fbpx
ಸಮಾಚಾರ

‘ಗಂಧದಗುಡಿ’ಯ ಇದೊಂದು ಡೈಲಾಗ್​ ಎಂಥವರ ಕಣ್ಣಲ್ಲೂ ನೀರು ತರಿಸುತ್ತೆ

ದಿವಂಗತ ನಟ ಪುನೀತ್ ರಾಜಕುಮಾರ್ ಅವರು ಕೊನೆಯದಾಗಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ‘ಗಂಧದಗುಡಿ’ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಅಕಾಲಿಕವಾಗಿ ಸಾವನ್ನಪ್ಪಿದ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಸಾಗರೋಪಾದಿಯಲ್ಲಿ ಚಿತ್ರಮಂದಿರಗಳತ್ತ ಬರುತ್ತಿದ್ದಾರೆ. ಪ್ರೀತಿಯ ಅಪ್ಪು ಅವರನ್ನು ಬೆಳ್ಳಿ ಪರದೆಯ ಮೇಲೆ ಕೊನೆಯದಾಗಿ ಕಣ್ತುಂಬಿಕೊಳ್ಳುತ್ತಿರುವ ಕ್ಷಣ ಅಭಿಮಾನಿಗಳ ಭಾವುಕತೆಗೆ ಈ ದಿನ ಸಾಕ್ಷಿಯಾಗಿದೆ.

ಗಂಧದಗುಡಿ ಸಿನಿಮಾ ಸುಮಾರು ಒಂದುವರೆ ಗಂಟೆಗಳ ಕಾಲ ಇದೆ. ಇಲ್ಲಿ ಪುನೀತ್ ಅವರು ಪವರ್ ಸ್ಟಾರ್ ಆಗಿಲ್ಲ, ಬದಲಾಗಿ ನಮ್ಮೆಲ್ಲರ ಪ್ರೀತಿಯ ಅಪ್ಪು ಆಗಿದ್ದಾರೆ. ನಮ್ಮಕಾರು ನಾಡಿನ ಪ್ರಾಣಿಸಂಕುಲ,ಜಲಚರ,ಬೆಟ್ಟ ಗುಡ್ಡ,ನದಿ,ಸಮುದ್ರಗಳ ಸೌಂದರ್ಯವನ್ನ ಪುಟ್ಟಮಗುವಿನಂತೆ ವೀಕ್ಷಿಸಿ ಆ ಖುಷಿಯ ಕ್ಷಣಗಳನ್ನ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ ಅನಿಸುತ್ತದೆ.

ಗಂಧದಗುಡಿಯಲ್ಲಿ “ನಿಮ್ಮನ್ನು ನಂಬಿಕೊಂಡು ಕಾಡಿಗೆ ಬಂದಿದ್ದೀನಿ, ಮೂರು ಸಿನಿಮಾ ಬೇರೆ ಒಪ್ಪಿಕೊಂಡಿದ್ದೀನಿ. ಮನೇಲಿ ಹೆಂಡ್ತಿ, ಮಕ್ಳು ಇದ್ದಾರೆ” ಅಂತ ಅಪ್ಪು ಅಮೋಘ ವರ್ಷ ಅವರ ಬಳಿ ಹೇಳುತ್ತಾರೆ. ಈ ಡೈಲಾಗ್​ ನಿಜಕ್ಕೂ ಸಿನಿಮಾ ನೋಡುತ್ತಿರುವವರ ಮನ ಹಿಂಡುತ್ತದೆ. ಎಂಥ ಕಲ್ಲು ಮನಸ್ಸಾದರೂ ಕರಳು ಕಿತ್ತು ಬರುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top