fbpx
ಸಮಾಚಾರ

ಅರ್ಧಶತಕ ಸಿಡಿಸಿ ಟೀಕೆಗಳಿಗೆ ಬ್ಯಾಟ್ ಮೂಲಕವೇ ಉತ್ತರ ಕೊಟ್ಟ ಕನ್ನಡಿಗ ಕೆ.ಎಲ್ ರಾಹುಲ್!

ಇತ್ತೀಚಿಗೆ ನಡೆಯುತ್ತಿರುವ T20 ವಿಶ್ವಕಪ್ ನಲ್ಲಿ ಭಾರತ ತಂಡ ಮತ್ತು ಕರ್ನಾಟಕದ ಸ್ಟಾರ್ ಆಟಗಾರರಾಗಿರುವ ಕೆ.ಎಲ್ ರಾಹುಲ್ ಅವರ ವಿರುದ್ಧ ಹಲವಾರು ಟೀಕೆಗಳು ಕೇಳಿಬರುತ್ತಿತ್ತು. ಇವರ ಆಟದ ಕುರಿತು ಸಹ ಜನರು ಬಹಳಷ್ಟು ಹೀಯಾಳಿಸುತ್ತಿದ್ದರು. ಆದರೆ ಇದೀಗ ರಾಹುಲ್ ತಮ್ಮನ್ನು ತಮ್ಮನ್ನು ಟೀಕಿಸುತ್ತಿದ್ದವರಿಗೆ ಬ್ಯಾಟ್ ಮೂಲಕವೇ ಉತ್ತರನೀಡಿದ್ದಾರೆ.

ಪ್ರಸ್ತುತ ಆಸ್ಟ್ರೇಲಿಯಾ ದಲ್ಲಿ ನಡೆಯುತ್ತಿರುವ T20 ಪಂದ್ಯದಲ್ಲಿ ರಾಹುಲ್ ಕಳಪೆಯ ಪ್ರದರ್ಶನವನ್ನು ತೋರಿದ್ದರು. ಏಕೆಂದರೆ ಪಾಕಿಸ್ತಾನ, ನೆದರ್‌ಲ್ಯಾಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ವಿರುದ್ಧ ಇವರ ಬ್ಯಾಟ್ ಅಬ್ಬರಿಸಲಿಲ್ಲ. ಹೀಗಾಗಿ ಹೇಗಾದರೂ ಮಾಡಿ ಟೀಕೆ ಮಾಡುತ್ತಿರುವವರಿಗೆ ತಕ್ಕ ಉತ್ತರ ನೀಡಬೇಕೆಂದು ಕಾಯುತ್ತಿದ್ದರು. ಹೀಗಾಗಿ ಇಂದು ಬಾಂಗ್ಲಾದೇಶ ತಂಡದ ವಿರುದ್ಧ ಆಸ್ಟ್ರೇಲಿಯಾದ ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಉತ್ತರ ನೀಡಿದ್ದಾರೆ.

ಬಾಂಗ್ಲಾದೇಶದ ವಿರುದ್ಧ ಅಬ್ಬರಿಸಿದ ರಾಹುಲ್ 32 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದಾರೆ. ಇದರಲ್ಲಿ 4 ಸಿಕ್ಸರ್ ಹಾಗೂ 3 ಬೌಂಡರಿಗಳು ಸೇರಿವೆ. ರಾಹುಲ್ ಅಬ್ಬರಿಸುತ್ತಿಲ್ಲ ಎಂದು ಜನರು ಟೀಕೆಮಾಡುತ್ತಿದ್ದ ಸಂಧರ್ಭದಲ್ಲಿ ಭಾರತ ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರು ಪ್ರತಿಕ್ರಿಯಿಸಿ ನನ್ನ ಪ್ರಕಾರ ಕೆ.ಎಲ್ ರಾಹುಲ್ ಅವರೊಬ್ಬ ಅತ್ಯದ್ಭುತ ಕ್ರಿಕೆಟಿಗ. ಅವರು ಈಗಾಗಲೇ ತಮ್ಮ ಸಾಮರ್ಥ್ಯವೇನು ಎಂಬುದನ್ನು ಸಾಬೀತು ಮಾಡಿದ್ದಾರೆ. ಮುಂದಿನ ಪಂದ್ಯಗಳಲ್ಲಿ ರಾಹುಲ್ ಅಬ್ಬರಿಸೋದನ್ನ ನೀವೆಲ್ಲ ನೋಡುತ್ತೀರಾ ಎಂದು ಹೇಳಿದರು. ಅದರಂತೆ ಇದೀಗ ರಾಹುಲ್ ಅಬ್ಬರಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top