fbpx
ಸಮಾಚಾರ

ಇಂದು ಭಾರತ ಮತ್ತು ದ.ಆಫ್ರಿಕಾ ನಡುವೆ ಮೊದಲ T20 ಪಂದ್ಯ! ಆದರೆ ಇಂದಿನ ಪಂದ್ಯ ನಡೆಯುವುದೇ ಅನುಮಾನ- ಏಕೆ ಗೊತ್ತಾ?

ಇಂದು ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳ ನಡುವೆ ಇಂದು ತಿರುವನಂತಪುರಂದಲ್ಲಿನ ಗ್ರೀನ್​ಫೀಲ್ಡ್​ ಇಂಟರ್​ನ್ಯಾಷನಲ್​ ಮೈದಾನದಲ್ಲಿ ಮೊದಲ ಪಂದ್ಯ ನಡೆಯಲಿದೆ. ಆದರೆ ಇಂದು ಈ ಪಂದ್ಯ ನಡೆಯುವುದು ಅನುಮಾನ ಎಂದು ಹೇಳಬಹುದು. ಏಕೆಂದರೆ ಕೇರಳದಲ್ಲಿ ಇಂದು ಮೋಡ ಕವಿದ ವಾತಾವರಣವಿದೆ.

ಇತ್ತೀಚಿಗೆ ಬಂದ ಹವಾಮಾನದ ವರದಿ ಪ್ರಕಾರ ತಿರುವನಂತಪುರಂದ ಸುತ್ತ ಮುತ್ತಲಿನಲ್ಲಿ ಮೋಡ ಕವಿದ ವಾತಾವಣರವಿದ್ದು, ಹೀಗಾಗಿ ಸಣ್ಣ ಪ್ರಯಾಣದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ ಇಂದು ಮಳೆ ಬರುವ ಎಲ್ಲಾ ಸಾಧ್ಯತೆಗಳಿವೆ. ವರದಿಗಳ ಪ್ರಕಾರ, ಸೆಪ್ಟೆಂಬರ್ 28 ರಂದು ಭಾರತದ ತಿರುವನಂತಪುರಂ ನಗರದ ತಾಪಮಾನವು ಹಗಲಿನಲ್ಲಿ 30 ಸೆಲ್ಸಿಯಸ್ ಇರಲಿದೆ. ರಾತ್ರಿಯ ವೇಳೆ 25 ಸೆಲ್ಸಿಯಸ್​ಗೆ ಇಳಿಯಲಿದೆ. ಆದರೂ ಸಹ ಮಳೆ ಬರುವ ಸಾಧ್ಯತೆಗಳು ಕಮ್ಮಿ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಮಳೆ ಬಂದರು ಸಹ ಚುಟುಕುಪಂದ್ಯಾವಾದ ಕಾರಣ ಪಂದ್ಯ ನಡೆಯುವ ಎಲ್ಲಾ ಸಾಧ್ಯತೆಗಳಿವೆ.

ಭಾರತ ಮತ್ತು ಸೌತ್ ಆಫ್ರಿಕಾ ನಡುವೆ ಇಂದಿನ ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದೆ. ಈ ಸರಣಿಯ ಎಲ್ಲಾ ಪಂದ್ಯಗಳ ನೇರ ಪ್ರಸಾರ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಸೇರಿದಂತೆ, ಸ್ಟಾರ್ ನೆಟ್​ವರ್ಕ್​​ ಚಾನೆಲ್​ಗಳಲ್ಲಿ ಪ್ರಸಾರವಾಗಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top