fbpx
ಸಮಾಚಾರ

ಅರುಣ್ ಸಾಗರ್ ಅವರ ಈ ಗುಣದಿಂದ ಬಿಗ್ ಬಾಸ್ ಮನೆಯಲ್ಲಿ ಗೌರವ ಕಳೆದುಕೊಳ್ಳುತ್ತಿದ್ದಾರಾ? ಗಂಭೀರ ಆರೋಪ ಮಾಡಿದ ಸಹಸ್ಪರ್ಧಿಗಳು

ಬಿಗ್ ಬಾಸ್ ಸೀಸನ್ 9 ಹಲವಾರು ವಿಶೇಷತೆಗಳಿಂದ ಕೂಡಿದ್ದು, ಇದರಲ್ಲಿ ಹೊಸ 9 ಸ್ಪರ್ಧಿಗಳು ಮತ್ತು ಹಳೆ 9 ಸ್ಪರ್ಧಿಗಳಿದ್ದಾರೆ. ಹಳೆ ಸ್ಪರ್ಧಿಗಳಲ್ಲಿ ಬಿಗ್ ಬಾಸ್ ಸೀಸನ್ 1 ರ ರನ್ನರ್ ಅಪ್ ಆಗಿರುವ ಅರುಣ್ ಸಾಗರ್ ಕೂಡ ಇದ್ದಾರೆ. ಅರುಣ್ ಸಾಗರ್ ಎಂದಾಕ್ಷಣ ನಮಗೆ ನೆನಪಿಗೆ ಬರೋದು ಎಂಟರ್ಟೈನ್ಮೆಂಟ್. ಆದರೆ ಇದೀಗ ಅರುಣ್ ಸಾಗರ್ ಅವರ ಕೆಲವು ಗುಣಗಳು ಮನೆ ಮಂದಿಗೆ ಇಷ್ಟವಾಗುತ್ತಿಲ್ಲ.

ಅರುಣ್ ಸಾಗರ್ ಮನೆಯವರನ್ನು ರಂಜಿಸುವುದರಲ್ಲಿ ಎತ್ತಿದ ಕೈ. ಆದರೆ ಆಟ ಅಂತ ಬಂದಾಗ ಅವರು ಗಂಭೀರವಾಗಿ ಆಡುತ್ತಿಲ್ಲ. ಹೀಗೆಂದು ಮನೆಯ ಮಂದಿ ಆರೋಪ ಮಾಡುತ್ತಿದ್ದಾರೆ. ಮತ್ತು ಇದಕ್ಕಾಗಿ ಅವರು ಹಲವಾರು ಉದಾಹರಣೆಗಳನ್ನು ಸಹ ನೀಡುತ್ತಿದ್ದಾರೆ.

ಬಿಗ್ ಬಾಸ್ ಈ ವಾರ ಜೋಡಿ ಟಾಸ್ಕ್ ನೀಡಿದ್ದರು. ಇದರಲ್ಲಿ ಅರುಣ್ ಸಾಗರ್ ಮತ್ತು ನವಾಜ್ ಒಂದು ಜೋಡಿ ಯಾಗಿದ್ದರು. ಈ ಜೋಡಿ ಮತ್ತು ದರ್ಶ್ ಮತ್ತು ಆರ್ಯವರ್ಧನ್ ಗುರೂಜಿ ಜೋಡಿಗೆ ಒಂದು ಟಾಸ್ಕ್ ಬಿಗ್ ಬಾಸ್ ನೀಡಿದ್ದರು. ಅದುವೇ ಪಿರಮಿಡ್ ನಿರ್ಮಿಸುವ ಒಂದು ಟಾಸ್ಕ್. ಈ ಟಾಸ್ಕ್ ನಲ್ಲಿ ಅರುಣ್ ಸಾಗರ್ ಗಂಭೀರವಾಗಿ ಆಟವಾಡಲಿಲ್ಲ. ಈ ವೇಳೆ ಅವರು ಟಾಸ್ಕ್ ಆಡದೆ ಕೈ ಕಟ್ಟಿ ಕುಳಿತರು, ಹಾಡು ಹಾಡಿದರು, ದರ್ಶ್ ಚಂದ್ರಪ್ಪ, ಆರ್ಯವರ್ಧನ್ ಅವರನ್ನು ಅಣುಕಿಸಿದರು.

ಇದಲ್ಲದೆ ಬಿಗ್ ಬಾಸ್ ಆಟಗಳು ಮುಗಿದ ನಂತರ ಫಲಿತಾಂಶವನ್ನು ನೀಡುತ್ತಾರೆ. ಬಿಗ್ ಬಾಸ್ ಟಾಸ್ಕ್ ಫಲಿತಾಂಶದ ಬಗ್ಗೆ ಮಾತನಾಡುವಾಗ ಮಧ್ಯೆ ಮಾತನಾಡುವ ದುಸ್ಸಾಹಸ ಮಾಡಿದ್ದು ಕೆಲವರಿಗೆ ಬೇಸರ ತಂದಿತ್ತು. ಅಷ್ಟೇ ಅಲ್ಲದೆ ಫಿರಾಮಿಡ್ ಟಾಸ್ಕ್‌ನಲ್ಲಿ ಆಟದ ಅಂಗಳದಿಂದ ಹೊರಗೆ ಬಂದು, ತಮಾಷೆಗೆ ಬಾಗಿಲ ಬಳಿ ನಿಂತು ದರ್ಶ್, ಆರ್ಯವರ್ಧನ್ ಜೋಡಿಯನ್ನು ನೋಡಿದ್ದಾರೆ, ಆಮೇಲೆ ಆಟ ಮುಗಿಸಿದ್ವಿ ಅಂತ ಹೇಳಲು ಗಂಟೆ ಎಲ್ಲಿ ಎಂದು ಹುಡುಕಾಡಿದ್ದಾರೆ. ಇದು ಕೆಲ ಸ್ಪರ್ಧಿಗಳಿಗೆ ಬೇಜವಾಬ್ದಾರಿಯ ವರ್ತನೆ ರೀತಿ ಕಂಡಿದೆ.

ಇವೆಲ್ಲ ಗುಣಗಳು ಮನೆ ಮಂದಿಗೆ ಬಹಳಷ್ಟು ಬೇಸರವನ್ನು ತಂದಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಟೀಕೆಗಳು ಸಹ ಆದವು. ಅರುಣ್ ಸಾಗರ್ ಅವರು ಜನರನ್ನು ರಂಜಿಸುವುದರಲ್ಲಿ ಎತ್ತಿದ ಕೈ. ಆದರೆ ಬಿಗ್ ಬಾಸ್ ಮನೆಗೆ ಬಂದಿರುವುದರಿಂದ ಬಿಗ್ ಬಾಸ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲವಾದರೆ ಇದು ಬಿಗ್ ಬಾಸ್ ಮನೆಯ ಇತರೆ ಸದಸ್ಯರ ಮೇಲೆ ಕೂಡ ಪರಿಣಾಮ ಬೀಳುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top