fbpx
ಸಮಾಚಾರ

ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಗೆ ” ಮೋಸಗಾರ, ಬೆನ್ನಿಗೆ ಚುರುಹಾಕುವವನು ” ಎಂದ ಅಮೂಲ್ಯ! ಕಾರಣವೇನು ಗೊತ್ತಾ?

ಬಿಗ್ ಬಾಸ್ ಕಾರ್ಯಕ್ರಮ ಶುರುವಿವಾಗಿ ಎರಡು ವಾರಗಳು ಕಳೆಯುತ್ತಾ ಬಂದಿದೆ. ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಹಲವಾರು ಬದಲಾವಣೆಗಳು ನಡೆಯುತ್ತಿದೆ. ಇದಲ್ಲದೆ ಗುರೂಜಿ ಮೇಲೆ ರಾಕೇಶ್ ಮತ್ತು ರೂಪೇಶ್ ಶೆಟ್ಟಿ ಅವರಿಗೆ ಅಪಾರವಾದ ಗೌರವ ಮತ್ತು ಪ್ರೀತಿ ಇದೆ. ಇದೆ ಇವಾಗ ರಾಕೇಶ್ ಅವರಿಗೆ ಮುಳ್ಳಾಗಿದೆ ಎಂದು ಹೇಳಬಹುದು.

ಕಳೆದ ವಾರ ನಡೆದ ಪಂಚಾಯತಿಯಲ್ಲಿ ಕಿಚ್ಚ ಸುದೀಪ್ ಗುರೂಜಿ ಅವರಿಗೆ ಸಹಾಯ ಮಾಡಿದ ರಾಕೇಶ್ ಮತ್ತು ರೂಪೇಶ್ ಶೆಟ್ಟಿ ಅವರಿಗೆ ಕ್ಲಾಸ್ ತೆಗೆದುಕೊಂಡರು. ಇದೆಲ್ಲ ನಡೆದ ಬಳಿಕ ಅಮೂಲ್ಯ ರಾಕೇಶ್ ಅವರ ಬಳಿ ಬಂದು ಮಾತನಾಡುತ್ತಿದ್ದರು. ಈ ವೇಳೆ ರಾಕೇಶ್ ಅವರಿಗೆ ನಿಮಗೆ ಧಮ್ ಇದ್ದರೆ ನನ್ನನು ನಾಮಿನೇಟ್ ಮಾಡಿ ಎಂದು ಹೇಳಿದರು. ಇದಲ್ಲದೆ ರಾಕೇಶ್ ಅವರಿಗೆ ಮೋಸಗಾರ ಎಂದು ಸಹ ಟ್ಯಾಗ್ ಲೈನ್ ಕೊಟ್ಟರು.

ಏಕೆಂದರೆ ಟಾಸ್ಕ್ ನಲ್ಲಿ ರಾಕೇಶ್ ಕೇವಲ ಗುರೂಜಿ ಅವರಿಗೆ ಮಾತ್ರ ಸಹಾಯ ಮಾಡುತ್ತಿದ್ದರು. ಆದರೆ ಈ ಟಾಸ್ಕ್ ನಲ್ಲಿ ಅಮೂಲ್ಯ ಅವರು ಸಹ ಭಾಗವಹಿಸಿದ್ದರು. ಆದರೆ ರಾಕೇಶ್ ಅಮೂಲ್ಯ ಅವರಿಗೆ ಸ್ವಲ್ಪ ಸಹಾಯ ಮಾಡಿದ್ದೂ ಆದರೆ ಗುರೂಜಿ ಅವರಿಗೆ ಟಾಸ್ಕ್ ಪೂರ್ತಿ ಮಾಡಲು ಬಹಳಷ್ಟು ಸಹಾಯ ಮಾಡಿದ್ದರು. ಇದು ಅಮೂಲ್ಯ ಅವರ ಮನಸಿಗೆ ಸಕತ್ ಬೇಜಾರ್ ಮಾಡಿತ್ತು. ಇದರಿಂದ ಬೇಸರಗೊಂಡ ಅಮೂಲ್ಯ ರಾಕೇಶ್ ಅವರಿಗೆ ಮೋಸಗಾರ ಎಂದು ಹೇಳಿದರು.

ಇದಾದ ನಂತರ ರಾಕೇಶ್ ‘sorry ‘ ಎಂದು ಸಹ ಹೇಳಿದರು. ಅದು ತಾವು ಟಾಸ್ಕ್ ನಲ್ಲಿ ರೂಲ್ಸ್ ಫಾಲೋ ಮಾಡಿಲ್ಲ ಎಂಬ ಕಾರಣಕ್ಕಾಗಿ. ಇದರಿಂದ ಬೇಸರಗೊಂಡ ಅಮೂಲ್ಯ ಕ್ಯಾಮೆರಾ ನೋಡಿ ” ಬಿಗ್ ಬಾಸ್ ಮನೆಯಲ್ಲಿ ದುಃಖವಾದಾಗ ಆಗಿರುವ ನೋವನ್ನು ರಾಕೇಶ್ ಅವರ ಬಳಿ ಹೇಳಿಕೊಂಡೆ ಬಿಗ್ ಬಾಸ್. ಆದರೆ ರಾಕೇಶ್ ಬೆನ್ನಿಗೆ ಚೂರಿ ಹಾಕಿಬಿಟ್ರು ” ಎಂದು ಹೇಳಿದರು. ಈ ಮಾತು ಕೇಳಿ ರಾಕೇಶ್ ಬೇಸರಮಾಡಿಕೊಂಡರು. ಆದರೆ ಅಮೂಲ್ಯ ಕೊನೆಯಲ್ಲಿ ಇದನ್ನು ನಾನು ಕೇವಲ ತಮಾಷೆಗಾಗಿ ಮಾಡಿದ್ದು ಎಂದು ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top