fbpx
ಸಮಾಚಾರ

ಕೋಟ್ಯಂತರೂಪಾಯಿ ಆಸ್ತಿಯಿದ್ದರೂ ಬಿಪಿಎಲ್ ಕಾರ್ಡ್ ಹೊಂದಿದ ಜೆಡಿಎಸ್ ನಾಯಕ! ಇವರ ನಗರಸಭೆ ನಾಯಕತ್ವವನ್ನು ರದ್ದುಗೊಳಿಸಿದ ಶಿರಾ ಕೋರ್ಟ್‌

ಶಿರಾ ನಗರ ಸಭೆಯ ಜೆಡಿಎಸ್ ಸದಸ್ಯ ರವಿಶಂಕರ್ ತಮ್ಮ ಬಳಿ ಕೋಟ್ಯಂತರೂಪಾಯಿ ಅಸ್ತಿ ಇದ್ದರು ಕೂಡ ಬಿಪಿಎಲ್ ಕಾರ್ಡ್ ಹೊಂದಿದ್ದು, ಉಚಿತವಾಗಿ ಸರ್ಕಾರಿ ರೇಷನ್‌ ಪಡೆಯುತ್ತಿದ್ದರು ಎಂದು ಆರೋಪಿಸಲಾಗಿತ್ತು. ಈ ಮಾಹಿತಿ ತಿಳಿದಿದ್ದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಇವರ ಆರೋಪ ಸಾಬೀತಾಗಿದ್ದು, ಇವರ ಸದಸ್ಯತ್ವವನ್ನು ಶಿರಾ ಜೆಎಂಎಫ್‌ಸಿ ನ್ಯಾಯಾಲಯ ಅಸಿಂಧುಗೊಳಿಸಿ ಆದೇಶ ಹೊರಡಿಸಿದೆ.

ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಅಪರಾಧ ನಡೆಸಿರುವ ಕುರಿತು ಸಾಬೀತುಪಡಿಸಿರುವ ಕಾರಣ ಕೋರ್ಟ್ ರವಿಶಂಕರ್ ಅವರ ಆಯ್ಕೆಯನ್ನು ಅಸಿಂಧು ಎಂದು ಘೋಷಿಸಿದೆ. ಕೇವಲ ಇದೊಂದೇ ಅಲ್ಲದೆ ಇವರ ಮೇಲೆ ಚೆಕ್ ಬೌನ್ಸ್, ಕೋಮು ಗಲಭೆ ಸೃಷ್ಟಿ, ಅಪಘಾತ ಪ್ರಕರಣ‌‌ಗಳು ಹೀಗೆ ಹಲವಾರು ಆರೋಪಗಳಿದೆ.

ತಮ್ಮ ಮೇಲೆ ಇಷ್ಟೆಲ್ಲಾ ಆರೋಪಗಳಿದ್ದರು ಕೂಡ ರವಿಶಂಕರ್ ಇದರ ಮಾಹಿತಿಯನ್ನು ನೀಡದೆ ಮುಚ್ಚಿಟ್ಟಿದ್ದಾರೆ. ಇದೆ ಕಾರಣಕ್ಕಾಗಿ ಶಿರಾ ಜೆಎಂಎಫ್‌ಸಿ ಕೋರ್ಟ್‌ನ ನ್ಯಾ. ಗೀತಾಂಜಲಿ ಅವರು ವಾರ್ಡ್ ನಂಬರ್ 9 ರಿಂದ ಆಯ್ಕೆಯಾದ ರವಿಶಂಕರ್ ಸದಸ್ಯತ್ವವನ್ನು ರದ್ದುಗೊಳಿಸಬೇಕು ಮತ್ತು ಉಪ ಚುನಾವಣೆ ನಡೆಸಬೇಕೆಂದು ಆದೇಶಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top