fbpx
ಸಮಾಚಾರ

ನಿಮಗೆ ಮಾತ್ರ ಕನ್ನಡದ ಬಗ್ಗೆ ಕಾಳಜಿ ಇರೋದಾ? ನಮಗೆ ಇಲ್ಲವಾ? ಕನ್ನಡದ ಬಗ್ಗೆ ಪಾಠ ಮಾಡಲು ಬಂದ ರೂಪೇಶ್ ರಾಜಣ್ಣನಿಗೆ ಮಾತಿನ ಮೂಲಕ ಟಾಂಗ್ ಕೊಟ್ಟ ಮಯೂರಿ

ಬಿಗ್ ಬಾಸ್ ಸೀಸನ್ 9 ಶುರುವಾಗಿದ್ದು, ಒಟ್ಟು 18 ಮಂದಿ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಹೀಗಾಗಿ ಕಠಿಣ ಪೈಪೋಟಿ ಬಿಗ್ ಬಾಸ್ ಮನೆಯಲ್ಲಿ ಇರುವುದು ಪಕ್ಕ. ಇದಲ್ಲದೆ ಬಿಗ್ ಬಾಸ್ ಮನೆಗೆ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರ ಎಂಟ್ರಿಯಾಗಿದೆ. ಯಾವಾಗಲು ಕನ್ನಡ ಕನ್ನಡ ಎಂದು ಹೇಳುತ್ತಿದ್ದ ಇವರಿಗೆ ಇದೀಗ ಬಿಗ್ ಬಾಸ್ ಮನೆಯಲ್ಲಿ ಬೈಗುಳ ಕೇಳುವಂತೆ ಆಗಿದೆ.

ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ರಾಜಣ್ಣ ಅವರು ನೀರು ಪೋಲಾಗುತ್ತಿರುವ ಬಗ್ಗೆ ವಾದ ಮಾಡಿದರು. ‘ಮನೆಯಲ್ಲಿ ಅನೇಕರು ನೀರು ಪೋಲು ಮಾಡುತ್ತಿದ್ದಾರೆ. ಲೋಟ ತೊಳೆಯುವಾಗ ನೀರು ಬಿಟ್ಟೇ ಇರುತ್ತಾರೆ. ಆ ರೀತಿ ಮಾಡಬೇಡಿ. ನಾವು ನೀರು ಉಳಿಸಬೇಕಿದೆ’ ಎಂದು ಹೇಳಿದರು. ಆದರೆ ನಿಯಮವನ್ನು ಪಾಲಿಸುತ್ತಿದ್ದ ಮನೆಯ ಮಂದಿ ಇದರ ವಿರುದ್ಧ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.

ರೂಪೇಶ್ ಅವರ ಮಾತಿನಿಂದ ಕೋಪಗೊಂಡ ಪ್ರಶಾಂತ್ ಸಂಭರ್ಗಿ ” ಇದನ್ನೆಲ್ಲ ಏಳನೇ ಕ್ಲಾಸ್​ ಮಕ್ಕಳಿಗೆ ಹೇಳಿ ಕೊಡ್ತಾರೆ’ ಎಂದು ಹೇಳಿದರು. ‘ಪ್ರಶಾಂತ್ ಅವರೇ ಒಂದು ವಿಚಾರವಾದರೂ ಒಪ್ಪಿಕೊಳ್ಳಿ’ ಎಂದು ರೂಪೇಶ್ ಹೇಳಿದರೆ. ಹೀಗೆ ಇವರಿಬ್ಬರ ಮದ್ಯೆ ಜಗಳ ಶುರುವಾಯಿತು.

ಇದಾದ ನಂತರ ಮಯೂರಿ ರೂಪೇಶ್ ರಾಜಣ್ಣ ಬಳಿ ಬಂದು ‘ನೀವು ಯಾರು ತಪ್ಪು ಮಾಡುತ್ತಾರೋ ಅವರಿಗೆ ಮಾತ್ರ ಹೋಗಿ ಹೇಳಿ. ಇಲ್ಲಿ ಯಾರೂ ಪಾಠ ಕೇಳೋಕೆ ಬಂದಿಲ್ಲ. ನಾನು ಇಂಗ್ಲಿಷ್ ಹಾಡು ಹೇಳುತ್ತಿದ್ದಾಗ ಬಿಗ್ ಬಾಸ್ ನಮಗೆ ಎಚ್ಚರಿಸಿದರು. ಆ ಬಳಿಕ ನೀವು ಬಂದು ಹೇಳಿದಿರಿ. ಬಿಗ್ ಬಾಸ್ ಹೇಳಿದಮೇಲೆ ನೀವೇಕೆ ಬಂದು ಹೇಳಬೇಕು? ನಿಮಗೆ ಮಾತ್ರ ಕನ್ನಡದ ಬಗ್ಗೆ ಕಾಳಜಿ ಇರೋದಾ? ನಮಗೆ ಇಲ್ಲವಾ? ನಾನು ಉತ್ತರ ಕರ್ನಾಟಕ ಕನ್ನಡ ಮಾತನಾಡುತ್ತೀನಿ, ಹವ್ಯಕ ಕನ್ನಡ ಮಾತನಾಡುತ್ತೀನಿ. ಹೀಗೆ ಅನೇಕ ಮಾದರಿಯ ಕನ್ನಡ ನನಗೆ ಬರುತ್ತದೆ. ನಾನು ಕನ್ನಡದ ಮೇಲಿನ ಪ್ರೀತಿಯನ್ನು ಬೇರೆ ರೀತಿಯಲ್ಲಿ ವ್ಯಕ್ತಪಡಿಸುತ್ತ ಇರಬಹುದು ಅಷ್ಟೇ’ ಎಂದು ರೂಪೇಶ್ ರಾಜಣ್ಣ ಅವರಿಗೆ ಚಾಟಿ ಬೀಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top