ಬಿಗ್ ಬಾಸ್ ಸೀಸನ್ 9 ಶುರುವಾಗಿದೆ. ಬಿಗ್ ಬಾಸ್ ಮನೆಯಲ್ಲಿ ಇದೀಗ ಒಟ್ಟು 18 ಜನ ಸ್ಪರ್ಧಿಯರಿದ್ದಾರೆ. ಬಿಗ್ ಬಾಸ್ ಮನೆ ಒಳಗೆ ಪ್ರವೇಶಿಸುವ ಮೊದಲು ಸುದೀಪ್ ಸದಸ್ಯರಿಗೆ ಒಂದು ಟಾಸ್ಕ್ ನೀಡಿದ್ದರು. ಸುದೀಪ್ ಬಿಗ್ ಬಾಸ್ ಮನೆ ಒಳಗೆ ಪ್ರವೇಶಿಸುವ ಪ್ರತಿಯೊಬ್ಬ ಸದಸ್ಯರಿಗೆ ಒಂದು ಬ್ಯಾಂಡ್ ಆರಿಸಿಕೊಳ್ಳಲು ಹೇಳಿ ಬಿಗ್ ಬಾಸ್ ಮುಂದಿನ ಆದೇಶದವರೆಗೂ ಅದನ್ನು ಅದನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ಎಂದು ಹೇಳಿದರು.
ಹೀಗಾಗಿ ಪ್ರತಿ ಸ್ಪರ್ಧಿಗಳು ಬಿಗ್ ಬಾಸ್ ಮುಂದಿನ ಆದೇಶದವರೆಗೂ ಈ ಬ್ಯಾಂಡ್ ಅನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಇದಾದ ನಂತರ ಬಿಗ್ ಬಾಸ್ ಆದೇಶ ಬಂದಿತು. ಅದೇನೆಂದರೆ ನಿಮಗೆ ಇಷ್ಟವಾದ ಸದಸ್ಯರಿಗೆ ಈ ಪಟ್ಟಿಯನ್ನು ಕೈಗೆ ಕಟ್ಟಿ ಅದಕ್ಕೆ ಕಾರಣವನ್ನೂ ತಿಳಿಸಬೇಕು ಎಂದು ಹೇಳಿದರು. ಹೀಗಾಗಿ ಮನೆಯ ಪ್ರತಿಯೊಬ್ಬ ಸದಸ್ಯರು ಈ ಬ್ಯಾಂಡ್ ಅನ್ನು ತಮಗೆ ಇಷ್ಟವಾದವರ ಕೈಗೆ ಕಟ್ಟಿ ಅದಕ್ಕೆ ಸೂಕ್ತ ಕಾರಣವನ್ನು ತಿಳಿಸಿದರು. ಇದಾದ ನಂತರ ಗುರೂಜಿ ಅವರಿಗೆ ಅವಕಾಶ ದೊರಕಿತು.
ಗುರೂಜಿ ಬ್ಯಾಂಡ್ ಕಟ್ಟಲು ನೀಡಿದ ಕಾರಣ ಮನೆಯ ಸದಸ್ಯರನ್ನು ಒಂದು ಕ್ಷಣ ಭಾವುಕರಾದರು. ಗುರೂಜಿ ಈ ಬ್ಯಾಂಡ್ ಅನ್ನು ರೂಪೇಶ್ ಶೆಟ್ಟಿ ಅವರ ಕೈಗೆ ಕಟ್ಟಿದರು. ಇದಕ್ಕೆ ಅವರು ನೀಡಿದ ಕಾರಣ ಎಂದರೆ ನಾನು ಸೋತ ವೇಳೆಯಲ್ಲಿ, ಹತಾಶನಾದ ಟೈಮ್ನಲ್ಲಿ ನನ್ನ ಜೊತೆ ನಿಂತವನು ರೂಪೇಶ್ ಶೆಟ್ಟಿ , ನಾನು ನನ್ನ ಮಗನನ್ನು ಎಷ್ಟು ಪ್ರೀತಿಸುತ್ತೇನೋ ಅಷ್ಟೇ ಪ್ರೀತಿಯನ್ನು ರೂಪೇಶ್ ಗೆ ಕೊಡುವೆ. ಅವನು ನನ್ನ ಮಗನಿದ್ದಂತೆ ಎಂದು ಹೇಳಿದರು. ಗುರೂಜಿ ಅವರ ಈ ಮಾತು ಕೇಳಿ ಮನೆಯ ಮಂದಿ ಒಂದು ಕ್ಷಣ ಭಾವುಕರಾದರು.
ಗುರೂಜಿ ಅವರು ಮಾತನಾಡುವ ವೇಳೆ ಕೆಲವೊಂದು ಸಲ ಹೆಸರನ್ನು ಮರೆಯುತ್ತಾರೆ. ಬ್ಯಾಂಡ್ ಕಟ್ಟುವ ವೇಳೆ ಕೂಡ ಇದೆ ಆಗಿತ್ತು. ಈವೇಳೆ ಅವರು ರೂಪೇಶ್ ಎನ್ನುವ ಬದಲು ರಾಕೇಶ್ ಎಂದು ಹೇಳಿದರು. ಇದಾದ ನಂತರ ಇದನ್ನು ಸರಿಪಡಿಸಿಕೊಂಡು ರೂಪೇಶ್ ಎಂದು ಹೇಳಿ ಇವರ ಕೈಗೆ ಬ್ಯಾಂಡ್ ಕಟ್ಟಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
