fbpx
ಸಮಾಚಾರ

ಕಿಚ್ಚ ಹೇಳಿದ ಮಾತನ್ನು ಬಿಗ್ ಬಾಸ್ ಮನೆಯಲ್ಲಿ ನಡೆಸಿಕೊಡಲೇ ಇಲ್ಲ ಸಾನ್ಯ ಅಯ್ಯರ್​!

ಬಿಗ್ ಬಾಸ್ ಮನೆಯಲ್ಲಿ ಸದಾ ಚರ್ಚೆಯಾಗುತ್ತಿರುವ ವಿಷಯ ಎಂದರೆ ಒಂದು ರಾಕೇಶ್ ಸೋನು ವಿಚಾರ, ಇದು ಬಿಟ್ಟರೆ ಅದು ರೂಪೇಶ್ ಸಾನ್ಯ ವಿಚಾರ. ಇವೆರಡು ಜೋಡಿ ಇದೀಗ ಮನೆಯ ಹಾಟ್ ಟಾಪಿಕ್ ಆಗಿದ್ದಾರೆ. ಆದರೆ ಪ್ರತಿ ಸಲ ನಾವು ಗಮನಿಸಿದಾಗ ಸಾನ್ಯ ಅವರಿಗೆ ಬೇಜಾರ್ ಆದರೆ ಅವರು ಕಣ್ಣೀರು ಹಾಕುತ್ತಾರೆ. ಆದರೆ ಇದೀಗ ಮತ್ತೆ ಕಣ್ಣೀರು ಹಾಕುತ್ತಾ ಕಿಚ್ಚನಿಗೆ ಮಾಡಿರೋ ಪ್ರಾಮಿಸ್ ಮುರಿದಿದ್ದಾರೆ.

ಸಾನ್ಯಾ ಅಯ್ಯರ್ ಕಿರುತೆರೆ ಲೋಕದಲ್ಲಿ ಮಿಂಚಿದವರು. ಇದೀಗ ಬಿಗ್ ಬಾಸ್ ಮನೆ ಪ್ರವೇಶಿಸಿರುವ ಇರುವ ಏನಾದರು ಸಾಧನೆ ಮಾಡಿ ಜೀವನದಲ್ಲಿ ಮುಂದೆ ಬರಬೇಕೆಂದು ಚಲದಿಂದ ಹೋರಾಡುತ್ತಿದ್ದಾರೆ. ಹೀಗಾಗಿ ಪ್ರತಿಯೊಂದು ಟಾಸ್ಕ್ ಗಳಲ್ಲಿ ತಮ್ಮ ಪರಿಶ್ರಮ ತೋರಿ ಆಡುತ್ತಿದ್ದಾರೆ. ಆದರೆ ಎಲ್ಲೋ ಒಂದು ಕಡೆ ಇವರ ಅಳು ಇವರಿಗೆ ಹಿನ್ನಡೆ ಆಗಿತ್ತು. ಈ ವಿಷಯ ಕೂಡ ಕಿಚ್ಚ ಪಂಚಾಯತಿಯಲ್ಲಿ ಚರ್ಚಿಸಿದರು.

ಕಳೆದ ವಾರ ಪಂಚಾಯತಿಯಲ್ಲಿ ರೂಪೇಶ್ ಹಾಗೂ ಸಾನ್ಯಾ ಅಯ್ಯರ್ ಫ್ರೆಂಡ್​ಶಿಪ್ ಬಗ್ಗೆ ಕೆಲವರು ಕೆಟ್ಟದಾಗಿ ಮಾತನಾಡಿದ ವಿಚಾರ ಚರ್ಚೆಗೆ ಬಂದಾಗ ಸಾನ್ಯ ಅಯ್ಯರ್ ಕಣ್ಣೀರು ಹಾಕಿದ್ದರು. ಈ ಬಗ್ಗೆ ಚರ್ಚೆ ಮಾಡುವಾಗ ‘ಸಾನ್ಯ ಅವರೇ ಇನ್ಮುಂದೆ ಅಳಬೇಡಿ. ಅದು ನಿಮಗೆ ಸೂಟ್ ಆಗುವುದಿಲ್ಲ’ ಎಂದು ಸುದೀಪ್ ಹೇಳಿದ್ದರು. ಇದಕ್ಕೆ ಸಾನ್ಯಾ ಒಪ್ಪಿದರು. ಆದರೆ ಇದೀಗ ಸಾನ್ಯ ಅದನ್ನು ಮುರಿದಿದ್ದಾರೆ.

ಇತ್ತೀಚಿಗೆ ಬಿಗ್ ಬಾಸ್ ಮನೆಯಲ್ಲಿ ಉದಯ್ ಸಾನ್ಯ, ಜಸ್ವಂತ್ ಮತ್ತು ರೂಪೇಶ್ ಬಗ್ಗೆ ಕೆಟ್ಟದಾಗಿ ಮಾತನಾಡಿದರು. ಈ ವಿಷಯ ಸಾನ್ಯ ಅವರ ಕಿವಿಗೆ ಬಿದ್ದು ಇದರ ಕುರಿತು ಉದಯ್ ಬಳಿ ಮಾತನಾಡಿದರು. ನಂತರ ಇವರು ಕಣ್ಣೇರು ಹಾಕಿದ್ದಾರೆ. ಇದಲ್ಲದೆ ಲಕ್ಷುರಿ ಬಜೆಟ್​ನಲ್ಲಿ ತಮಗೆ ಪನೀರ್ ಹಾಗೂ ಕಾಫಿ ಪೌಡರ್ ಸಿಕ್ಕಿಲ್ಲ ಎಂಬ ಕಾರಣಕ್ಕೂ ಸಹ ಕಣ್ಣೇರು ಹಾಕಿದ್ದಾರೆ. ಹೀಗಾಗಿ ಕಿಚ್ಚನಿಗೆ ಕೊಟ್ಟ ಮಾತನ್ನು ಮುರಿದಿರುವ ಸಾನ್ಯ ಈ ವಾರದ ಪಂಚಾಯತಿಯಲ್ಲಿ ಕಿಚ್ಚನಿಗೆ ಏನು ಉತ್ತರ ಕೊಡುತ್ತಾರೆ ಕಾದು ನೋಡಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top