ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಸುಪುತ್ರ ಮನೋರಂಜನ್ ಅವರು ನೆನ್ನೆಯಷ್ಟೇ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 34 ವರ್ಷದ ಮನೋರಂಜನ್ ಅವರ ವಿವಾಹವು ಸಂಗೀತಾ ದೀಪಕ್ ಜೊತೆ ನಡೆದಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಮನೋರಂಜನ್ ರವಿಚಂದ್ರನ್-ಸಂಗೀತಾ ವಿವಾಹ ನಡೆದಿದೆ. ಚಿತ್ರರಂಗದ ಅನೇಕ ಗಣ್ಯರು ಆಗಮಿಸಿ ಶುಭ ಹಾರೈಸಿದ್ದಾರೆ.
ಮೊನ್ನೆ ಆರತಕ್ಷತೆ ನಡೆದಿದ್ದು ನೆನ್ನೆ ಮನು ರವಿಚಂದ್ರನ್ ಅವರು ಸಂಗೀತಾಗೆ ಮಾಂಗಲ್ಯಧಾರಣೆ ಮಾಡಿದ್ದಾರೆ. ಎರಡು ಕುಟುಂಬಸ್ಥರು ಈ ಮದುವೆಗೆ ಸಾಕ್ಷಿಯಾಗಿದ್ದಾರೆ. ನಿನ್ನೆ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಡಾ ಶಿವರಾಜ್ಕುಮಾರ್, ಅಕುಲ್ ಬಾಲಾಜಿ, ಹಂಸಲೇಖ ದಂಪತಿ, ರಾಘವೇಂದ್ರ ರಾಜ್ಕುಮಾರ್ ದಂಪತಿ ಭಾಗವಹಿಸಿದ್ದರು.
ಇನ್ನೂ ನಾಳೆ, ಸೋಮವಾರ ಆಗಸ್ಟ್ 22ರಂದು ನಂದಿ ಬೆಟ್ಟದ ಬಳಿ ಇರುವ ಖಾಸಗಿ ಹೋಟೆಲ್ ನಲ್ಲಿ ಅದ್ದೂರಿಯಾದ ಆರತಕ್ಷತೆ ನಡೆಯಲಿದೆ. ಈ ಆರತಕ್ಷತೆ ಸಮಾರಂಭಕ್ಕೆ ಸಿನಿಮಾ ನಟರು, ರಾಜಕೀಯ ಗಣ್ಯರು ಹಾಗೂ ಕುಟುಂಬದವರಿಗಷ್ಟೇ ಪ್ರವೇಶ ನೀಡಲಾಗುವುದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
