fbpx
ಸಮಾಚಾರ

ರೇಣುಕಾಚಾರ್ಯ ಸೋದರನ ಪುತ್ರ ನಾಪತ್ತೆ! ಕಾರಿನಲ್ಲಿ ಪ್ರಯಾಣಿಸುತ್ತಿರುವ ದೃಶ್ಯ ಸಿಸಿಟಿವಿ ಯಲ್ಲಿ ಲಭ್ಯ

ಶಾಸಕ ರೇಣುಕಾಚಾರ್ಯ ಅವರ ಸಹೋದರ ಪುತ್ರ ಕಳೆದ 3 ದಿನಗಳಿಂದ ನಾಪತ್ತೆಯಾಗಿದ್ದು, ಇದೀಗ ಈ ವಿಷಯ ಬಹಳಷ್ಟು ಅನುಮಾನಗಳಿಗೆ ಕಾರಣವಾಗಿದೆ. ರೇಣುಕಾಚಾರ್ಯ ಅವರ ಸೋದರರಾದ ಚಂದ್ರಶೇಖರ್ ಅವರ ಕಾರು ಭಾನುವಾರ ಶಿವಮೊಗ್ಗದಿಂದ ಹೊನ್ನಾಳಿ ಕಡೆ ಬಂದಿತ್ತು. ಆದರೆ ಇದಾದ ಬಳಿಕ ಕಾರು ನಾಪತ್ತೆಯಾಗಿದ್ದೆ. ಇದರ ಸಿಸಿಟಿವಿ ದೃಶ್ಯ ಕೂಡ ಲಭ್ಯವಾಗಿದೆ.

ಭಾನುವಾರ ಇಡೀ ದಿನ ಇವರು ಹೊನ್ನಾಳಿಯ ಹಲವು ಹಳ್ಳಿಗಳಲ್ಲಿ ಸಂಚಾರ ಮಾಡಿದ್ದಾರೆ. ಇದಾದ ನಂತರ ಸಂಜೆ 5 ಘಂಟೆ ಸುಮಾರಿಗೆ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದ್ದಾರೆ. ಸುಮಾರು 6 ಘಂಟೆಗೆ ತಮ್ಮ ಸ್ನೇಹಿತರನ್ನು ಭೇಟಿಮಾಡಿದ್ದಾರೆ. ಇದಾದ ಬಳಿಕ ಸಂಜೆ ಸುಮಾರು 6:30 ಕ್ಕೆ ಶಿವಮೊಗ್ಗದಿಂದ ಸ್ನೇಹಿತ ಕಿರಣ್ ಜೊತೆ ಗೌರಿಗದ್ದೆಗೆ ಭೇಟಿ ನೀಡಿದ್ದಾರೆ. ಇದಾದ ಬಳಿಕ ರಾತ್ರಿ 10 ಗಂಟೆವರೆಗೂ ವಿನಯ್ ಗುರೂಜಿ ಆಶ್ರಮದಲ್ಲಿದ್ದ ಚಂದ್ರಶೇಖರ್, 11 ಗಂಟೆಗೆ ಶಿವಮೊಗ್ಗಕ್ಕೆ ಸ್ನೇಹಿತ ಕಿರಣ್ ಜೊತೆ ವಾಪಸ್ಸಾಗಿದ್ದಾರೆ.

ರಾತ್ರಿ 11-56ಕ್ಕೆ ಸ್ನೇಹಿತ ಕಿರಣ್‍ನನ್ನು ಶಿವಮೊಗ್ಗದ ಮನೆಗೆ ಬಿಟ್ಟು ಹೊನ್ನಾಳಿಗೆ ಪ್ರಯಾಣ ಮಾಡಿದ್ದಾರೆ. ಶಿವಮೊಗ್ಗದಿಂದ ಬಂದ ಕಾರು ಸುರಹೊನ್ನೆ ಬಳಿ ರಾತ್ರಿ ಪಾಸ್ ಆಗಿದೆ. ಕೆಎ-17 ಎಂಎ 2534 ನಂಬರ್‍ನ ಹೊಂಡಾಯ್ ಕ್ರೇಟಾ ಕಾರ್ ನಲ್ಲಿ ಹೊನ್ನಾಳಿಗೆ ವಾಪಸ್ ಆಗಿದ್ದಾರೆ. ಸೋಮವಾರ ಬೆಳಗ್ಗೆ 6-48ಕ್ಕೆ ಹೊನ್ನಾಳಿಯಲ್ಲಿ ಚಂದ್ರಶೇಖರ್ ಮೊಬೈಲ್ ಲೊಕೇಷನ್ ತೋರಿಸುತ್ತದೆ. ಆದರೆ ಸುರಹೊನ್ನೆಯಿಂದ ಹೊನ್ನಾಳಿಗೆ ಬಂದ ಬಗ್ಗೆ ಸುಳಿವಿಲ್ಲ. ಹೀಗಾಗಿ ಇದು ಹಲವಾರು ಅನುಮಾನಗಳಿಗೆ ಸಾಕ್ಷಿಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top