ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆ ಪ್ರವೇಶಿಸಿದಾಗಲಿಂದ ಇವರ ಕುರಿತು ಹಲವಾರು ಚರ್ಚೆಗಳು ಹೊರಗಡೆ ನಡೆಯುತ್ತಿತ್ತು. ಇವರನ್ನು ಬಿಗ್ ಬಾಸ್ ಮನೆ ಒಳಗೆ ಸೇರಿಸಿಕೊಂಡ ಬಿಗ್ ಬಾಸ್ ವಿರುದ್ಧ ಜನರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದರು. ಆದರೆ ಇವೆಲ್ಲದರ ನಡುವೆ ಬಿಗ್ ಬಾಸ್ ಮನೆಯಿಂದ ಗಾಯದ ಸಮಸ್ಯೆಯಿಂದ ಹೊರಬಂದು ಅರ್ಜುನ್ ಸೋನು ಅವರನ್ನು ಟೀಕಿಸುವವರ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.
ಸೋನು ಬಿಗ್ ಬಾಸ್ ಮನೆ ಪ್ರವೇಶಿಸಿದ ಬಳಿಕ ಇವರು ತಮ್ಮ ಜೀವನದಲ್ಲಿ ಆದ ಕೆಟ್ಟ ಘಟನೆಗಳನ್ನು ವಿವರಿಸಿದರು. ಇದಾದ ನಂತರ ಮನೆ ಮಂದಿಗೆ ಸೋನು ಹೊಂದುಕೊಂಡಿದ್ದರು. ಏಕೆಂದರೆ ಮನೆಯ ಸದಸ್ಯರು ಸೋನು ಇದ್ದರೆ ‘ಎಂಟರ್ಟೈನ್ಮೆಂಟ್’ ಎಂದು ಹೇಳುವ ರೀತಿ ಸೋನು ಎಲ್ಲರನ್ನು ತನ್ನತ್ತ ಸೆಳೆದುಕೊಂಡಿದ್ದರು. ಹೀಗಾಗಿ ಸೋನು ಮನೆ ಮಂದಿಗೆಲ್ಲಾ ತುಂಬಾ ಇಷ್ಟ ಆಗಿದ್ದಾರೆ. ಇವೆಲ್ಲದರ ನಡುವೆ ಸಂದರ್ಶನವೊಂದರಲ್ಲಿ ಅರ್ಜುನ್ ಸೋನು ವಿರುದ್ಧ ಕೆಟ್ಟದಾಗಿ ಮಾತನಾಡುತ್ತಿರುವವರ ವಿರುದ್ಧ ಕಿಡಿಕಾರಿದ್ದಾರೆ.
ನಿರೂಪಕಿ “ಸೋನು ಅವರ ಕುರಿತು ಹೊರಗೆ ಜನರು ಅವರ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ, ಆದರೆ ನೀವು ಇವರನ್ನು ಮನೆಯೊಳಗೆ ಸಮೀಪದಿಂದ ನೋಡಿದ್ದೀರಾ, ಹೀಗಾಗಿ ಸೋನು ಅವರ ವ್ಯಕ್ತಿತ್ವ ಹೇಗೆ ಎಂದು” ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅರ್ಜುನ್ ” ವ್ಯಕ್ತಿ ಮತ್ತು ವ್ಯಕ್ತಿತ್ವವನ್ನು ಸಲೀಸಾಗಿ ಅಳಿಯಲು ಹೋಗಬೇಡಿ, ನಿಮಗೆ ಫೋಟೋ ಇಷ್ಟವಾದರೆ ಲೈಕ್ ಮಾಡಿ, ಕಮೆಂಟ್ ಮಾಡಿ ಇಷ್ಟವಾಗಿಲ್ಲ ವೆಂದರೆ ಕಮೆಂಟ್ ಮಾಡಿ ಅವರ ವ್ಯಕ್ತಿತ್ವವನ್ನು ಹಾಳು ಮಾಡಬೇಡಿ. ನಿಮ್ಮ ಮನೆಯಲ್ಲೂ ಹೆಣ್ಣು ಮಕ್ಕಳಿರುತ್ತಾರೆ, ಹೀಗಾಗಿ ಇನ್ನೊಬ್ಬರ ವಯಕ್ತಿಕ ವಿಚಾರಕ್ಕೆ ಹೋಗಬಾರದು ಎಂಬುದು ನನ್ನ ಒಪಿನಿಯಾನ್. ಸೋನು ಚಿಕ್ಕ ವಯಸ್ಸಿನಲ್ಲೇ ತನ್ನ ತಂದೆಯನ್ನು ಕಳೆದುಕೊಂಡಿದ್ದಾರೆ, ಹೀಗಾಗಿ ಇವರು ತಮ್ಮ ತಂದೆಯ ಪ್ರೀತಿಯಿಂದ ವಂಚಿತರಾಗಿದ್ದಾರೆ, ಇವರ ಊರು ಕೂಡ ಮಂಡ್ಯದ ಸಮೀಪ ಇರುವುದರಿಂದ ಇವರ ಭಾಷೆ ಒರಟು, ಅದು ಬಿಟ್ಟರೆ ಇವರು ತುಂಬಾ ಒಳ್ಳೆ ಹುಡುಗಿ” ಎಂದು ಹೇಳಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
