ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ T20 ಪಂದ್ಯದಲ್ಲಿ ಭಾರತ 2-1 ಅಂತರದಿಂದ ಜಯಗಳಿಸಿತು. ಈ ಮೂಲಕ ರೋಹಿತ್ ಶರ್ಮಾ ಕಳೆದ ಹಲವಾರು ವರ್ಷಗಳಿಂದ ಭಾರತ ಕ್ರಿಕೆಟ್ ನಲ್ಲಿ ನಡೆದುಕೊಂಡ ಪದ್ದತಿಯನ್ನು ಬ್ರೆಕ್ ಮಾಡಿದರು. ಗೆದ್ದ ಪ್ರಶಸ್ತಿಯನ್ನು ಕಿರಿಯ ಆಟಗಾರರಿಗೆ ಕೊಡುವ ಬದಲು ಹಿರಿಯ ಆಟಗಾರರಾದ ದಿನೇಶ್ ಕಾರ್ತಿಕ್ ಅವರಿಗೆ ನೀಡಿದರು.
ಭಾರತ ಟ್ರೋಫಿ ಗೆದ್ದ ಬಳಿಕ ಮೈದಾನದ ತುಂಬಾ ಓಡಾಡಿದರು. ಈ ವೇಳೆ ಆಟಗಾರರ ಬಳಿ ಯುವತಿಯೊಬ್ಬಳು ಕಾಣಿಸಿಕೊಂಡಿದ್ದಳು. ಇದು ಭಾರತ ತಂಡದ ಆಟಗಾರಿಗೆ ಶಾಕ್ ನೀಡಿತ್ತು. ಅದರಲ್ಲೂ ಹೆಚ್ಚಾಗಿ ದಿನೇಶ್ ಕಾರ್ತಿಕ್ ಅವರಿಗೆ ಶಾಕ್ ನೀಡಿತು.
ಭಾರತ ತಂಡದ ಗೆದ್ದ ನಂತರ ಟ್ರೋಫಿ ಸಮೇತ ಡ್ರೆಸ್ಸಿಂಗ್ ರೂಮ್ ಕಡೆ ನಡೆದರು. ಇದೆ ವೇಳೆ ಯುವತಿಯೊಬ್ಬಳು ದಿನೇಶ್ ಕಾರ್ತಿಕ್ ಅವರ ಮೈ ಮುಟ್ಟಿದ್ದಾರೆ. ಇದರಿಂದ ಕೋಪಗೊಂಡ ಕಾರ್ತಿಕ್ ಯುವತಿಯನ್ನು ದಿಟ್ಟಿಸಿ ನೋಡಿದ್ದಾರೆ. ಇದಾದ ಬಳಿಕ ಮೈದಾನದಲ್ಲಿದ್ದ ಅಧಿಕಾರಿಗಳು ಈ ಯುವತಿಯನ್ನು ತರಾಟೆಗೆ ತೆಗೆದುಕೊಂಡರು ಎಂದು ಹೇಳಲಾಗುತ್ತಿದೆ.
ಈ ವಿಡಿಯೋದಲ್ಲಿ ದಿನೇಶ್ ಕಾರ್ತಿಕ್ ಸಿಟ್ಟಾಗುತ್ತಿದಂತೆ ಸಹ ಆಟಗಾರನಾದ ಅಶ್ವಿನ್ ಇವರನ್ನು ಸಮಾಧಾನಪಡಿಸುತ್ತಿರುವುದನ್ನು ಕಾಣಬಹುದು. ಇನ್ನು ಈ ವಿಡಿಯೋವನ್ನು ಗಮನಿಸಿದರೆ ಇದರಲ್ಲಿ ಯುವತಿ ಭಾರತ ತಂಡದ ಜರ್ಸಿಯನ್ನು ಧರಿಸಿದ್ದಾರೆ. ಹೀಗಾಗಿ ಈ ಯುವತಿ ಬಿಸಿಸಿಐ ಅಥವಾ ಟೀಮ್ ಇಂಡಿಯಾ ಸಿಬ್ಬಂದಿಗಳ ಭಾಗವೇ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಹೀಗಾಗಿ ಇದಕ್ಕೆ ಉತ್ತರ ಬಿಸಿಸಿಐ ಅವರೇ ತಿಳಿಸಬೇಕು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
