ಬಿಗ್ ಬಾಸ್ ಮನೆ ದಿನೆ ದಿನೆ ಹಲವಾರು ರೋಚಕತೆಯಿಂದ ಕೂಡಿದೆ. 16 ಸ್ಪರ್ಧಿಗಳ ಜೊತೆ ಶುರುವಾದ ಸ್ಪರ್ಧೆ ಇದೀಗ 11 ಜನಕ್ಕೆ ಬಂದು ನಿಂತಿದೆ. ಇವೆಲ್ಲದರ ನಡುವೆ ಜಸ್ವಂತ್ ನಡವಳಿಕೆ ಕಿಚ್ಚನಿಗೆ ಬೇಸರ ತಂದಿದ್ದು, ಇದರ ಕುರಿತು ಪಂಚಾಯತಿಯಲ್ಲಿ ಖಡಕ್ ಆಗಿ ವಾರ್ನ್ ಮಾಡಿದ್ದಾರೆ.
ಪ್ರತಿ ವಾರದಂತೆ ಈ ವಾರವೂ ಸಹ ಕಿಚ್ಚ ಪಂಚಾಯತಿ ನಡೆಸಿ ಮನೆಯವರ ಸಮಸ್ಯೆಗಳು, ತಪ್ಪುಗಳು ಪ್ರತಿಯೊಂದನ್ನು ವಿಚಾರಿಸಿದರು. ಇವೆಲ್ಲದರ ಮಧ್ಯೆ ಜಸ್ವಂತ್ ಅವರ ನಡವಳಿಕೆ ಕಿಚ್ಚನಿಗೆ ಬೇಸರ ತಂದಿದೆ. ಏಕೆಂದರೆ ಆರಂಭದಲ್ಲಿ ಜಸ್ವಂತ್ ಮತ್ತು ನಂದು ಒಟ್ಟಿಗೆ ದೊಡ್ಮನೆಯನ್ನು ಪ್ರವೇಶಿಸಿದರು. ಆದರೆ ಇವರಿಬ್ಬರು ಜೊತೆ ಜೊತೆಯಾಗಿ ಆಡದೆ ಪ್ರತ್ಯೇಕವಾಗಿ ಆಡಬೇಕೆಂದು ಬಿಗ್ ಬಾಸ್ ತಿಳಿಸಿದರು. ಆದರೆ ಬಿಗ್ ಬಾಸ್ ಆದೇಶವನ್ನು ಜಸ್ವಂತ್ ಪಾಲಿಸಿಲ್ಲ ಎಂಬುದು ಕಿಚ್ಚನಿಗೆ ಕಂಡಿತು.
ಇದಕ್ಕೆ ಉದಾಹರಣೆ ಎಂದರೆ ಪ್ರತಿ ವಾರ ಬಿಗ್ ಬಾಸ್ ಮನೆಯಿಂದ ಒಬ್ಬ ಸ್ಪರ್ದಿಯನ್ನು ಮನೆ ಮಂದಿ ನಾಮಿನೇಟ್ ಮಾಡಬೇಕು. ಅದರಂತೆ ಪ್ರತಿ ಸ್ಪರ್ದಿಗಳು ಒಬ್ಬೊಬ್ಬ ಸದಸ್ಯನನ್ನು ನಾಮಿನೇಟ್ ಮಾಡಿದರು. ಇದು ಸ್ಪರ್ಧಿಗಳ ವೈಯಕ್ತಿಕ ಆಯ್ಕೆ ಆಗಿರಬೇಕು. ಆದರೆ ಜಸ್ವಂತ್ ಹಾಗೆ ಮಾಡದೆ ತಮ್ಮ ಗರ್ಲ್ ಫ್ರೆಂಡ್ ನಂದು ಅವರ ಜೊತೆ ಚರ್ಚಿಸಿ ನಾಮಿನೇಟ್ ಮಾಡಿದರು. ಇದು ಬಿಗ್ ಬಾಸ್ ನಿಯಮ ಉಲ್ಲಂಘನೆ ಮಾಡಿದಂತೆ ಆಯಿತು. ಇದು ಕಿಚ್ಚನ ಕಣ್ಣಿಗೆ ಬಿದ್ದಿದ್ದು, ಇದರ ಕುರಿತು ಪಂಚಾಯತಿಯಲ್ಲಿ ಮಾತನಾಡಿದರು.
ಮುಂದಿನ ಬಾರಿ ಈ ರೀತಿ ಮಾಡಿದರೆ ನಿಮಗೆ ಬಾಗಿಲು ತೋರಿಸಬೇಕಾಗುತ್ತದೆ. ನೀವಿಬ್ಬರು ಬೇರೆ ಬೇರೆ ಸ್ಪರ್ಧಿಗಳಾಗಿ ಆಡ್ತಾ ಇದೀರಿ. ಹಾಗಿದ್ದ ಮೇಲೆ ಚರ್ಚೆ ಮಾಡ್ಕೊಂಡು ನಾಮಿನೇಟ್ ಮಾಡುವಂತಿಲ್ಲ’ ಎಂದು ಕಿಚ್ಚ ಸುದೀಪ್ ಖಡಕ್ ಆಗಿ ವಾರ್ನ್ ಮಾಡಿದರು. ಹೀಗಾಗಿ ಕಿಚ್ಚನ ಮಾತಿಗೆ ಜಸ್ವಂತ್ ಎಷ್ಟು ಬೆಲೆ ಕೊಡುತ್ತಾರೆ ಕಾದು ನೋಡಬೇಕು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
