸಹ ಹಾಕಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top