fbpx
ಸಮಾಚಾರ

‘ರೂಪೇಶ್ ರಾಜಣ್ಣಗೆ ನಿಯತ್ತಿದೆ. ಆತನಿಗೆ ಮೌಲ್ಯಗಳಿವೆ’ ರಾಜಣ್ಣ ಬಗ್ಗೆ ಮೆಚ್ಚುಗೆಯ ಮಾತನಾಡಿದ ಪ್ರಶಾಂತ್ ಸಂಭರ್ಗಿ

ಬಿಗ್ ಬಾಸ್ ಮನೆಯಲ್ಲಿ ಬಿಗ್ ಬಾಸ್ ಕೊಡುವ ಟಾಸ್ಕ್ ಕ್ಕಿಂತ ಮನೆಯವರು ಮಾಡುವ ಆಟಗಳು ಬಹಳ ಮಜಾ ತರುತ್ತದೆ ಎಂದು ಹೇಳಿದರೆ ತಪ್ಪಾಗಲಾರದು. ಅದರಲ್ಲೂ ಬಿಗ್ ಬಾಸ್ ಮನೆಯ ಸ್ಪರ್ಧಿಗಳು ಪ್ರಾಂಕ್ ಮಾಡುತ್ತ ಮಜಾ ತೆಗೆದುಕೊಳ್ಳುತ್ತಿರುವುದನ್ನು ಸಹ ನಾವು ನೋಡಿದ್ದೇವೆ. ಇದೀಗ ಸಾನ್ಯ ಐಯ್ಯರ್ ಮತ್ತು ಪ್ರಶಾಂತ್ ಸಂಭರ್ಗಿ ಅವರು ರೂಪೇಶ್ ರಾಜಣ್ಣ ಅವರನ್ನು ಬಕ್ರ ಮಾಡಿದ್ದರು. ಇದೀಗ ಇದರ ಮೂಲಕ ಪ್ರಶಾಂತ್ ಸಂಭರ್ಗಿ ಅವರಿಗೆ ರೂಪೇಶ್ ರಾಜಣ್ಣ ಅವರ ವ್ಯಕ್ತಿತ್ವ ತಿಳಿದಿದೆ.

ಶಾಂತ್ ಸಂಭರ್ಗಿ ಮತ್ತು ಸಾನ್ಯ ಐಯ್ಯರ್ ರೂಪೇಶ್ ರಾಜಣ್ಣ ಅವರನ್ನು ಬಕ್ರ ಮಾಡಬೇಕು ಎಂದು ಪ್ಲಾನ್ ಮಾಡುತ್ತಾರೆ. ಅದರಂತೆ ಪ್ರಶಾಂತ್ ಸಂಭರ್ಗಿ ರೂಪೇಶ್ ರಾಜಣ್ಣ ಬಳಿ ಬಂದು ಸಾನ್ಯ ಐಯ್ಯರ್ ಮೈಂಡ್ ರೀಡ್ ಮಾಡುತ್ತಾರೆ. ಹೀಗಾಗಿ ನಿಮ್ಮ ಮನಸಲ್ಲಿ ಏನಿದೆ ಎಂಬುದನ್ನು ಅವರು ಹೇಳುತ್ತಾರೆ ಎಂದು ತಿಳಿಸಿದರು.

ಹೀಗಾಗಿ ಸಾನ್ಯ ಮೈಂಡ್ ರೀಡ್ ಮಾಡುವಂತೆ ತನ್ನ ಹೆಬ್ಬೆಟ್ಟನ್ನು ಹಣೆಯ ಮೇಲಿಟ್ಟು ಏನೂ ಯೋಚನೆ ಮಾಡುವಂತೆ ನಟಿಸುತ್ತಾಳೆ. ಇದನ್ನು ರೂಪೇಶ್ ರಾಜಣ್ಣ ಕೂಡ ನಂಬುತ್ತಾರೆ. ಇದಾದ ಬಳಿಕ ಸಾನ್ಯ ದೇವರ ಮುಂದೆ ಒಂದು ಬಾಳೆಹಣ್ಣು ಇದೆ. ಅದು 5 ಪೀಸ್ ಆಗಿರುತ್ತೆ ಎಂದು ಹೇಳ್ತಾಳೆ. ಅಲ್ಲಿ ಹೋಗಿ ರೂಪೇಶ್ ರಾಜಣ್ಣ ನೋಡಿದ್ರೆ ಅದು 5 ಪೀಸ್ ಆಗಿರುತ್ತೆ.

ಈ ಮಾತನ್ನು ಹೇಳುವ ಮುಂಚೆ ಸಾನ್ಯ ರೂಪೇಶ್ ರಾಜಣ್ಣ ಅವರ ಬಳಿ ಒಂದು ಮಾತನ್ನು ಸಹ ಹೇಳುತ್ತಾರೆ. ‘ದೇವರ ಪಕ್ಕದಲ್ಲಿ ಒಂದು ಬಾಳೆಹಣ್ಣಿದೆ. ಆ ಬಾಳೆ ಹಣ್ಣು ಒಳಗಿನಿಂದ ಐದು ಕಡೆಗಳಲ್ಲಿ ಕಟ್​ ಆಗಿರುತ್ತದೆ. ಅದನ್ನು ನಿಮಗಾಗದ ಐದು ಜನರಿಗೆ ನೀಡಿ. ಅವರು ಸೋಲುತ್ತಾರೆ’ ಸಾನ್ಯ ಮತ್ತು ಪ್ರಶಾಂತ್ ಸಂಭರ್ಗಿ ಮಾಡಿದ ಪ್ಲಾನ್ ಪ್ರಕಾರ ಈ ಬಾಳೆ ಹಣ್ಣನ್ನು ರೂಪೇಶ್ ಅವರು ಮೊದಲು ಪ್ರಶಾಂತ್ ಸಂಬರ್ಗಿಗೆ ನೀಡುತ್ತಾರೆ ಎಂದು ಊಹಿಸಲಾಗಿತ್ತು. ಆದರೆ ಅದು ನಡೆಯಲೇ ಇಲ್ಲ. ಬದಲಾಗಿ ರಾಜಣ್ಣ ಪ್ರಶಾಂತ್ ಬಳಿ ‘ನಾನು ಇದನ್ನು ಯಾರಿಗೂ ಕೊಡಲ್ಲ. ಆ ರೀತಿ ಮೋಸ ಮಾಡಿ ವಿನ್ ಆಗೋಕೆ ನನಗೆ ಇಷ್ಟ ಇಲ್ಲ’ ಎಂದರು. ಈ ಮಾತು ಕೇಳಿ ಪ್ರಶಾಂತ್ ಸಂಭರ್ಗಿ ಅವರಿಗೆ ಬಹಳಷ್ಟು ಖುಷಿಯಾಗಿತ್ತು.

ಇದಾದ ನಂತರ ಅರುಣ್ ಸಾಗರ್ ಅವರು ಶೇವಿಂಗ್ ಮಾಡಿಕೊಳ್ಳುತ್ತಿದ್ದರು. ಅಲ್ಲಿಗೆ ಬಂದ ಪ್ರಶಾಂತ್ ಸಂಭರ್ಗಿ ‘ರೂಪೇಶ್ ರಾಜಣ್ಣಗೆ ನಿಯತ್ತಿದೆ. ಆತನಿಗೆ ಮೌಲ್ಯಗಳಿವೆ’ ಎಂದು ಅರುಣ್ ಸಾಗರ್ ಬಳಿ ಹೇಳಿದರು. ಇದಕ್ಕೆ ಅರುಣ್ ಸಾಗರ್ ಕೂಡ ಒಪ್ಪಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top