ಬೆಂಗಳೂರು ನಗರದಲ್ಲಿ ಇತ್ತೀಚಿಗೆ ಟ್ರಾಫಿಕ್ ಸಮಸ್ಯೆಗಳು ಹೆಚ್ಚಾಗುತ್ತಿದೆ. ಇದರಿಂದ ವಾಹನ ಸವಾರರಿಗೆ ಪ್ರತಿನಿತ್ಯ ತಮ್ಮ ದೈನಂದಿನ ಕೆಲಸಕ್ಕೆ ತೆರಳಲು ಬಹಳಷ್ಟು ಕಷ್ಟವಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನಾವು ಹಲವು ಬಾರಿ ಗಮನಿಸಿದ್ದೇವೆ. ಟ್ರಾಫಿಕ್ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ದ್ವಿಚಕ್ರ ವಾಹನರು ಫುಟ್ ಪಾತ್ ಮೇಲೆ ವಾಹನ ಚಲಾಯಿಸಿಕೊಂಡು ಹೋಗುತ್ತಾರೆ. ಇದೀಗ ಇಂತವರಿಗೆ ಬುದ್ದಿ ಕಲಿಸಲು ಸಂಚಾರಿ ಪೊಲೀಸರು ತೀರ್ಮಾನಿಸಿದ್ದಾರೆ.
ಸಂಚಾರಿ ಪೋಲಿಸ್ ಇಲಾಖೆ ವಿಶೇಷ ಆಯುಕ್ತರಾದ ಡಾ ಎಂ.ಎ ಸಲೀಂ ಅವರು ಮಾಹಿತಿ ನೀಡಿದ್ದು, ಫುಟ್ಪಾತ್ ಮೇಲೆ ವಾಹನ ಚಲಾಯಿಸುವುದು ಬಹಳ ಅನಾಗರಿಕ ವರ್ತನೆ. ಇದರಿಂದ ಪಾದಚಾರಿಗಳಿಗೆ ಬಹಳ ಸಮಸ್ಯೆ ಆಗುತ್ತದೆ. ಅಲ್ಲದೇ ಪ್ರಾಣಹಾನಿ ಆಗುವ ಸಂಭವ ಹೆಚ್ಚು. ಆದ್ದರಿಂದ ಕಠಿಣ ಕ್ರಮದ ಭಾಗವಾಗಿ ಎಫ್ಐಆರ್ ಮಾಡಿ ಕೋರ್ಟಿಗೆ ಕಳುಹಿಸುತ್ತಿದ್ದೇವೆ. ಅಲ್ಲದೇ ವಾಹನ ಸೀಜ್ ವಶಕ್ಕೆ ಪಡೆದಕೊಂಡು ಕೋರ್ಟ್ ವಶಕ್ಕೆ ನೀಡುತ್ತಿದ್ದೇವೆ. ಕೋರ್ಟಿನಿಂದಲೇ ಮಾಲೀಕರು ವಾಹನ ಬಿಡುಗಡೆ ಮಾಡಿಕೊಳ್ಳಬೇಕು.
ಎರಡು ತಿಂಗಳುಗಳ ಕಾಲ ಕಠಿಣವಾಗಿ ಇದನ್ನು ಅನುಸರಿಸುತ್ತೇವೆ. ಇದರ ಉದ್ದೇಶ ಸವಾರರು ಇಂತಹ ವರ್ತನೆಯಿಂದ ದೂರವಾಗಬೇಕು ಮತ್ತು ಫುಟ್ಪಾತ್ ಪಾದಚಾರಿಗಳಿಗೆ ಸುರಕ್ಷಿತವಾಗಿ ಇರ್ಬೇಕು. ಫುಟ್ಪಾತ್ ಮೇಲೆ ವಾಹನ ನಿಲ್ಲಿಸಿದರೆ ಅಥವಾ ಚಲಾಯಿಸಿದರೆ ವಾಹನ ಸೀಝ್ ಮಾಡಿ ಸೆಕ್ಷನ್ 283 ಅಡಿಯಲ್ಲಿ FIR ದಾಖಲು ಮಾಡಲಾಗುತ್ತೆ ಎಂದು ತಿಳಿಸಿದ್ದಾರೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
