ಭಾರತ ಮತ್ತು ಬಾಂಗ್ಲಾದೇಶ್ ನಡುವೆ ನಡೆದ ಪಂದ್ಯ ಅತ್ಯಂತ ರೋಚಕತೆಯಿಂದ ಕೂಡಿತ್ತು ಎಂದು ಹೇಳಿದರೆ ತಪ್ಪಾಗಲಾರದು. ಒಂದು ಕ್ಷಣ ಮಳೆಯಿಂದ ಭಾರತ ಪಂದ್ಯವನ್ನು ಸೋಲುತ್ತಾರೆ ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಮಳೆ ನಿಂತ ಬಳಿಕ ಭಾರತ ತಂಡದ ಆಟಗಾರರು ನೀಡಿದ ಪ್ರದರ್ಶನದಿಂದ ಭಾರತ 5 ರನ್ ಗಳಿಂದ ಜಯಗಳಿಸಿತು. ಆದರೆ ಈ ಜಯದಲ್ಲಿ ಭಾರತ ತಂಡದ ಆಟಗಾರರಲ್ಲದೆ ಮತ್ತೊಬ್ಬ ವ್ಯಕ್ತಿಯ ಪಾತ್ರ ಬಹಳ ವಿಶೇಷವಾಗಿತ್ತು. ಅವರು ಬೇರೆ ಯಾರು ಅಲ್ಲ ನಮ್ಮ ಕರ್ನಾಟಕದ ಥ್ರೋಡೌನ್ ಸ್ಪೆಷಲಿಸ್ಟ್ ರಘು.
ಭಾರತ ಮತ್ತು ಬಾಂಗ್ಲಾದೇಶ್ ನಡುವೆ ನಡೆದ ಪಂದ್ಯ ಕೆಲ ಕಾಲ ಮಳೆಯಿಂದ ಸ್ಥಗತಿಗೊಂಡಿತ್ತು. ಇದಾದ ಬಳಿಕ ಬಾಂಗ್ಲಾದೇಶ್ ತಂಡಕ್ಕೆ ನಿಗದಿತ 16 ಓವರ್ ನಲ್ಲಿ 151 ರನ್ ಗಳಿಸಬೇಕಿತ್ತು. ಒಂದು ಕಡೆ ಮಳೆಯಿಂದ ಗ್ರೌಂಡ್ ಸಂಪೂರ್ಣ ತೇವಾಂಶದಿಂದ ಕೂಡಿತ್ತು. ಹೀಗಾಗಿ ಭಾರತದ ಆಟಗಾರರು ಬೌಲಿಂಗ್ ಅಥವಾ ಫೀಲ್ಡಿಂಗ್ ಮಾಡುವ ವೇಳೆ ಜರಿ ಬೀಳುವ ಎಲ್ಲ ಸಾಧ್ಯತೆಗಳಿದ್ದವು. ಆದರೆ ಇದೆಲ್ಲ ತೊಂದರೆಗಳಿಂದ ಭಾರತ ತಂಡದ ಆಟಗಾರನ್ನು ಪಾರು ಮಾಡಿದ್ದು ಟೀಮ್ ಇಂಡಿಯಾದ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ.
ರಾಘು, ಅಡಿಲೇಡ್ನಲ್ಲಿ ಮೈದಾನದ ಬೌಂಡರಿ ಲೈನ್ನಲ್ಲಿ ಬ್ರಶ್ ಹಿಡಿದುಕೊಂಡು ಓಡಾಡುತ್ತಿದ್ದರು. ಇದನ್ನು ನೋಡಿದ ಪ್ರತಿಯೊಬ್ಬರಿಗೂ ಆಶ್ಚರ್ಯವಾಗುವುದು ಖಚಿತ. ಆದರೆ ಇದರ ಹಿಂದೆ ಒಂದು ಕಾರಣವಿದೆ. ಮಳೆ ಬಂದು ಒದ್ದೆಯಾಗಿದ್ದ ಪಿಚ್ನಲ್ಲಿ ಓಡುವಾಗ ಶೂಗಳಿಗೆ ಮಣ್ಣು ಮೆತ್ತಿಕೊಳ್ಳುತ್ತಿತ್ತು. ಹೀಗಾಗಿ ಬೌಂಡರಿ ಲೈನ್ನ ಬಳಿ ಬೌಲರ್ಗಳು ನಿಂತಾಗ, ರಘು ಬ್ರಶ್ನಿಂದ ಅವರ ಶೂಗಳಿಗೆ ಮೆತ್ತಿದ್ದ ಮಣ್ಣುಗಳನ್ನು ತೆಗೆಯುತ್ತಿದ್ದರು. ಅದಲ್ಲದೆ, ಕೆಲ ಫೀಲ್ಡರ್ಗಳ ಶೂಗಳನ್ನೂ ಬ್ರಶ್ನ ಮೂಲಕ ಉಜ್ಜಿದ್ದರು. ಇದರಿಂದಾಗಿ ಭಾರತದ ಆಟಗಾರರು ಯಾವುದೇ ತೊಂದರೆಯಿಲ್ಲದೆ ಮೈದಾನದಲ್ಲಿ ಫೀಲ್ಡಿಂಗ್ ಮತ್ತು ಬೌಲಿಂಗ್ ಮಾಡಲು ಸಾಧ್ಯವಾಗಿತ್ತು.
ಹೀಗಾಗಿ ಭಾರತ ತಂಡದ ಆಫ್ ಫೀಲ್ಡ್ ಹೀರೋವಾಗಿ ರಘು ಹೊರಹೊಮ್ಮಿದ್ದರು. ಇದೀಗ ಇವರ ಸಾಧನೆಯನ್ನು ನೆಟ್ಟಿಗರು ಪ್ರಶಂಶಿಸಿದ್ದು, ಗ್ರೇಟ್ ಜಾಬ್ ಎಂದು ಬರೆದುಕೊಂಡಿದ್ದಾರೆ. ಭಾರತೀಯ ಆಟಗಾರರು ಮೈದಾನದಲ್ಲಿ ಜಾರಿ ಬೀಳುವ ಸಾಧ್ಯತೆಯನ್ನು ತಪ್ಪಿಸಲು ಕೈಯಲ್ಲಿ ಬ್ರಷ್ ಹಿಡಿದು ಮೈದಾನದ ಸುತ್ತಲೂ ಓದಿದ ಇವರಿಗೆ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
