fbpx
ಸಮಾಚಾರ

ಸೋಲಿಲ್ಲದ ಸರದಾರ ಉಮೇಶ್ ಕತ್ತಿ! ತಮ್ಮ ರಾಜಕೀಯ ಅವಧಿಯಲ್ಲಿ ಎಷ್ಟು ಬಾರಿ ಶಾಸಕರಾಗಿದ್ದಾರೆ ಗೊತ್ತಾ?

ಆಹಾರ ಮತ್ತು ಅರಣ್ಯ ಸಚಿವರಾಗಿದ್ದ ಉಮೇಶ್ ಕತ್ತಿ ಅವರು ಮಂಗಳವಾರ (ಸಪ್ಟೆಂಬರ್ 6)ಸಂಜೆ ನಿಧನರಾದರು. ಹೃದಯ ಸ್ತಂಭನದಿಂದ ಆಸ್ಪತ್ರೆ ಸೇರಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಆದರೆ ಇವರು ಮಾಡಿರುವ ಸಾಧನೆ ಮಾತ್ರ ಅಪಾರ ಎಂದು ಹೇಳಬಹುದು. ಏಕೆಂದರೆ ಇವರು ಕೇವಲ ಒಂದು ಬಾರಿ ಅಥವಾ ಎರಡು ಬಾರಿ ಶಾಸಕರಾದವರಲ್ಲ, ಬರೋಬ್ಬರಿ 8 ಬಾರಿ ಶಾಸಕರಾಗಿದ್ದಾರೆ.

ಹುಕ್ಕೇರಿ ವಿಧಾನಸಭಾ ಕ್ಷೆತ್ರದಿಂದ ಸ್ಪರ್ಧಿಸುತ್ತಿದ್ದ ಉಮೇಶ್ ಕತ್ತಿ ಅವರ ತಂದೆ ವಿಶ್ವನಾಥ್ ಕತ್ತಿ ಅವರ ನಿಧನದಿಂದ ಈ ಕ್ಷೆತ್ರ ಬಡವಾಗಿತ್ತು. ಆದರೆ ಈ ಕ್ಷೆತ್ರಕ್ಕೆ ಮತ್ತೆ ರಂಗು ತಂದಿದ್ದು ಉಮೇಶ್ ಕತ್ತಿ ಅವರ ಆಗಮನ. 1985ರಲ್ಲಿ ಉಮೇಶ್​ ಕತ್ತಿಯರವು, ಜನತಾ ಪಕ್ಷದಿಂದ ಶಾಸಕರಾಗಿ ವಿಧಾನಸಭಾ ಮೆಟ್ಟಿಲನ್ನು ಮೊದಲ ಬಾರಿಗೆ ಹತ್ತಿದರು.

ಇದಾದ ನಂತರ 2004 ರಲ್ಲಿ ಹೊರತುಪಡಿಸಿದರೆ ಸೋಲಿಲ್ಲದ ಸರದಾರನಂತೆ ಮುನ್ನುಗ್ಗುತ್ತಿದ್ದರು. ಹೀಗಾಗಿ ಬರೋಬ್ಬರಿ 8 ಬಾರಿ ಶಾಸಕರಾಗಿದ್ದಾರೆ. ಜನತಾ ಪಕ್ಷದ ಮೂಲಕ ತಮ್ಮ ರಾಜಕೀಯ ಭವಿಷ್ಯವನ್ನು ಆರಂಭಿಸಿದ ಕತ್ತಿ ಭಾರತೀಯ ಜನತಾ ಪಕ್ಷದ ಮೂಲಕ ಕೊನೆಗೊಳಿಸಿದರು.

1985 ಮತ್ತು 1989 ರಲ್ಲಿ ಜನತಾ ಪಕ್ಷ ಮತ್ತು ಜನತಾ ದಳದಿಂದ ಜಯಭೇರಿ ಬಾರಿಸಿದರು. 1994 ರಲ್ಲಿ ಜನತಾದಳದಿಂದ ಹ್ಯಾಟ್ರಿಕ್ ಗೆಲುವು ದಾಖಲಿಸಿ ಎಚ್​ಡಿ ದೇವೇಗೌಡರ ಸಚಿವ ಸಂಪುಟದಲ್ಲಿ ಸಕ್ಕರೆ ಸಚಿವರಾಗಿ ಕೆಲಸ ಮಾಡಿದರು.ನಂತರ ಜೆಎಚ್​ ಪಟೇಲ್ ಸರ್ಕಾರದಲ್ಲೂ ಪ್ರಭಾವಿ ಲೋಕೋಪಯೋಗಿ ಖಾತೆಯನ್ನು ನಿಭಾಯಿಸಿದರು. ಸೋಲಿಲ್ಲದ ಸರದಾರನಂತೆ ಮುನ್ನುಗ್ಗುತ್ತಿದ್ದ ಉಮೇಶ್ ಕತ್ತಿಗೆ ಹೊಡೆತ ಬಿದ್ದಿದ್ದು ಎಂದರೆ ಅದು ಕಾಂಗ್ರೆಸ್ ಪಕ್ಷ ಸೇರಿದಾಗ.

ಮೊದಲ ಬಾರಿಗೆ ಕಾಂಗ್ರೆಸ್​ ಚಿಹ್ನೆಯಲ್ಲಿ ಹುಕ್ಕೇರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದರು. ಆದರೆ ಇದು ಇವರಿಗೆ ಸರಿಬಂದಂತೆ ಕಾಣಲಿಲ್ಲ. ಏಕೆಂದರೆ ಈ ಚುನಾವಣೆಯಲ್ಲಿ ಇವರು ಮೊದಲ ಸೋಲಿನ ರುಚಿ ರುಚಿ ಕಂಡರು. ಆದರೆ ಇದು ಇವರ ಕೊನೆಯ ಸೋಲಾಗಿತ್ತು. ನಂತರ ಇವರ ಗೆಲುವಿನ ಓಟಕ್ಕೆ ಬ್ರೇಕ್ ಬೀಳಲೇಇಲ್ಲ.

2008ರಲ್ಲಿ ಮತ್ತೆ ಜೆಡಿಎಸ್​ಗೆ ಬಂದು ಹುಕ್ಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು. ಇದಾದ ನಂತರ ಇವರು ಬಿಜಿಪಿ ಪಕ್ಷ ಸೇರಿದರು. ಇದಾದ ನಂತರ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಬಂಧೀಖಾನೆ, ಕೃಷಿ ಸಚಿವರಾಗಿ ಕೆಲಸ ಮಾಡಿದರು. ಇದಾದ ನಂತರ 2013-2018ರ ವಿಧಾನಸಭಾ ಚುನಾವಣೆಯಲ್ಲಿಯೂ ಉಮೇಶ್ ಕತ್ತಿ ಹುಕ್ಕೇರಿ ವಿಧಾನಸಭಾ ಕ್ಷೇತ್ರದಿಂದ ನಿರಾಯಾಸವಾಗಿ ಗೆದ್ದುಕೊಂಡು ಬಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top