ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ನ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಗೆಲುವು ಕಂಡಿತ್ತು. ರೋಚಕ ಹಂತ ತಲುಪಿದ್ದ ಈ ಪಂದ್ಯದಲ್ಲಿ ಟೀಂ ಇಂಡಿಯಾ ಗೆದ್ದು ಬೀಗಿತ್ತು. ಕೊನೆಯ ಎಸೆತದಲ್ಲಿ ಸಿಂಗಲ್ ಬಾರಿಸುವ ಮೂಲಕ ಅಶ್ವಿನ್ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದರು. ಹೀಗಾಗಿ ಪಾಕ್ ಮಣಿಸಿದ ರೋಹಿತ್ ಪಡೆಗೆ ಇಡೀ ಭಾರತವೇ ತಲೆಬಾಗಿ ನಮಿಸಿತ್ತು.
ರವಿ ಅಶ್ವಿನ್ ಅವರು ಬ್ಯಾಟಿಂಗ್ ಗೆ ಇಳಿದಾಗ ಭಾರತ ತಂಡವು ಒಂದು ಎಸೆತದಲ್ಲಿ ಎರಡು ರನ್ ಗಳಿಸುವ ಅನಿವಾರ್ಯತೆ ಇತ್ತು. ಈ ವೇಳೆ ಸಮಯಪ್ರಜ್ಞೆ ಮೆರೆದ ಅಶ್ವಿನ್ ಭಾರತದ ಗೆಲುವಿಗೆ ಕಾರಣರಾದರು. ಮೊಹಮ್ಮದ್ ನವಾಜ್ ಅವರ ಎಸೆತವನ್ನು ವೈಡ್ ಗೆ ಬಿಟ್ಟು ತಮ್ಮ ಬುದ್ದಿವಂತಿಕೆ ಪ್ರದರ್ಶಿಸಿದರು. ಕೊನೆಯ ಎಸೆತಕ್ಕೆ ಬೌಂಡರಿ ಬಾರಿಸಿ ಭಾರತಕ್ಕೆ ಅಪ್ರತಿಮ ಜಯ ತಂದುಕೊಟ್ಟರು.
ಪಂದ್ಯದ ನಂತರ ಬಿಸಿಸಿಐ ಟಿವಿಯೊಂದಿಗೆ ಮಾತನಾಡಿದ ಅಶ್ವಿನ್ ಈ ಶಾಕಿಂಗ್ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಒಂದು ವೇಳೆ ನವಾಜ್ ಎಸೆದ ಆ ಕೊನೆಯ ಚೆಂಡು ನನ್ನ ಪ್ಯಾಡ್ಗೆ ಬಡಿದು, ನಾನು ರನ್ ಗಳಿಸಲು ಸಾಧ್ಯವಾಗದಿದ್ದರೆ, ಡ್ರೆಸ್ಸಿಂಗ್ ರೂಮ್ಗೆ ಬಂದು, ನನ್ನ ಟ್ವಿಟರ್ ಅಕೌಂಟ್ ಓಪನ್ ಮಾಡಿ, ಎಲ್ಲರಿಗೂ ಧನ್ಯವಾದಗಳು, ನನ್ನ ಕ್ರಿಕೆಟ್ ಪ್ರಯಾಣ ಅದ್ಭುತವಾಗಿತ್ತು ಎಂದು ಬರೆದು ಪೋಸ್ಟ್ ಮಾಡುತ್ತಿದೆ ಎಂದು ಅಶ್ವಿನ್ ತಮಾಷೆಯಿಂದ ಹೇಳಿಕೊಂಡಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
