ಬಿಗ್ ಬಾಸ್ ಮನೆಗೆ ಪ್ರಾಸದಲ್ಲಿ ಸಿನಿಮಾದ ವಿಮರ್ಶೆಯನ್ನು ನೀಡುವ ಸೈಕ್ ನವಾಜ್ ಎಂಟ್ರಿಯಾಗಿದೆ. ನವಾಜ್ ಬಿಗ್ ಬಾಸ್ ಮನೆಗೆ ಎಂಟ್ರಿಯಾಗಿ ಕೆಲವು ದಿನಗಳು ಕಳೆಯುವ ಮೊದಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಭಯ ಹುಟ್ಟಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಒಂದು ಟಾಸ್ಕ್ ಪ್ರಕಾರ ಅರುಣ್ ಸಾಗರ್ ಮತ್ತು ನವಾಜ್ ಒಟ್ಟಿಗೆ ಇರಬೇಕಾಗಿತ್ತು. ಈ ವೇಳೆ ನವಾಜ್ ಮಾತನಾಡುತ್ತಾ ” ನಾನು ಸರಿಯಿಲ್ಲ, ಸರಿಯಿಲ್ಲ ಅಂತಾನೇ ನನ್ನ ರಾತ್ರಿ ಆಚೆ ಬಿಡುವುದಿಲ್ಲ” ನನ್ನ ತಂದೆ ತಾಯಿ ಒಂದು ರಾತ್ರಿಯೂ ನನ್ನನ್ನು ಬಿಟ್ಟು ಮಲಗುವುದಿಲ್ಲ. ರಾತ್ರಿ ಎಲ್ಲಿಯೂ ನನ್ನನ್ನು ಕಳುಹಿಸುವುದಿಲ್ಲ. ಅದಕ್ಕೆ ಕಾರಣ, ನನ್ನ ಮೇಲೆ ಅವರ ಪ್ರೀತಿ ಇದೆ ಅಂತಲ್ಲ, ರಾತ್ರಿ ವೇಳೆ ನಾನು ಯಾರನ್ನಾದರೂ ಹೊಡೆದು, ಕಿರಿಕ್ ಮಾಡ್ತೀನಿ ಅನ್ನೋ ಕಾರಣಕ್ಕಾಗಿಯೇ ನನ್ನನ್ನು ಆಚೆಯೇ ಬಿಡುವುದಿಲ್ಲ ಎಂದು ಹೇಳಿದರು.
ಇದಲಲ್ದೆ ಬಿಗ್ ಬಾಸ್ ಮನೆಯಲ್ಲಿ ನನಗೆ ಕೆಲವರನ್ನು ಕಂಡರೆ ಹೊಡಿಬೇಕು ಅನಿಸುತ್ತದೆ. ಅದರಲ್ಲೂ ಆರ್ಯವರ್ಧನ್ ಗುರೂಜಿ ಮತ್ತು ದರ್ಶ್ ಅವರನ್ನು ನೋಡಿದರೆ ಹೊಡಿಬೇಕು ಅನಿಸುತ್ತದೆ ಎಂದು ಅವರು ಹೇಳುತ್ತಾರೆ. ಇದಲಲ್ದೆ ನಾನು ಮರ್ಯಾದೆಗೆ ಅಂಜುವುದಿಲ್ಲ, ನನಗೆ ಬೇಗ ಕೋಪ ಬರುತ್ತದೆ ಎಂದು ಹೇಳಿದ್ದಾರೆ. ನವಾಜ್ ಅವರ ಈ ಮಾತು ಪ್ರಶಾಂತ್ ಸಂಭರ್ಗಿ ಅವರಿಗೂ ಸಹ ಭಯ ಹುಟ್ಟಿಸಿದೆ.
ಈ ವೇಳೆ ಮಾತನಾಡುತ್ತ ಪ್ರಶಾಂತ್ ನವಾಜ್ ಹೇಳಿದ ಮಾತು ಭಯ ಹುಟ್ಟಿಸುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೇ ಹೊಡಿತಿನಿ ಅನ್ನೋದು ಸರಿಯಿಲ್ಲ. ಪ್ರೌಢಿಮೆ ಇಲ್ಲದೇ ಅವನು ವರ್ತಿಸುತ್ತಿದ್ದಾನೆ. ಇದು ಸರಿಯಾದದ್ದು ಅಲ್ಲ ಎಂದು ರಾಕೇಶ್ ಅವರು ಸಹ ತಿಳಿಸಿದ್ದಾರೆ. ಒಂದು ವೇಳೆ ನವಾಜ್ ಮನೆಯವರ ಜೊತೆ ಈ ರೀತಿ ಜಗಳ ವಾಡಿದರೆ ಇವರನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಕಳಿಸುವ ಎಲ್ಲಾ ಸಾಧ್ಯತೆಗಳಿವೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
