fbpx
ಸಮಾಚಾರ

‘’ಸಾಕು ಈ ಪ್ರಪಂಚ.. ಸತ್ತು ಹೋಗಬೇಕು ಎನಿಸುತ್ತಿತ್ತು. ಆದರೆ, ಪ್ರಪಂಚದಲ್ಲಿ ಬದುಕಬೇಕು ಅಂತ ಅನಿಸಿದ್ದೇ ‘ಬಿಗ್ ಬಾಸ್’ ಮನೆಗೆ ಬಂದ್ಮೇಲೆ! ಆರ್ಯವರ್ಧನ್ ಗುರೂಜಿ ಈ ರೀತಿ ಹೇಳಲು ಕಾರಣವೇನು?

ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಹಲವಾರು ಬದಲಾವಣೆಗಳು ಆಗುತ್ತಿವೆ. ಅದರಲ್ಲೂ ಮನೆಯಲ್ಲಿ ಎಲ್ಲರನ್ನು ರಂಜಿಸುತ್ತಿರುವುದು ಎಂದರೆ ಅದು ಖ್ಯಾತ ಸಂಖ್ಯಾಶಾಸ್ತ್ರ ಗುರೂಜಿಯಾಗಿರುವ ಆರ್ಯವರ್ಧನ್ ಅವರು. ಆದರೆ ಇದೀಗ ಆರ್ಯವರ್ಧನ್ ಗುರೂಜಿ ಅವರಿಗೆ ತಮ್ಮ ಹೊಟ್ಟೆಯ ಕುರಿತು ಬಹಳಷ್ಟು ಬೇಸರವಾಗಿದ್ದು, ಇದರ ಕುರಿತು ಬಿಗ್ ಬಾಸ್ ಮನೆಯಲ್ಲಿ ವಿವರಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ಅಡುಗೆ ಮಾಡುತ್ತಿರುವುದು ಎಂದರೆ ಅದು ಆರ್ಯವರ್ಧನ್ ಗುರೂಜಿ. ಗುರೂಜಿ ಅವರ ಕೈರುಚಿ ಪ್ರತಿಯೊಬ್ಬರಿಗೂ ಇಷ್ಟವಾಗಿದೆ. ಆದರೆ ಇದೀಗ ಗುರೂಜಿ ಅವರಿಗೆ ತಾವು ಮಾಡಿದ್ದನ್ನು ತಿಂದು ತಿಂದು ಹೊಟ್ಟೆ ಬಂದಿದ್ದು, ಅದನ್ನು ಕರಗಿಸಬೇಕೆಂದು ಶಪಥ ಮಾಡಿದ್ದಾರೆ.

ಗುರೂಜಿ ಹೇಳಿರುವುದು ಏನು?
‘’ನನಗೆ ತುಂಬಾ ಹೊಟ್ಟೆ ಇದೆ. ಈ ಹೊಟ್ಟೆಯನ್ನ ಹೇಗಾದರೂ ಮಾಡಿ ಕರಗಿಸಬೇಕು. ಈ ಹೊಟ್ಟೆಯನ್ನ ನೋಡೋಕೆ ಆಗುತ್ತಿಲ್ಲ. ಇಲ್ಲಿ ನಾನು ತುಂಬಾ ನೊಂದುಕೊಂಡಿದ್ದೇನೆ. ಬಾಯಿ ಇದೆ ಅಂತ ತಿನ್ನೋದು, ಅಂತ ಆಗಿದೆ. ಇದೆಲ್ಲಾ ಬೇಜಾರಾಗಿದೆ. ತುಂಬಾ ದುಃಖ ಕಾಡುತ್ತಿದೆ. ಈ ಹೊಟ್ಟೆಯನ್ನ ನೋಡೋಕೆ ನಾಚಿಕೆ ಆಗುತ್ತಿದೆ. ಬರೀ ಕೂತುಕೊಂಡು ತಿಂದು ತಿಂದು ಹೀಗಾಗಿದೆ. ಈ ಹೊಟೆಯನ್ನ ಹೇಗಾದರೂ ಮಾಡಿ ಕರಗಿಸಬೇಕು. ನನ್ನ ಮಗಳ ಜೊತೆ ಚೆನ್ನಾಗಿರಬೇಕು. ಸಂತೋಷವಾಗಿ ಈ ಪ್ರಪಂಚವನ್ನ ತುಂಬಾ ಇಷ್ಟ ಪಡಬೇಕು’’ ಎಂದು ಹೇಳಿದ್ದಾರೆ.

‘’ಸಾಕು ಈ ಪ್ರಪಂಚ.. ಸತ್ತು ಹೋಗಬೇಕು ಎನಿಸುತ್ತಿತ್ತು. ಆದರೆ, ಪ್ರಪಂಚದಲ್ಲಿ ಬದುಕಬೇಕು ಅಂತ ಅನಿಸಿದ್ದೇ ‘ಬಿಗ್ ಬಾಸ್’ ಮನೆಗೆ ಬಂದ್ಮೇಲೆ. ನಮ್ಮ ಜೀವನ ಸಾಕು.. ಸಾಧನೆ ಮಾಡಿದ್ಧೀವಿ ಅನಿಸುತ್ತಿತ್ತು. ಆದರೆ, ನಮ್ಮ ಬ್ಯೂಟಿ, ಆರೋಗ್ಯ ಮುಖ್ಯ ಅಂತ ಅನಿಸಿದ್ದೇ ‘ಬಿಗ್ ಬಾಸ್‌’ಗೆ ಬಂದ್ಮೇಲೆ. ಇನ್ಮುಂದೆ ಆರೋಗ್ಯಕ್ಕೆ ಹೆಚ್ಚು ಟೈಮ್ ಕೊಡ್ತೀನಿ. ಹೊಟ್ಟೆ ಕರಗಿಸಿ ಚೆನ್ನಾಗಿ ಆಗುತ್ತೇನೆ’’ ಎಂದು ಆರ್ಯವರ್ಧನ್ ಗುರೂಜಿ ಶಪಥ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top