ಕಳೆದ ಸೀಸನ್ ಕಿಂತ ಈ ಬಾರಿಯ ಬಿಗ್ ಬಾಸ್ ಸೀಸನ್ ಹಲವಾರು ವಿಶೇಷತೆಯಿಂದ ಕೂಡಿದೆ ಎಂದು ಹೇಳಿದರೆ ತಪ್ಪಾಗಲಾರದು. ಬಿಗ್ ಬಾಸ್ ಎಂದಮೇಲೆ ಮನರಂಜನೆ ಮತ್ತು ಜಗಳ ಸರ್ವೇಸಾಮಾನ್ಯ. ಆದರೆ ಈ ಬಾರಿಯ ಬಿಗ್ ಬಾಸ್ ನಲ್ಲಿ ಶುರುವಿನಿಂದಲೂ ಬರಿ ಜಗಳವನ್ನೇ ನೋಡುತ್ತಿದ್ದೇವೆ. ಇದೀಗ ಈ ಲಿಸ್ಟ್ ಗೆ ಗುರೂಜಿ ಕೂಡ ಸೇರ್ಪಡೆಯಾಗಿದ್ದಾರೆ.
ಬಿಗ್ ಬಾಸ್ OTT ಮೂಲಕ ಸೀಸನ್ 9 ಕ್ಕೆ ಆಯ್ಕೆಯಾದ ಸ್ಪರ್ಧಿಗಳಲ್ಲಿ ಗುರೂಜಿ ಕೂಡ ಒಬ್ಬರು. ಬಿಗ್ ಬಾಸ್ OTT ಯಲ್ಲಿ ಬಹಳ ಮುಗ್ದತೆಯಿಂದ ಗುರೂಜಿ ಇದ್ದರು. ಮನೆಯ ಪ್ರತಿಯೊಬ್ಬ ಸದಸ್ಯರಿಗೂ ರುಚಿರುಚಿಕರವಾದ ಅಡುಗೆ ಮಾಡಿ ಖುಷಿ ಪಡಿಸುತ್ತಿದ್ದರು. ಆದರೆ ಬಿಗ್ ಬಾಸ್ OTT ಯಲ್ಲಿ ಇದ್ದ ಗುರೂಜಿ ಸೀಸನ್ 9 ರಲ್ಲಿ ಬಹಳಷ್ಟು ಬದಲಾಗಿದ್ದಾರೆ. ಇದೀಗ ಗುರೂಜಿ ಅವರ ನಡವಳಿಕೆಯಲ್ಲಿ ಮುಗ್ದತೆಯೆಂಬುದು ಸಂಪೂರ್ಣವಾಗಿ ಮರೆಯಾಗಿದೆ. ಇದಕ್ಕೆ ಒಂದು ಉದಾಹರಣೆ ಎಂದರೆ ಅಕ್ಟೋಬರ್ 3 ರಂದು ನಡೆದ ಒಂದು ಟಾಸ್ಕ್.
ಇತ್ತೀಚಿಗೆ ಬಿಗ್ ಬಾಸ್ ಮನೆಯ ಸದಸ್ಯರಿಗೆ ಒಂದು ಟಾಸ್ಕ್ ನೀಡಿದ್ದರು. ಇದರ ಪ್ರಕಾರ ಒಂದು ತಕ್ಕಡಿ ಇಡಲಾಗಿತ್ತು. ಒಂದು ಕಡೆ ಸ್ಪರ್ಧಿ ಕೂತರೆ ಮತ್ತೊಂದು ಕಡೆ ಕೆಟ್ಟ ಗುಣಗಳು ಬರೆದುಕೊಂಡಿರುವ ಚೀಲವನ್ನು ಹಾಕಬೇಕು. ಈ ಟಾಸ್ಕ್ ನಲ್ಲಿ ಗುರೂಜಿ ಅವರಿಗೆ ಮನೆಯ ಸದಸ್ಯರು ಸ್ವಾರ್ಥ, ಅಹಂಕಾರ ಎಂಬಿತ್ಯಾದಿ ಕೆಟ್ಟ ಗುಣಗಳು ಇದೆ ಎಂದು ಹೇಳಿದರು. ಈ ಹೇಳಿಕೆಯನ್ನು ಸ್ವೀಕರಿಸಲು ಗುರೂಜಿ ಬಿಲ್ಕುಲ್ ಒಪ್ಪಲಿಲ್ಲ. ಬದಲಾಗಿ ಮನೆಯವರ ಜೊತೆ ಕೋಪದಿಂದ ನಡೆದುಕೊಂಡರು.
‘ನಾನು ಕೆಟ್ಟವನು ಎಂದು ಎಲ್ಲರೂ ಹೇಳ್ತಿದ್ದೀರಾ. ಆ ಗುಣ ನನ್ನಲ್ಲಿಲ್ಲ. ಹೇಳಿದವರಲ್ಲೇ ಇದೆ. ನಿತ್ಯ ಅಡುಗೆ ಬೇಯಿಸಿ ಹಾಕಿದ್ದಕ್ಕೆ ಒಳ್ಳೆಯ ಬಹುಮಾನವನ್ನೇ ನೀಡಿದಿರಿ. ಇನ್ನು ನಾನು ಅಡುಗೆ ಮಾಡಲ್ಲ. ಆಗ ಏನು ಮಾಡ್ತೀರಿ ನೋಡೋಣ’ ಎಂದರು. ಇಷ್ಟಕ್ಕೆ ಸುಮ್ಮನಿರದೆ ‘ನನಗೆ ಅನ್ನ ಹಾಕುವ ಯೋಗ್ಯತೆ ನಿಮಗಿಲ್ಲ, ಪುರಾಣ ಮಾತನಾಡೋಕೆ ಬರ್ತೀರಾ’ ಎಂದು ಅಹಂಕಾರದಿಂದ ವರ್ತಿಸಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
