fbpx
ಸಮಾಚಾರ

ಮೂಡಬಿದರೆ ಬಸದಿಯಲ್ಲಿ ಮಹಾವೀರ ನಿರ್ವಾಣೋತ್ಸವ ದೀಪಾವಳಿ ಹಬ್ಬದ ಆಚರಣೆ

ಇಂದು25.10.2022 ರಂದು ಮಂಗಳವಾರ ಬೆಳಿಗ್ಗೆ ಬೇಗ 4.30ಕ್ಕೆ ಮೂಡು ಬಿದಿರೆ,ಶ್ರೀ ಜೈನ ಮಠ ಹಾಗೂ 18 ಬಸದಿ ಗಳಲ್ಲಿ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಮಾರ್ಗದರ್ಶನ ದಲ್ಲಿ ಭಗವಾನ್ ಮಹಾವೀರ ಸ್ವಾಮಿ ಮೋಕ್ಷ ಕಲ್ಯಾಣ ಪ್ರಯುಕ್ತ ಸ್ವಾಮೀಜಿ, ಪಟ್ಟದ ಪುರೋಹಿತ ಪಾರ್ಶ್ವ ನಾಥ ಇಂದ್ರಹಾಗೂ ಶ್ರಾವಕ, ಶ್ರಾವಿಕೆ ಯರು 24 ಅಡಿಕೆ ವೀಳ್ಯದೆಲೆ ಚೆಂಡು ಮಲ್ಲಿಗೆ ಎಳನೀರು ತೆಂಗಿನ ಕಾಯಿ ಅಕ್ಕಿ ಅಗರ ಬತ್ತಿ ದೀಪ ಕರ್ಪೂರ ಸಹಿತ ತಟ್ಟೆ ಯಲ್ಲಿ ಇರಿಸಿದ ಪ್ರತ್ಯೇಕ ಅರ್ಘ್ಯ ವನ್ನು ಮಹಾವೀರ ಸ್ವಾಮಿ ಅಭಿಷೇಕ ಅಷ್ಟ ವಿಧಾರ್ಚನೆ ಪೂಜೆ ನೆರವೇರಿಸಿ ಮಹಾ ಅರ್ಘ್ಯ ಸಮರ್ಪಸಿ ನಿರ್ವಾಣ ಕಲ್ಯಾಣ ಶ್ರದ್ದಾ ಭಕ್ತಿಯಿಂದ ಆಚರಿಸಿದರು.

 

 

ನಿನ್ನೆ ಮಕ್ಕಳಿಗೆ ಜೈನ ಧಾರ್ಮಿಕ ಸ್ಪರ್ಧೆ ಸರ್ವ ಮಂಗಳ ಮಹಿಳಾ ಸಂಘ ಹಾಗೂ ಧವಳತ್ರಯ ಜೈನ ಕಾಶಿ ಟ್ರಸ್ಟ್ ವತಿಯಿಂದ ಸಾವಿರ ಕಂಬ ಬಸದಿ ಯಲ್ಲಿ ಏರ್ಪಡಿಸಿ ಸ್ವಾಮೀಜಿ ಬಹುಮಾನ ವಿತರಣೆ ಮಾಡಿ ದರು ಇಂದು ಪೂಜೆ ಬಳಿಕ ಆಶೀರ್ವಾದ ಮಾಡಿ ದ ಭಟ್ಟಾರಕ ಸ್ವಾಮೀಜಿ ಭಗವಾನ್ ಮಹಾವೀರ ಸ್ವಾಮಿ ಭಾರತ ದ ಎಲ್ಲೆಡೆ ಸಂಚರಿಸಿ ದಿವ್ಯ ಸಂದೇಶ ನೀಡಿ ಉದ್ದರಿಸಿದರು ಇಂದೂ ಕೂಡಾ ಪ್ರಸ್ತುತ ವಾದ ಅವರ ಸಂದೇಶ ಹೀಗಿದೆ ಮಾನವ ರ ಅಸುರಿ ಗುಣ ವೈರ, ಯುದ್ಧ ಹಾಗೂ ಜೀವಭೀತಿ ಅಶಾಂತಿ ಗೆ ಕಾರಣವಾಗುತ್ತದೆ ಆತ್ಮಶುದ್ಧಿಗೆ ಧರ್ಮ ನೆರವಾಗುದು . . ಮನಸ್ಸಿನ ವಿಕಾರಗಳನ್ನು ನಿರ್ನಾಮ ಮಾಡಲು ಧರ್ಮ ದಲ್ಲಿ ಪರಿಹಾರ ಕಾಣಬಹುದು . ಶತ್ರುಗಳು ಹೊರಗೆ ಎಲ್ಲೂ ಇಲ್ಲ. ನಮ್ಮೊಳಗೇ ಇರುವ ಕಾಮ, ಕ್ರೋಧ, ಮಾನ ಮದ, ಮತ್ಸರ, ಮೋಹಗಳನ್ನು ದೂರ ಮಾಡಲು ಐದು ಅಣುವ್ರತ, ಮೂರು ಗುಣವ್ರತ, ನಾಲ್ಕು ಶಿಕ್ಷಾವತ್ರ ಆಚರಿಸಿ ಸಂತೋಷವನ್ನು ಕಾಣೋಣ.ಎಂಬ ಸಂದೇಶ ನೀಡಿ ಶರೀರವು ನೌಕೆಯಂತಿದೆ. ಆತ್ಮ ನಾವಿಕನಂತಿದೆ.

 

 

ಸಂಸಾರವನ್ನು ಸಮುದ್ರ ಎನ್ನಲಾಗಿದೆ. ಈ ಸಂಸಾರ ಸಾಗರವನ್ನು ಯೋಗ್ಯ ಜ್ಞಾನ ತಪಸ್ಸಿನ ಸದ್ವಿವೇಕದ ಮೂಲಕ ದುಃಖದ ಪ್ರಯಾಣವನ್ನು ಅಪಾಯವಿಲ್ಲದೆ ಸುಖವಾಗಿ ದಾಟೋಣ ಎಂದು ನುಡಿದರು ಇಂದು 25.10.22 ರಂದು ಭಗವಾನ್ ಮಹಾವೀರರ ನಿರ್ವಾಣ ಮತ್ತೊಮ್ಮೆ ಬಂದಿದೆ. ಆ ಯುಗಪುರುಷರ ಸಹಸ್ರ ಸಹಸ್ರ ವರ್ಷಗಳ ಹಿಂದಿನ ವಿಚಾರ ಧಾರೆ ಇಂದಿಗೂ ಪ್ರಸ್ತುತ.ವಾಗಿದ್ದು ಸರ್ವೋದಯ ಧರ್ಮತೀರ್ಥದ ಪ್ರವರ್ತಕ ಭಗವo ತ ರ ಸಂದೇಶಗಳನ್ನು ಪಾಲಿಸುಲು ಪ್ರಯತ್ನ ಮಾಡುದೆ ನಿಜವಾದ ಧರ್ಮ ವಾಗುದು

ಅವರು ಮೋಕ್ಷ ಪಡೆದ ಶುಭ ದಿನ ದೀಪಾವಳಿ ಇಂದಿನಿಂದ 2549ವೀರ ನಿರ್ವಾಣ ಸಂವಸ್ಸರ ಹೊಸ ವರ್ಷ ದ ಆರಂಭ ಎಂದು ಮೂಡು ಬಿದಿರೆ ಸ್ವಸ್ತಿಶ್ರೀ ಚಾರುಕೀರ್ತಿ ಸ್ವಾಮೀಜಿ ಆಶೀರ್ವಾದ ನೀಡಿ ದರು
ಶಿಶುಪಾಲ್ ಜೈನ್ ವಿಜಯ್,ಜೈನ್,ಗುಣಪಾಲ್ ಹೆಗ್ಡೆ ಹರ್ಷ ಪಡಿವಾಳ್, ಸುಧಾಕರ್, ಶೋಭಿತ್ ಮೊದಲಾದವರು ಉಪಸ್ಥಿತರಿದ್ದರು

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top