ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿದರು ಸಹ ಅಭಿಮಾನಿಗಳ ಮನಸಲ್ಲಿ ಇಂದಿಗೂ ಕೂಡ ಅವರು ಶಾಶ್ವತವಾಗಿ ಉಳಿದಿದ್ದಾರೆ. ಹೀಗಾಗಿ ಪ್ರತಿನಿತ್ಯ ಅಪ್ಪು ಹೆಸರಿನಲ್ಲಿ ಇಂದಿಗೂ ಸಹ ಹಲವಾರು ಕಾರ್ಯಕ್ರಮಗಳು ನಡೆಯುತ್ತಾ ಬಂದಿದೆ. ಇದೀಗ ಅಪ್ಪು ಹೆಸರಿನಲ್ಲಿ ಒಂದು ಮಹತ್ವದ ಕಾರ್ಯವನ್ನು ನಡೆಸಲು ಪ್ರಕಾಶ್ ರೈ ನಿರ್ಧರಿಸಿದ್ದು, ಇದಕ್ಕೆ ರಾಕಿ ಭಾಯ್ ಯಶ್ ಕೈ ಜೋಡಿಸಲಿದ್ದಾರೆ.
ಅಪ್ಪು ಹೆಸರಿನಲ್ಲಿ ಈಗಾಗಲೇ ಪ್ರಕಾಶ್ ರೈ ಅವರು ಅಪ್ಪು ಎಕ್ಸ್ ಪ್ರೆಸ್ ಆಂಬ್ಯುಲೆನ್ಸ್ ಸೇವೆ ಶುರು ಮಾಡಿದ್ದಾರೆ. ಜಿಲ್ಲೆಗೊಂದು ಆಂಬ್ಯುಲೆನ್ಸ್ ಕೊಡಬೇಕು ಎನ್ನುವುದು ಪ್ರಕಾಶ್ ರೈ ಸಂಕಲ್ಪವಾಗಿತ್ತು. ಈಗಾಗಲೇ ಇವರು ಮೈಸೂರು ಜಿಲ್ಲೆಗೆ ಈ ಆಂಬುಲೆನ್ಸ್ ಸೇವೆಯನ್ನು ಒದಗಿಸಿದ್ದಾರೆ. ಈ ವಿಚಾರವನ್ನು ಅವರು ನೆನ್ನೆ ನಡೆದ ಪುನೀತ್ ಪರ್ವ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದರು. ಇದಾದ ನಂತರ ತಮಿಳು ನಟ ಸೂರ್ಯ, ತೆಲುಗು ನಟ ಚಿರಂಜೀವಿ ಮತ್ತು ಶಿವರಾಜ್ ಕುಮಾರ್ ಕೂಡ ತಲಾ ಒಂದು ಆಂಬ್ಯುಲೆನ್ಸ್ ಕೊಡುವುದಾಗಿ ಹೇಳಿದ್ದಾರೆ. ಇದೀಗ ರಾಕಿ ಭಾಯ್ ಯಶ್ ಒಂದು ಹೆಜ್ಜೆ ಮುಂದೆ ನಡೆದಿದ್ದಾರೆ.
ಪ್ರಕಾಶ್ ರೈ ಅವರು ಈ ವಿಚಾರವನ್ನು ಹೇಳುತ್ತಿದ್ದಂತೆ ಯಶ್ ಕೂಡ ವೇದಿಕೆಯ ಮೇಲೆ ಬಂದು ಪ್ರಕಾಶ್ ರೈ ಅವರು ಮಾಡುತ್ತಿರುವ ಕೆಲಸವನ್ನು ಮೆಚ್ಚಿಕೊಂಡು ಅದಕ್ಕೆ ತಾವೂ ಕೈ ಜೋಡಿಸುತ್ತೇನೆ ಅಂದರು. ಇದಲ್ಲದೆ ಉಳಿದಿರುವ 25 ಜಿಲ್ಲೆಗಳಿಗೂ ಸಹ ತಾವೇ ಆಂಬುಲೆನ್ಸ್ ಕೊಡುವುದಾಗಿ ಘೋಷಣೆ ಮಾಡಿದರು. ಯಶ್ ಅವರ ಈ ಮಾತನ್ನು ಕೇಳುತ್ತಿದಂತೆ ಪ್ರಕಾಶ್ ರೈ ಎದ್ದು ನಿಂತು ಚಪ್ಪಾಳೆ ತಟ್ಟಿ ವೇದಿಕೆಯ ಮೇಲೆ ಬಂದು ಯಶ್ ಅವರನ್ನು ಅಪ್ಪಿಕೊಂಡರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
