fbpx
ಸಮಾಚಾರ

ಸಾನ್ಯ ಐಯ್ಯರ್ ಮಾಡಿದ ಪವಾಡವನ್ನು ನಂಬಿ ಬಕ್ರ ಆದ ರೂಪೇಶ್ ರಾಜಣ್ಣ! ಪ್ಲಾನ್ ಮಾಡಿ ಮಜಾ ತೆಗೆದುಕೊಂಡ ಪ್ರಶಾಂತ್ ಸಂಭರ್ಗಿ

ಈ ಸೀಸನ್ ನ ಬಿಗ್ ಬಾಸ್ ಬಹಳ ವಿಶೇಷತೆಯಿಂದ ಕೂಡಿದೆ. ಅದರಲ್ಲೂ ಈ ಸೀಸನ್ ನಲ್ಲಿ ಹಾಡು, ಹರಟೆ, ಜಗಳ ಎಲ್ಲವು ಇದೆ. ಅದರಲ್ಲೂ ಬಿಗ್ ಬಾಸ್ ಸ್ಪರ್ಧಿಗಳು ಪ್ರಾಂಕ್ ಮಾಡುವಲ್ಲಿ ಎತ್ತಿದಕೈ. ಹೀಗಾಗಿ ಈ ಬಾರಿ ರೂಪೇಶ್ ರಾಜಣ್ಣ ಅವರನ್ನು ಬಕ್ರ ಮಾಡಿದ್ದಾರೆ.

ಪ್ರಶಾಂತ್ ಸಂಭರ್ಗಿ ಮತ್ತು ಸಾನ್ಯ ಐಯ್ಯರ್ ರೂಪೇಶ್ ರಾಜಣ್ಣ ಅವರನ್ನು ಬಕ್ರ ಮಾಡಬೇಕು ಎಂದು ಪ್ಲಾನ್ ಮಾಡುತ್ತಾರೆ. ಅದರಂತೆ ಪ್ರಶಾಂತ್ ಸಂಭರ್ಗಿ ರೂಪೇಶ್ ರಾಜಣ್ಣ ಬಳಿ ಬಂದು ಸಾನ್ಯ ಐಯ್ಯರ್ ಮೈಂಡ್ ರೀಡ್ ಮಾಡುತ್ತಾರೆ. ಹೀಗಾಗಿ ನಿಮ್ಮ ಮನಸಲ್ಲಿ ಏನಿದೆ ಎಂಬುದನ್ನು ಅವರು ಹೇಳುತ್ತಾರೆ ಎಂದು ತಿಳಿಸಿದರು.

ಹೀಗಾಗಿ ಸಾನ್ಯ ಮೈಂಡ್ ರೀಡ್ ಮಾಡುವಂತೆ ತನ್ನ ಹೆಬ್ಬೆಟ್ಟನ್ನು ಹಣೆಯ ಮೇಲಿಟ್ಟು ಏನೂ ಯೋಚನೆ ಮಾಡುವಂತೆ ನಟಿಸುತ್ತಾಳೆ. ಇದನ್ನು ರೂಪೇಶ್ ರಾಜಣ್ಣ ಕೂಡ ನಂಬುತ್ತಾರೆ. ಇದಾದ ಬಳಿಕ ಸಾನ್ಯ ದೇವರ ಮುಂದೆ ಒಂದು ಬಾಳೆಹಣ್ಣು ಇದೆ. ಅದು 5 ಪೀಸ್ ಆಗಿರುತ್ತೆ ಎಂದು ಹೇಳ್ತಾಳೆ. ಅಲ್ಲಿ ಹೋಗಿ ರೂಪೇಶ್ ರಾಜಣ್ಣ ನೋಡಿದ್ರೆ ಅದು 5 ಪೀಸ್ ಆಗಿರುತ್ತೆ.

ಸಾನ್ಯಾ ಐಯ್ಯರ್ ಹೇಳಿದ್ದು ನಿಜ ಆಗ್ತಿದೆ. ಅವಳದು ಪವಾಡ. ಮನೆಯಲ್ಲಿ ನನಗೆ ಒಬ್ಬನಿಗೆ ಅದು ಗೊತ್ತಾಗ್ತಿದೆ ಎಂದು ರೂಪೇಶ್ ರಾಜಣ್ಣ ಪ್ರಶಾಂತ್ ಸಂಬರ್ಗಿ ಬಳಿ ಹೇಳ್ತಾರೆ. ಈ ಮೊದಲೇ ಪ್ಲಾನ್ ಮಾಡಿದ್ದ ಪ್ರಶಾಂತ್ ಸಂಭರ್ಗಿ ರೂಪೇಶ್ ರಾಜಣ್ಣ ಮಾತು ಕೇಳಿ ನಗುತ್ತಾರೆ. ಒಟ್ಟಿನಲ್ಲಿ ರೂಪೇಶ್ ರಾಜಣ್ಣ ಅವರಿಗೆ ಬಕ್ರ ಮಾಡಿ ಪ್ರಶಾಂತ್ ಸಂಭರ್ಗಿ ಮತ್ತು ಸಾನ್ಯ ಐಯ್ಯರ್ ಮಜಾ ತೆಗೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top