ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಸಿನಿಮಾದಲ್ಲಿ ವಿಲನ್ ಆಗಿ ನಟಿಸಿರುವ ಕಿಶನ್ ಇದೀಗ ಪೊಲೀಸ್ ಮೆಟ್ಟಿಲು ಏರಿದ್ದಾರೆ. ಇವರು ಯಾವುದೇ ತಪ್ಪು ಮಾಡಿ ಪೊಲೀಸ್ ಮೆಟ್ಟಿಲು ಅತ್ತಿಲ್ಲ ಬದಲಾಗಿ ಇವರಿಗೆ ಮೋಸವಾಗಿರುವ ಕಾರಣ ಇವರು ಪೊಲೀಸ್ ಮೆಟ್ಟಿಲು ಏರಿದ್ದಾರೆ.
ಕಿಶನ್ ನಟ ಮಾತ್ರವಲ್ಲದೆ ಗೋರಖ್ ಪುರ್ ಸರ್ದಾರ್ ಕ್ಷೇತ್ರದ ಬಿಜೆಪಿ ಸಂಸದ ಕೂಡ ಹೌದು. ಇವರು ಒಬ್ಬ ಬಿಲ್ದರ್ ವಿರುದ್ಧ 3.25 ಕೋಟಿ ವಂಚನೆ ಮಾಡಿದ್ದಾರೆ ಎಂದು ಗೋರಖ್ ಪುರ್ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ಈ ಕುರಿತು ಮಾತನಾಡಿದ ಪೊಲೀಸ್ ಅಧಿಕಾರಿಯೊಬ್ಬರು, ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಕಿಶನ್ ದೂರಿನಲ್ಲಿ ದಾಖಲಿಸಿರುವ ಆರೋಪಿಯ ಹೆಸರು ಜೈನ್ ಜಿತೇಂದ್ರ ರಮೇಶ್. 2012 ರಲ್ಲಿ ಕಿಶನ್ ಇವರಿಗೆ ಹಣವನ್ನು ನೀಡಿದ್ದರು. ಇದೀಗ ಕೊಟ್ಟ ಹಣವನ್ನು ಕಿಶನ್ ಮರಳಿ ಕೇಳಿದಾಗ ಆರೋಪಿ 34 ಲಕ್ಷ ರೂಪಾಯಿಯ 12 ಚೆಕ್ ಗಳನ್ನು ನೀಡಿದ್ದಾರೆ. ಆದರೆ ಆರೋಪಿ ನೀಡಿದ ಕೆಲವು ಚೆಕ್ ಗಳು ಬೌನ್ಸ್ ಆಗಿದೆ. ಹೀಗಾಗಿ ಕಿಶನ್ ಆರೋಪಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
