ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ 3 t20 ಪಂದ್ಯ ಆಯೋಜಿಸಲಾಗಿತ್ತು. ಮೊದಲ ಪಂದ್ಯದಲ್ಲಿ ಭಾರತ ಹೋರಾಡಿ ಸೋತಿತು. ಹೀಗಾಗಿ ಮುಂದಿನ ಎರಡು ಪಂದ್ಯ ಭಾರತಕ್ಕೆ ಬಹಳ ಇಂಪಾರ್ಟೆಂಟ್. ಏಕೆಂದರೆ ಮುಂದಿನ ಎರಡು ಪಂದ್ಯವನ್ನು ಭಾರತ ಗೆಲ್ಲಬೇಕು. ಆದರೆ ಭಾರತಕ್ಕೆ ಅದೃಷ್ಟ ಕೈ ಇಡಿಯುವುದು ಡೌಟ್ ಎಂದು ಹೇಳಬಹುದು. ಏಕೆಂದರೆ ಇಂದು t20 ಪಂದ್ಯ ನಡೆಯುವುದು ಬಹುತೇಕ ಅನುಮಾನ.
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ 3 t20 ಪಂದ್ಯ ಆಯೋಜಿಸಲಾಗಿದ್ದು, ಎರಡನೆಯ t20 ಪಂದ್ಯ ಇಂದು ನಾಗ್ಪುರದ ವಿಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ ನೆನ್ನೆಯಿಂದ ನಾಗ್ಪುರದಲ್ಲಿ ನಿನ್ನೆಯಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಹೀಗಾಗಿ ಇಂದು ಕೂಡ ವರುಣನ ಆರ್ಭಟ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ನಾಗ್ಪುರದಲ್ಲಿ ನೆನ್ನೆಯಿಂದ ವರುಣ ಆರ್ಭಟ ಬಹಳ ಜೋರಾಗಿದೆ. ಮಳೆ ಎಷ್ಟರಮಟ್ಟಿಗೆ ಸುರಿಯುತ್ತಿದೆ ಎಂದರೆ ನೆನ್ನೆ ಎರಡು ತಂಡದ ಆಟಗಾರರು ಅಭ್ಯಾಸ ಮಾಡಲು ಮೈದಾನಕ್ಕೆ ಇಳಿಯಲು ಸಾಧ್ಯವಾಗಲೇ ಇಲ್ಲ. ಹೀಗಾಗಿ ಮಳೆ ಎಷ್ಟರ ಮಟ್ಟಿಗೆ ಸುರಿಯುತ್ತಿದೆ ಎಂದು ನಾವು ಊಹಿಸಬಹುದು. ಹೀಗಾಗಿ ಇಂದು ಕೂಡ ಮಳೆರಾಯ ಪಂದ್ಯಕ್ಕೆ ಅಡ್ಡಿಮಾಡುವ ಎಲ್ಲ ಸಾಧ್ಯತೆಗಳಿವೆ.
ಒಂದು ವೇಳೆ ಮಳೆರಾಯನಿಂದ ಇಂದಿನ ಪಂದ್ಯ ರದ್ದಾದರೆ ಇದು ಭಾರತಕ್ಕೆ ದೊಡ್ಡ ಹೊಡೆತ ಬಿದ್ದಂತೆ ಆಗುತ್ತದೆ. ಏಕೆಂದರೆ ಮುಂದಿನ ಪಂದ್ಯದಲ್ಲಿ ಭಾರತ ಗೆದ್ದರು ಸಹ ಸರಣಿಯನ್ನು ಕೈವಶ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇಂದಿನ ಪಂದ್ಯ ಭಾರತದ ಪಾಲಿಗೆ ಮಹತ್ವವಾದದ್ದು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
