ಬಿಗ್ ಬಾಸ್ ಮನೆ ದಿನೆ ದಿನೆ ಹಲವಾರು ರೋಚಕತೆಯಿಂದ ಕೂಡಿದೆ. 16 ಸ್ಪರ್ಧಿಗಳ ಜೊತೆ ಶುರುವಾದ ಸ್ಪರ್ಧೆ ಇದೀಗ 11 ಜನಕ್ಕೆ ಬಂದು ನಿಂತಿದೆ. ಪ್ರತಿ ವಾರದಂತೆ ಈ ವಾರವೂ ಸಹ ಕಿಚ್ಚ ಮನೆಯವರ ಸಮಸ್ಯೆಯನ್ನು ಆಲಿಸಿ ಅವರಿಗೆ ಸೂಚನೆಯನ್ನು ನೀಡಿದರು. ಇದೆಲ್ಲದರ ಮದ್ಯೆ ಈ ಬಾರಿಯೂ ಸಹ ಸೋನು ಅವರನ್ನು ಕಿಚ್ಚ ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಗ್ ಬಾಸ್ ಮನೆಯ ಎರಡನೆಯ ಎಲಿಮಿನೇಷನ್ ಮುಗಿದಿದ್ದು, ಮನೆಯಿಂದ ಸ್ಪೂರ್ತಿ ಗೌಡ ಎಲಿಮಿನೇಟ್ ಆಗಿದ್ದಾರೆ. ಇದಾದ ಬಳಿಕ ಮನೆಯ ಸ್ಪರ್ಧಿಗಳನ್ನು ಮಾತನಾಡಿಸಿದ ಕಿಚ್ಚ ಸೋನು ಮತ್ತು ಸಾನ್ಯ ಮಾಡಿದ ಒಂದು ಟಾಸ್ಕ್ ಅನ್ನು ಮತ್ತೆ ರಿ-ಕ್ರಿಯೇಟ್ ಮಾಡಿದರು. ಬಿಗ್ ಬಾಸ್ ನೀಡಿದ ಟಾಸ್ಕ್ ಏನೆಂದರೆ ಒಬ್ಬರ ಕಿವಿಗೆ ಹೆಡ್ಫೋನ್ ಹಾಕಿ ಸಾಂಗ್ ಹಾಕಲಾಗುತ್ತದೆ. ಎದುರು ಇದ್ದವರು ಬಿಗ್ ಬಾಸ್ ನೀಡಿದ ಲೈನ್ನ ಜೋರಾಗಿ ಹೇಳಬೇಕು. ಹೆಡ್ಫೋನ್ ಹಾಕಿಕೊಂಡವರು ಇದನ್ನು ಗೆಸ್ ಮಾಡಬೇಕು.
ಬಿಗ್ ಬಾಸ್ ನೀಡಿದ ಈ ಟಾಸ್ಕ್ ನಲ್ಲಿ ಸೋನು ಮತ್ತು ಸಾನ್ಯ ಭಾಗವಹಿಸಿದ್ದರು. ಆದರೆ ಈ ಟಾಸ್ಕ್ ನಲ್ಲಿ ಸೋನು ಅವರ ತಪ್ಪಿನಿಂದ ಸೋಲನ್ನು ಅನುಭವಿಸಬೇಕಾಗಿತ್ತು. ಇದಾದ ಬಳಿಕ ಸಾನ್ಯ ಕಣ್ಣೀರು ಹಾಕಿದರು. ಆದರೆ ಈ ಟಾಸ್ಕ್ ನಲ್ಲಿ ಸೋನು ತನ್ನ ತಪ್ಪನ್ನು ಒಪ್ಪಿಕೊಂಡಿರಲಿಲ್ಲ. ಬದಲಾಗಿ ಇದಕ್ಕೆ ಸಾನ್ಯ ಅವರೇ ಕಾರಣ ಎಂದು ಹೇಳುತ್ತಿದ್ದರು. ಇದನ್ನು ಗಮನಿಸಿದ ಸುದೀಪ್ ನೀವು ಕೊಟ್ಟ ಹೇಳಿಕೆ ಸರಿಯಲ್ಲ, ನಿಮ್ಮ ತಪ್ಪನ್ನು ಮತ್ತೊಬ್ಬರ ಮೇಲೆ ಹಾಕುವುದು ಸರಿಯಲ್ಲ ಎಂದು ಹೇಳಿದರು. ಇಷ್ಟೆಲ್ಲಾ ಚರ್ಚೆಗಳ ಬಳಿಕ ಕಿಚ್ಚ ಸೋಲನ್ನು ಒಪ್ಪಿಕೊಳ್ಳಲು ಭಯ ಏಕೆ ನಿಜ ಹೇಳಿ ಯಾರದ್ದು ತಪ್ಪು ಎಂದು ಕೇಳಿದಾಗ ಸೋನು ತನ್ನದೇ ತಪ್ಪು ಎಂದು ಮೌನದಿಂದ ಉತ್ತರಿಸಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
