fbpx
ಸಮಾಚಾರ

ಅನಿರುದ್ಧ್ ಕಿರಿಕ್ ಬಗ್ಗೆ ಮೌನ ಮುರಿದ ಮೇಘಾ ಶೆಟ್ಟಿ… ಹೇಳಿದ್ದೇನು ಗೊತ್ತಾ..?

ಕಳೆದ ಕೆಲವು ದಿನಗಳಿಂದ ಜೊತೆ ಜೊತೆ ಸೀರಿಯಲ್ ಗಳಲ್ಲಿ ಆದ ಬದಲಾವಣೆಗಳ ಕುರಿತು ಜನ ಮಾತನಾಡುತ್ತಿದ್ದಾರೆ. ಅದರಲ್ಲೂ ಸೀರಿಯಲ್ ನಾಯಕರಾದ ಅನಿರುಧ್ ಅವರ ಕುರಿತು ಹಲವಾರು ಚರ್ಚೆಗಳು ಆಗುತ್ತಿದೆ. ಇಷ್ಟೆಲ್ಲಾ ಚರ್ಚೆಗಳ ಮಧ್ಯೆ ಇದೀಗ ಮೊದಲನೇ ಬಾರಿಗೆ ಸೀರಿಯಲ್ ನಾಯಕಿ ಅನು ಮಾಧ್ಯಮದ ಮುಂದೆ ಪ್ರತಿಕ್ರಿಯೆ ನೀಡಿದ್ದಾರೆ.

ಸುಮಾರು ಎರಡು ದಿನಗಳಿಂದ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆದ ಜಗಳದ ಕುರಿತು ಹಲವಾರು ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆ ಮಾಹಿತಿಗಳು ಲಭ್ಯವಾಗಿದ್ದರು ಕೂಡ ಅನು (ಮೇಘನಾ ಶೆಟ್ಟಿ) ಮಾತ್ರ 2 ದಿನದಿಂದ ನಾನು ನ್ಯೂಸ್​ ನೋಡಿಲ್ಲ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ವಿಷಯ ತಿಳಿದ ಬಳಿಕ ಸ್ಪಷ್ಟನೆ ನೀಡಿದ ಅನು ಸೀರಿಯಲ್ ಸೆಟ್​ ನಲ್ಲಿ ಗಲಾಟೆ ಆಗಿದ್ದು ನಿಜ. ಸಣ್ಣ ಪುಟ್ಟ ಗಲಾಟೆಗಳು ಸಹ ನಡೆಯುತ್ತಿರುತ್ತೆ. ಇಷ್ಟು ದಿನ ಸಂಧಾನದ ಮೂಲಕ ಎಲ್ಲವೂ ಸರಿ ಹೋಗಿದೆ. ಈ ವಿಚಾರದಲ್ಲೂ ಎಲ್ಲಾ ಒಳ್ಳೆಯದ್ದೇ ಆಗುತ್ತದೆ ಎಂದು ಮಾಧ್ಯಮದ ಮುಂದೆ ಪ್ರತಿಕ್ರಿಯಿಸಿದರು.

ಯಾವಾಗ ಈ ವಿಷಯ ಎಲ್ಲ ಕಡೆ ವ್ಯಾಪಕವಾಗಿ ಚರ್ಚೆಯಾಗಲು ಶುರುವಾಯಿತೋ ಅನಿರುಧ್ ಒಂದರಮೇಲೊಂದರಂತೆ ಸುದ್ದಿಘೋಷ್ಠಿ ನಡೆಸಿ ಸೀರಿಯಲ್ ತಂಡದ ಮೇಲೆ ಕಿಡಿಕಾರಿದರು. ಇದಾದ ಬಳಿಕ ಸೀರಿಯಲ್ ನಿರ್ಮಾಪಕರು ಸಹ ಅನಿರುಧ್ ಮಾಡುತ್ತಿದ್ದ ಗಲಾಟೆಯ ಕುರಿತು ಹಾಗು ಅವರನ್ನು ಸೀರಿಯಲ್ ಇಂದ ತೆಗೆದು ಹಾಕಿರುವ ಕುರಿತು ಸ್ಪಷ್ಟನೆ ನೀಡುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top