ಬಿಗ್ ಬಾಸ್ OTT ಕಾರ್ಯಕ್ರಮ ಮುಗಿಯುವ ಹಂತಕ್ಕೆ ತಲುಪಿದೆ. ಇನ್ನೊಂದು ವಾರದಲ್ಲಿ ಟಿವಿ ಕಾರ್ಯಕ್ರಮಕ್ಕೆ ಆಯ್ಕೆಯಾಗುವ ಸ್ಪರ್ಧಿಯ ಹೆಸರು ತಿಳಿಸುತ್ತಾರೆ. ಈ ವೇಳೆ ಮನೆಯಲ್ಲಿ ಸೋನು ಸುಮ್ಮನಿರದೆ ಇರುವೆ ಬಿಟ್ಟುಕೊಂಡಿದ್ದಾರೆ ಎಂದು ಹೇಳಬಹುದು.
ಬಿಗ್ ಬಾಸ್ ಮನೆಯಲ್ಲಿ ಅತಿ ಹೆಚ್ಚು ಸ್ಪರ್ಧಿಗಳನ್ನು ಮತ್ತು ಜನರನ್ನು ರಂಜಿಸುತ್ತಿದ್ದು ಎಂದರೆ ಅದು ಆರ್ಯವರ್ಧನ್ ಗುರೂಜಿ ಮತ್ತು ಸೋನು ಗೌಡ. ಇವರಿಬ್ಬರ ಜಗಳ ಮನೆ ಮಂದಿಗೆ ಬಹಳಷ್ಟು ನಗು ತರಿಸುತ್ತಿತ್ತು. ಇತ್ತೀಚಿಗೆ ಗುರೂಜಿ ಸೋನು ಮಾತಾಡುವುದನ್ನು ತಡೆಯಲಾಗದೆ ನಿನ್ನ ಬಾಯಿಗೆ ಪೊರಕೆ ಹಾಕಬೇಕ ಎಂದು ಎಂದು ಗದುರಿರುವುದು ಉಂಟು. ಇಷ್ಟೆಲ್ಲಾ ಆದರೆ ಸುಮ್ಮನಿರದ ಸೋನು ಗುರೂಜಿಯವರನ್ನು ಕೆಣಕಿದ್ದು, ಇದಕ್ಕೆ ಗುರೂಜಿ ಸರಿಯಾದ ಉತ್ತರ ನೀಡಿದ್ದಾರೆ.
ಮನೆ ಮಂದಿ ಕುಳಿತು ಹರಟೆ ಹೊಡೆಯುತ್ತಿದ್ದರು. ಮಾತನಾಡುತ್ತಿದ್ದ ವೇಳೆ ಸೋನು ಗುರೂಜಿ ಅವರಿಗೆ ‘ಡವ್ ರಾಜ್’ ಎಂದು ಕರೆದರು. ಇದನ್ನು ಕೇಳಿಸಿಕೊಂಡ ಗುರೂಜಿ ಸಿಟ್ಟಾಗಿ ‘ಡವ್ ರಾಜ’ ಅಂದ್ರೆ ಸರಿ ಇರಲ್ಲ ಎಂದು ನೇರವಾಗಿ ಟಾಂಗ್ ಕೊಟ್ಟರು. ಇಷ್ಟಕ್ಕೆ ಸುಮ್ಮನಿರದ ಸೋನು ‘ಹಾಗಿದ್ರೆ ನಾನು ನಿಮಗೆ ಕಳ್ಳ ಸ್ವಾಮೀಜಿ’ ಎಂದು ಹೇಳಬೇಕ ಎಂದು ಹೇಳಿದರು. ಇದಕ್ಕೆ ಗುರೂಜಿ ಹೆಚ್ಚೇನು ಪ್ರತಿಕ್ರಿಯೆ ನೀಡಿಲ್ಲ.
ಆದರೆ ಮನೆ ಮಂದಿ ಇದರ ಕುರಿತು ಸೋನು ಬಳಿ ಮಾತನಾಡಿ ” ಸೋನು ಅವರು ವಯಸ್ಸಿನಲ್ಲಿ ನಿನ್ ಕ್ಕಿಂತ ದೊಡ್ಡವರು, ಅವರಿಗೆ ನೀನು ಈ ರೀತಿ ಹೇಳಿದ್ದು ಸರಿ ಅಲ್ಲ’ ಎಂದು ಸಾನ್ಯಾ ಅಯ್ಯರ್ ಹೇಳಿದರು. ಇದರಿಂದ ಬೇಸರಗೊಂಡ ಸೋನು ‘ಕಳ್ಳ ಸ್ವಾಮೀಜಿ ಎಂದು ಹೇಳಬೇಕೆ ಎಂಬುದಷ್ಟೇ ನಾನು ಕೇಳಿದೆ. ಆದರೆ ನಾನು ಅವರಿಗೆ ಕಳ್ಳ ಸ್ವಾಮೀಜಿ ಎಂದು ಹೇಳಿಲ್ಲ’ ಎಂದು ಸಮರ್ಥಿಸಿಕೊಂಡರು. ಇದರಿಂದ ಸಿಟ್ಟಾದ ಗುರೂಜಿ ತಮ್ಮದೇ ರೀತಿಯಲ್ಲಿ ಸೋನು ವಿರುದ್ಧ ಚಾಟಿ ಬಿಸಿದ್ದಾರೆ.
ಸುಖಾ ಸುಮ್ಮನೆ ನನ್ನ ಸುದ್ದಿಗೆ ಬರಬೇಡ. ನಾನು ನನ್ನದೇ ಲಿಮಿಟ್ನಲ್ಲಿ ಇರ್ತೀನಿ. ನನಗೆ ಸಿಟಿ ಲೈಫ್ ಒಗ್ಗಿಲ್ಲ. ಹೀಗಾಗಿ, ಹಳ್ಳಿ ಲೈಫ್ನಲ್ಲಿ ನಾನು ಬದುಕುತ್ತಾ ಇದ್ದೀನಿ. ನನ್ನ ಭಾಷೆಗಳು ಕೂಡ ಅದೇ ರೀತಿ ಇದೆ. ನಾನು ಬಳಕೆ ಮಾಡುವಷ್ಟು ಕೆಟ್ಟ ಪದ ಯಾರೂ ಬಳಕೆ ಮಾಡೋಕೆ ಆಗಲ್ಲ. ಕೆಟ್ಟ ಶಬ್ದ ಹೆಚ್ಚು ಬಳಕೆ ಮಾಡುವ ಸ್ಪರ್ಧೆ ಇಟ್ಟರೆ ನಾನೇ ಮೊದಲು ಬರುತ್ತೇನೆ’ ಎಂದಿದ್ದಾರೆ ಗುರೂಜಿ. ಗುರೂಜಿ ಅವರ ಮಾತು ಕೇಳಿ ಸೋನು ಒಂದು ಕ್ಷಣ ಶಾಕ್ ಆಗಿದ್ದು, ಮುಂದೆ ಮಾತನಾಡಲೇ ಇಲ್ಲ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
