ಬಿಗ್ ಬಾಸ್ ಮನೆಯಲ್ಲಿ ಸದಾ ಭವಿಷ್ಯ ನುಡಿಯುತ್ತಿದ್ದ ಗುರೂಜಿಗೆ ಇದೀಗ ಒಂದು ಅಗ್ನಿಪರೀಕ್ಷೆ ಎಂದು ಹೇಳಬಹುದು. ಏಕೆಂದರೆ ಊರಿಗೆಲ್ಲ ಭವಿಷ್ಯ ಹೇಳುತ್ತಿದ್ದ ಗುರೂಜಿ ಅವರಿಗೆ ಇದೀಗ ಮೊದಲ ಬಾರಿಗೆ ಸೋನು ಗೌಡ ಭವಿಷ್ಯ ನುಡಿದಿದ್ದಾರೆ. ಹೀಗಾಗಿ ಸೋನು ನುಡಿದ ಭವಿಷ್ಯವಾದರೂ ಏನು? ಎಂಬ ಪ್ರಶ್ನೆ ನಿಮಗೆ ಬೀಳುವುದು ಸಹಜ. ಆದರೆ ಇದಕ್ಕೆ ಉತ್ತರ ಇಲ್ಲಿದೆ.
ಬಿಗ್ ಬಾಸ್ ಮನೆಯಲ್ಲಿ ಡೊಳ್ಳು ಹೊಟ್ಟೆ ಇದ್ದರು ಕೂಡ ಚಟುವಟಿಕೆ ಅಂತ ಬಂದರೆ ಆರ್ಯವರ್ಧನ್ ಗುರೂಜಿ ಎಲ್ಲದರಲ್ಲೂ ಸೈ ಎಂದು ಹೇಳಬಹುದು. ಟಾಸ್ಕ್ ಒಂದೇ ಅಲ್ಲದೆ ಮನೆಯ ಚಟುವಟಿಕೆಗಳಲ್ಲಿಯೂ ಸಹ ಸಕ್ರಿಯವಾಗಿ ಭಾಗವಹಿಸುತ್ತಾರೆ. ಆದರೆ ಅನೇಕ ಬಾರಿ ಇವರ ದೇಹ ಇವರಿಗೆ ಬೇಸರವುಂಟುಮಾಡಿರುವುದು ಕಂಡುಬರುತ್ತದೆ. ಇದು ಎಷ್ಟರಮಟ್ಟಿಗೆ ಇವರಿಗೆ ಬೇಸರ ತಂದಿದೆ ಎಂದರೆ ನನಗೆ ಇಲ್ಲಿ ಇರೋಕೆ ಆಗ್ತಿಲ್ಲ ಎಂದೂ ಹಲವು ಬಾರಿ ಹೇಳಿಕೊಂಡಿದ್ದಾರೆ.
ಪದೇ ಪದೇ ನಾನು ಇಲ್ಲಿಂದ ಹೋಗಬೇಕು, ನನಗೆ ಇಲ್ಲಿ ಇರೋಕೆ ಆಗ್ತಿಲ್ಲ ಎಂದು ಗುರೂಜಿ ಹೇಳುತ್ತಿದ್ದನ್ನು ಗಮನಿಸಿದ ಸೋನು ‘ ಅಷ್ಟೊಂದು ನೊಂದ್ಕೊಬೇಡಿ. ಈ ಶನಿವಾರ ನಿಮ್ಮನ್ನ ಮನೆಗೆ ಕಳಿಸ್ತಾರೆ ಬಿಡಿ’ ಎನ್ನುತ್ತಾರೆ. ಸೋನು ಮಾತನ್ನು ಸಕ್ರಿಯವಾಗಿ ಸ್ವೀಕರಿಸಿದ ಗುರೂಜಿ ‘ಅಯ್ಯೋ.. ಹಾಗ್ ಏನಾದರೂ ಮಾಡಿದರೆ, ನಿನ್ನ ಬಾಯಿಗೆ ನೂರು ತೆಂಗಿನ ಕಾಯಿ ಒಡೆಯುತ್ತೇನೆ’ ಎಂದು ಹೇಳಿದ್ದಾರೆ. ಹೀಗಾಗಿ ಸೋನು ನುಡಿದ ಭವಿಷ್ಯದಂತೆ ಈ ವಾರ ಆರ್ಯವರ್ಧನ್ ಗುರೂಜಿ ಮನೆಯಿಂದ ಹೋಗುತ್ತಾರಾ ಅಥವಾ ಕಳಪೆ ಸ್ಪರ್ಧಿ ಎಂಬ ಪಟ್ಟ ತೊಟ್ಟ ಸೋನು ಗೌಡ ಮನೆಯಿಂದ ಹೊರಗೆ ಹೋಗುತ್ತಾರಾ ಎಂದು ಕಾದು ನೋಡಬೇಕು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
