ಪತಿಯ ಅಗಲಿಕೆಯ ನೋವಿನಿಂದ ನಟಿ ಮೇಘನಾ ರಾಜ್ ಇದೀಗ ನಿದಾನಕ್ಕೆ ಹೊರಬರುತ್ತಿದ್ದಾರೆ ಎಂದು ಹೇಳಬಹುದು. ಕಳೆದ ಕೆಲವು ವರ್ಷಗಳಿಂದ ಸಿನಿಮಾರಂಗದಿಂದ ದೂರವಿದ್ದ ಇವರು ಇದೀಗ ಮತ್ತೊಮ್ಮೆ ಸಿನಿಮಾದಲ್ಲಿ ನಟಿಸಲು ನಿರ್ಧರಿಸಿದ್ದಾರೆ.
ನನಗೆ ಒಳ್ಳೆ ಕಥೆ ಸಿಕ್ಕರೆ ಖಂಡಿತವಾಗಿ ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಮೇಘನಾ ಹೇಳಿದರು. ಆ ಪೈಕಿ ಪನ್ನಗ ಭರಣ ನಿರ್ಮಾಣ ಮಾಡುತ್ತಿರುವ ಹೊಸ ಸಿನಿಮಾದಲ್ಲಿ ಮೇಘನಾ ನಟಿಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಈ ಸಿನಿಮಾಕ್ಕೆ ವಿಶಾಲ್ ನಿರ್ದೇಶನ ಮಾಡುತ್ತಿದ್ದಾರೆ. ಆದರೆ ಈ ಸಿನಿಮಾದ ಶೀರ್ಷಿಕೆ ಏನೆಂಬುದನ್ನು ಮಾತ್ರ ಇನ್ನು ರಿವೀಲ್ ಮಾಡಿಲ್ಲ. ಇದಲ್ಲದೆ ಈ ಸಿನಿಮಾದಲ್ಲಿ ಪ್ರಜ್ವಲ್ ದೇವ್ರಾಜ್ ಕೂಡ ನಟಿಸುತ್ತಿದ್ದಾರಂತೆ.
ಚಿರಂಜೀವಿ ಸರ್ಜಾ, ಪನ್ನಗ ಭರಣ, ಪ್ರಜ್ವಲ್ ದೇವರಾಜ್ ಜೊತೆ ಸೇರಿ ಒಂದು ಸಿನಿಮಾ ಮಾಡಬೇಕು ಎಂಬುದು ಒಂದಷ್ಟು ವರ್ಷಗಳ ಹಿಂದಿನ ಕನಸಾಗಿತ್ತು. ಆದರೆ ಚಿರು ಇದೀಗ ನಮ್ಮನ್ನು ದೈಹಿಕವಾಗಿ ಅಗಲಿದ್ದಾರೆ. ಇದೀಗ ಪತಿಯ ಅಗಲಿಕೆಯ ನೋವನ್ನು ನುಂಗಿ ಮತ್ತೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದೀಗ ಮೇಘನಾ ನಟಿಸುತ್ತಿರುವ ಸಿನಿಮಾದಲ್ಲಿ ಪ್ರಜ್ವಲ್ ದೇವ್ರಾಜ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈ ಕುರಿತು ಮಾತನಾಡಿದ ಪ್ರಜ್ವಲ್ ದೇವ್ರಾಜ್ ” ‘ಈ ಸಿನಿಮಾ ಶುರು ಆದಾಗಿನಿಂದ ನಾನು ಚಿತ್ರತಂಡದ ಜೊತೆ ಸಂಪರ್ಕದಲ್ಲಿದ್ದೆ. ನಿರ್ದೇಶಕ ವಿಶಾಲ್ ಒಂದು ದಿನ ಸ್ಕ್ರಿಪ್ಟ್ ಬಗ್ಗೆ ಮಾತನಾಡಲು ಬರುತ್ತಾರೆ ಅಂತ ಪನ್ನಗ ಮತ್ತು ಮೇಘನಾ ಹೇಳಿದರು. ನನ್ನ ಅಭಿಪ್ರಾಯ ತಿಳಿಯಲು ಬರುತ್ತಿದ್ದಾರೆ ಅಂತ ನಾನು ಊಹಿಸಿದ್ದೆ. ಬಳಿಕ ಮೇಘನಾ ಕರೆಮಾಡಿ ಹೇಗನಿಸಿತು ಎಂದು ಕೇಳಿದರು. ನನಗೆ ಇಷ್ಟವಾಯ್ತು ಎಂದೆ. ಈ ಚಿತ್ರದಲ್ಲಿ ನಟಿಸಬೇಕು ಎಂದು ಅವರು ಹೇಳಿದಾಗ ಒಪ್ಪಿಕೊಳದೇ ಇರಲು ಸಾಧ್ಯವೇ?’ ಎಂದು ಸುದ್ದಿ ಮಾದ್ಯಮಕ್ಕೆ ತಿಳಿಸಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
