ಈ ಬಾರಿಯ ಬಿಗ್ ಬಾಸ್ OTT ಹಲವು ರೋಚಕತೆಯಿಂದ ಕೂಡಿದ್ದು, ಇದೀಗ ಕೊನೆಯ ಹಂತ ತಲುಪಿದೆ. ಹೀಗಾಗಿ ಈ ವಾರ ನಡೆದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಯಾವೆಲ್ಲ ಸ್ಪರ್ಧಿಗಳು ಮನೆಯಿಂದ ಹೊರನಡೆದಿದ್ದಾರೆ, ಮತ್ತು ಯಾವೆಲ್ಲ ಸ್ಪರ್ಧಿಗಳು ಬಿಗ್ ಬಾಸ್ ಸೀಸನ್ 9 ರಲ್ಲಿ ಭಾಗವಹಿಸಲಿದ್ದಾರೆ ಎಂಬುದರ ಕುರಿತುವೀಕ್ಷಕರಿಗೆ ಪ್ರಶ್ನೆಯಾಗಿ ಉಳಿದಿತ್ತು. ಇದೀಗ ಇದಕ್ಕೆ ಉತ್ತರ ಸಿಕ್ಕಿದೆ.
ಈ ಬಾರಿಯ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಒಬ್ಬರು, ಇಬ್ಬರಲ್ಲ ಬರೋಬ್ಬರಿ 4 ಮಂದಿ ಎಲಿಮಿನೇಟ್ ಆಗಿದ್ದಾರೆ. ಈ ಬಾರಿ ಫಿನಾಲೆ ವಾರಕ್ಕೆ ಬರೋಬ್ಬರಿ 8 ಮಂದಿ ಇದ್ದರು. ಇವರಲ್ಲಿ ಬಿಗ್ ಬಾಸ್ ಮನೆಯಿಂದ ಜಯಶ್ರೀ, ಜಶ್ವಂತ್ ಬೋಪಣ್ಣ, ಸೋಮಣ್ಣ ಮಾಚಿಮಾಡ ಮತ್ತು ಸೋನು ಶ್ರೀನಿವಾಸ್ ಗೌಡ ಹೊರನಡೆದಿದ್ದಾರೆ. ಹೀಗಾಗಿ ಇನ್ನುಳಿದ 4 ಮಂದಿ ಅಂದರೆ ಆರ್ಯವರ್ಧನ್ ಗುರೂಜಿ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ ಮತ್ತು ಸಾನ್ಯಾ ಅಯ್ಯರ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 9’ಕ್ಕೆ ಹೋಗುವ ಚಾನ್ಸ್ ಪಡೆದಿದ್ದಾರೆ.
ಜಯಶ್ರೀ ಕಳೆದ 5 ವಾರಗಳಿಂದ ನಾಮಿನೇಟ್ ಆಗುತ್ತಿದ್ದರು. ಆದರೆ ಅದೃಷ್ಟ ಅವರ ಕೈ ಇಡಿದ ಕಾರಣ ಉಳಿದಿದ್ದರು. ಆದರೆ ಕೊನೆಯ ವಾರದಲ್ಲಿ ಅದೃಷ್ಟ ಕೈ ಇಡಿದೆ ಇದ್ದ ಕಾರಣ ಎಲಿಮಿನೇಟ್ ಆಗಿದ್ದಾರೆ. ಇನ್ನು ಜಸ್ವಂತ್ ಅವರ ವಿಚಾರಕ್ಕೆ ಬಂದರೆ ಅವರಿಗೆ ಕನ್ನಡ ಸರಿಯಾಗಿ ಬರುವುದಿಲ್ಲ ಎಂಬ ಕಾರಣಕ್ಕೆ ಇವರನ್ನು ಜನರು ಎಲಿಮಿನೇಟ್ ಮಾಡಿರಬಹುದು. ಮನರಂಜನೆ ವಿಚಾರ ಬಂದರೆ ಸೋಮಣ್ಣ ಜನರನ್ನು ಹೆಚ್ಚು ರಂಜಿಸಿಲ್ಲ ಎಂಬ ಕಾರಣಕ್ಕಾಗಿ ಇವರನ್ನು ಎಲಿಮಿನೇಟ್ ಮಾಡಿರಬಹುದು. ಸೋನು ಕೊನೆಯ ಹಂತದವರೆಗೂ ಬಂದು ಸಾನ್ಯ ಐಯ್ಯರ್ ಅವರಿಗೆ ಪೈಪೋಟಿ ನೀಡಿದರು. ಆದರೆ ವೀಕ್ಷಕರು ಸೋನುಕ್ಕಿಂತ ಸಾನ್ಯ ಅರ್ಹರೆಂದು ಪರಿಗಣಿಸಿ ಸೋನು ಅವರನ್ನು ಎಲಿಮಿನೇಟ್ ಮಾಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
