fbpx
ಸಮಾಚಾರ

‘’ನಿನ್ನ ಮೇಲೆ ನಾನಿಟ್ಟಿದ್ದ ನಂಬಿಕೆಯನ್ನೇ ಮುರಿದುಬಿಟ್ಟೆ. ಇದು ನಂಬಿಕೆ ದ್ರೋಹ’’ ನಂಬಿಕೆ ದ್ರೋಹ ಮಾಡಿದ ಉದಯ್ ವಿರುದ್ದ ಸಾನ್ಯ ಗಂಭೀರ ಆರೋಪ

ಬಿಗ್ ಬಾಸ್ ಮನೆಯಲ್ಲಿ ಇದೀಗ ಒಂದರ ಮೇಲೊಂದರಂತೆ ಚಿತ್ರವಿಚಿತ್ರವಾದ ಘಟನೆಗಳು ನಡೆಯುತ್ತಿವೆ. ಮೊದಲು ಬಾಡಿ ಶೇಮಿಂಗ್ ವಿಚಾರಕ್ಕೆ ಬಹಳಷ್ಟು ಚರ್ಚೆಯಾಗುತ್ತಿದ್ದು, ಇದೀಗ character assassination ಎಂಬ ವಿಚಾರಕ್ಕೆ ಹಲವಾರು ಚರ್ಚೆ ಯಾಗುತ್ತಿದೆ. ಇದಕೆಲ್ಲ ಮುಖ್ಯ ಕಾರಣ ಉದಯ್ ಸಾನ್ಯ, ರೂಪೇಶ್ ಮತ್ತು ಜಸ್ವಂತ್ ಕುರಿತು ಚೈತ್ರ ಅವರ ಹತ್ತಿರ ಮಾತನಾಡಿದ್ದು.

ಕಳೆದ ಶನಿವಾರ ಚೈತ್ರಾ ಹಳ್ಳಿಕೇರಿ ಹಾಗೂ ಜಯಶ್ರೀ ಆರಾಧ್ಯ ಜೊತೆ ಉದಯ್ ಸೂರ್ಯ ಮಾತನಾಡುತ್ತಿದ್ದರು. ಈ ವೇಳೆ ಸಾನ್ಯ ಅಯ್ಯರ್ ಹಾಗೂ ಜಶ್ವಂತ್ ಕ್ಲೋಸ್‌ನೆಸ್ ಬಗ್ಗೆ ಕಾಮೆಂಟ್ ಮಾಡಿದರು. ಈ ವಿಷಯ ಇದೀಗ ಮನೆಯ ವಾತಾವರಣ ಕೆಡಿಸಿದೆ.

‘’ಒಂದು ಕ್ಯಾಮರಾ ಒಂದು ಕಡೆ ಆಫ್ ಆದರೆ, ಜಶ್ವಂತ್ ನೇಚರ್ ನೋಡ್ಕೋ. ಗರ್ಲ್‌ಫ್ರೆಂಡ್ ಇಲ್ಲದೆ ಹೇಗಿರ್ತಾನೆ ಅಂತ. ನಾನು ಚಾಲೆಂಜ್ ಮಾಡಿ ಹೇಳ್ತೀನಿ.. ನಾನು ಇದನ್ನ ಅವನಿಗೆ ಹೇಳಿದಾಗ.. ಬಾಯ್ಸ್ ಆರ್ ಬಾಯ್ಸ್ ಬ್ರೋ ಅಂತ ಹೇಳಿದ್ದ. ಸಾನ್ಯ ಮತ್ತು ಜಶ್ವಂತ್‌ನ ಅಬ್ಸರ್ವ್ ಮಾಡಿ.. ನಂದಿನಿ ಇದ್ದಾಗ ಹೇಗಿರ್ತಾನೆ, ನಂದಿನಿ ಇಲ್ಲದೇ ಇದ್ದಾಗ ಹೇಗಿರ್ತಾನೆ ಅಂತ’’ ಎಂದು ಉದಯ್ ಸೂರ್ಯ ಹೇಳಿದಾಗ, ‘’ರೂಪೇಶ್ – ಸಾನ್ಯ ಮಧ್ಯೆ ಏನೋ ಇದೆ ಅಂತ ನನಗೆ ಅನಿಸುತ್ತಿಲ್ಲ’’ ಎಂದು ಚೈತ್ರ ಹೇಳಿದರು. ‘’ರೂಪೇಶ್ ಭಯಾನಕ ಟ್ರೈ ಮಾಡಿದ್ದಾನೆ. ಈಗ ಫ್ರೆಂಡ್ ಅಂತ ಕೂತಿದ್ದಾನೆ. ಕನೆಕ್ಷನ್ ಆದರೆ ಜನ ವೋಟ್ ಮಾಡ್ತಾರೆ ಅಂತ ಅವನ ತಲೆಯಲ್ಲಿ ಇದೆ. ಒಬ್ಬನ್ನ ಯೂಸ್ ಮಾಡಿಕೊಂಡು ಸೇಫ್ ಆಗಿ ಹೋಗ್ತಾಯಿರಬೇಕು ಅಂತ ಸಾನ್ಯಗೆ ಇದೆ’’ ಅಂತ ಉದಯ್ ಸೂರ್ಯ ಹೇಳಿದರು.

ಈ ವೇಳೆ ತಮ್ಮ ಹಾಗೂ ಸಾನ್ಯ ಅಯ್ಯರ್ ಆತ್ಮೀಯತೆ ಬಗ್ಗೆ ಉದಯ್ ಸೂರ್ಯ ಮಾಡಿದ ಕಾಮೆಂಟ್ ಚೈತ್ರಾಗೆ ಇಷ್ಟವಾಗಲಿಲ್ಲ. ‘’ಒಂದು ಹುಡುಗಿ ಬಗ್ಗೆ ಮಾತನಾಡಬೇಕಾದರೆ ನೂರು ಬಾರಿ ಯೋಚನೆ ಮಾಡಬೇಕು. ಇದು ಸೆನ್ಸಿಟಿವ್ ಇಶ್ಯೂ’’ ಎಂದು ಬೇಸರದಿಂದಲೇ ಉದಯ್ ಸೂರ್ಯಗೆ ಚೈತ್ರಾ ಹೇಳಿದರು.

ಈ ಘಟನೆ ನಂತರ ಚೈತ್ರ ಜಶ್ವಂತ್, ರೂಪೇಶ್ ಹಾಗೂ ಸಾನ್ಯ ಅಯ್ಯರ್ ಬಳಿ ಉದಯ್ ಹೇಳಿದ ಮಾತುಗಳನ್ನು ಆಡುತ್ತಾ ‘’ನನಗೆ ಅವನು ನಿನ್ನ ಕ್ಯಾರೆಕ್ಟರ್‌ನ ಅಸಾಸಿನೇಟ್ ಮಾಡ್ತಿದ್ದಾನೆ ಅನಿಸ್ತು. ಅದಕ್ಕೆ ನಾನು ಅಲ್ಲಿಗೆ ಸ್ಟಾಪ್ ಮಾಡಿದೆ’’ ಎಂದು ಸಾನ್ಯ ಬಳಿ ತಿಳಿಸಿದರು. ಇದರಿಂದ ಬೇಸರಗೊಂಡ ಸಾನ್ಯ ಎಲ್ಲರ ಸಮ್ಮುಖದಲ್ಲಿ ಉದಯ್ ಬಳಿ ಸ್ಪಷ್ಟನೆ ಕೇಳಿದರು.

ಇದಕ್ಕೆ ಉತ್ತರಿಸದ ಉದಯ್ “ನಾನು ಹೇಳಿದ ಉದ್ದೇಶ ಬೇರೆ. ಚೈತ್ರಾ ಅಂದುಕೊಂಡಿರೋದೇ ಬೇರೆ. ನೀವು ಹೇಳಿದರೆ ಒಪೀನಿಯನ್. ನಾನು ಹೇಳಿದರೆ ಆರೋಪನಾ? ನಾನು ಕೆಲವು ಪದಗಳನ್ನ ಯೂಸ್ ಮಾಡಿಲ್ಲ. ಚೈತ್ರಾ ಬೇರೆ ತರಹ ಒಪೀನಿಯನ್ ಕ್ರಿಯೇಟ್ ಮಾಡಿದ್ದಾರೆ’’ ಎಂದು ಸ್ಪಷ್ಟನೆ ಕೊಡಲು ಪ್ರಾರಂಭಿಸಿದರು.

ಆದರೆ ಸಾನ್ಯ ಮಾತ್ರ ‘’ನಿನ್ನ ಮೇಲೆ ನಾನಿಟ್ಟಿದ್ದ ನಂಬಿಕೆಯನ್ನೇ ಮುರಿದುಬಿಟ್ಟೆ. ಇದು ನಂಬಿಕೆ ದ್ರೋಹ’’ ಎಂದು ಹೇಳಿ ಕಣ್ಣೇರು ಹಾಕಿದರು. ಇದೆಲ್ಲ ಘಟನೆಗಳು ನಡೆದರು ಕೂಡ ‘’ನಿನಗೆ ಬೇಜಾರಾಗಿದ್ದರೆ ಸಾರಿ. ನಿನ್ನ ಬಗ್ಗೆ ನಾನೇನೂ ಮಾತನಾಡಿಲ್ಲ. ಎಲ್ಲಾ ಉಲ್ಟಾ ಹೊಡೀತಿದ್ದಾರೆ. ನಾನು ಯೂಸ್ ಮಾಡದ ಪದಗಳನ್ನೆಲ್ಲಾ ಹೇಳಿದ್ದಾರೆ’’ ಎಂದು ಉದಯ್ ಸ್ಪಷ್ಟನೆ ನೀಡುತ್ತಲೇ ಇದ್ದರು. ಆದರೆ ಸಾನ್ಯ ಮಾತ್ರ ಯಾವುದನ್ನೂ ಕೇಳಿಸಿಕೊಳ್ಳಲಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top