ಇಂದು ಬೆಂಗಳೂರಿನ ಕೆಆರ್ ಮಾರ್ಕೆಟ್ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು ಕೆಆರ್ ಮಾರ್ಕೆಟ್ ಫ್ಲೈಓವರ್ ಮೇಲಿಂದ ಯುವಕನೊಬ್ಬ ಹಣದ ನೋಟುಗಳನ್ನ ಎಸೆದಿದ್ದಾನೆ.. ಕೆ.ಆರ್ ಮಾರ್ಕೆಟ್ ಫ್ಲೈಓವರ್ ಮೇಲಿಂದ ದುಡ್ಡಿನ್ನು ಎಸೆಯುತ್ತಿದ್ದಂತೆ ಫ್ಲೈಓವರ್ನ ಅಕ್ಕಪಕ್ಕ ಇದ್ದವರೆಲ್ಲರೂ ಆ ದುಡ್ಡನ್ನು ಪಡೆದುಕೊಳ್ಳಲು ನಾ ಮುಂದು ತಾ ಮುಂದು ಎಂದು ಮುಗಿಬಿದ್ದರು. ಫ್ಲೈ ಓವರ್ನ ಎರಡು ಬದಿಯಲ್ಲಿ ನೋಟುಗಳು ಎಸೆಯುತ್ತಿದ್ದರೆ, ಕೆಲಸ ಕಾರ್ಯಗಳಲ್ಲಿ ತೊಡಗಿದ್ದವರು ಆ ದುಡ್ಡನ್ನು ಎತ್ತಿಕೊಳ್ಳಲು ಮುಗಿಬಿದ್ದಿದ್ದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
#Bizarre in #Bengaluru#Traffic came to halt on #Sirsi Circle #flyover and the road below it (#KRMarket) after a well-dressed youth went about throwing currency notes. Who was he and why did he do it is not known. @NammaBengaluroo @WFRising @TOIBengaluru @peakbengaluru pic.twitter.com/zXB6mndKm6
— Rakesh Prakash (@rakeshprakash1) January 24, 2023
ಹಣ ಎಸೆದ ಯುವಕನನ್ನು ಅರುಣ್ ಎಂದು ಗುರುತಿಸಲಾಗಿದ್ದು, ವ್ಯಕ್ತಿ ಹಣ ಎಸೆದು ಅಲ್ಲಿಂದ ಪರಾರಿಯಾಗಿದ್ದಾನೆ. ಅಷ್ಟಕ್ಕೂ ಸೂಟು ಬೂಟು.. ಕತ್ತಲ್ಲಿ ಗಡಿಯಾರ.. ಕೈಯಲ್ಲಿ ಗರಿ ಗರಿ ನೋಟು.. ಬೇಕಾಬಿಟ್ಟಿ ಹಣ ಎಸೆದು ಹೋದ ಅರುಣ್ ಯಾರು? ಆತನ ಬ್ಯಾಗ್ಗ್ರೌಂಡ್ ಏನು? ದುಡ್ಡು ಏಕೆ ಎಸೆದ? ಈ ರೀತಿಯ ಎಲ್ಲಾ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾ? ಮುಂದೆ ಓದಿ
ಈತ ಬೆಂಗಳೂರಿನ K R ಮಾರ್ಕೆಟ್ ಫ್ಲೈ ಓವರ್ ಮೇಲಿಂದ ದುಡ್ಡು ಎಸೆದಿದ್ದಾನೆ
ಇವನ ಬಗ್ಗೆ ಮಾಹಿತಿ ದೊರೆತರೆ ತಕ್ಷಣ ನಮ್ಮ ಪಕ್ಷದ ಕಚೇರಿಗೆ ಮಾಹಿತಿ ನೀಡಿ 😅😂pic.twitter.com/gJ6W9AEY8B
— 🇮🇳 Madhukumar.V.P🇮🇳 (@MadhukumarVP1) January 24, 2023
ಯಾರು ಈ ಅರುಣ್:
ಹಣ ಎಸೆದು ಹೋದ ಅರುಣ್, ಬೆಂಗಳೂರಿನ ನಾಗರಬಾವಿಯ ನಿವಾಸಿ. ವೃತ್ತಿಯಲ್ಲಿ ಇವೆಂಟ್ ಪ್ಲಾನರ್ ಆಗಿರುವ ಅರುಣ್, ಅರುಣ್ ವಿ ಡಾಟ್ 9 ಇವೆಂಟ್ಸ್ ಕಂಪನಿಯ ಸಿಇಓ. ಇವೆಂಟ್ ಪ್ಲಾನ್ ಮಾಡ್ತಿದ್ದ ಅರುಣ್ ಇದ್ದಕ್ಕಿದ್ದಂತೆ ಹಣ ಎಸೆದು ಸುದ್ದಿಯಾಗಿದ್ದಾರೆ..
ಗಡಿಯಾರ ಹಾಕಿಕೊಂಡಿದ್ದು ಯಾಕೆ?
ಅರುಣ್ ಕುತ್ತಿಗೆಗೆ ಗಡಿಯಾರ ಹಾಕೊಂಡು ಬಂದಿದ್ದು ಯಾಕೆ ಅಂತಲೂ ತಿಳಿಸಿದ್ದಾರೆ. ಟೈಮ್ ಅನ್ನೋದೇ ಸಂದೇಶ. ಒಳ್ಳೆಯ ಸಂದರ್ಭದಲ್ಲಿ ಹಣ ಎಸೆದಿದ್ದೇನೆ. ಅದರಲ್ಲಿಯೇ ಸಂದೇಶ ಇದೆ. ಆ ಸಂದರ್ಭದಲ್ಲಿ ಹಣ ಎರಚಿದ್ರೆ ಒಳ್ಳೆಯದು ಅಂತಾ ಎರಚಿದ್ದೇನೆ. ಒಳ್ಳೆಯ ಸಂದೇಶ ಇದೆ ಅದನ್ನು ಎಲ್ಲರಿಗೂ ಹೇಳ್ತೀನಿ. ಕುತ್ತಿಗೆಯಲ್ಲಿ ಗಡಿಯಾರ ಹಾಕಿರೋದೇ ಅದಕ್ಕೆ ಎಂದಿದ್ದಾರೆ.
ನನಗೆ ಜ್ಞಾನ, ಬುದ್ಧಿ ಶಕ್ತಿ ಚೆನ್ನಾಗಿದೆ. ಕೆಟ್ಟ ಉದ್ದೇಶದಿಂದ ಹಣ ಎಸೆದಿಲ್ಲ. ನಾನು ವಿದ್ಯಾವಂತನಾಗಿದ್ದೇನೆ, ನನಗೂ ಬುದ್ಧಿಯಿದೆ. ಸಾರ್ವಜನಿಕವಾಗಿ ಹಣ ಎಸೆದಿದ್ದು ತಪ್ಪು ಎಂದು ನನಗೆ ಗೊತ್ತಿದೆ. ರೀಲ್ಸ್ ಮಾಡುವ ಉದ್ದೇಶದಿಂದ ಹಣ ಎಸೆದಿಲ್ಲ. ನನಗೆ ಸಮಯ ನೀಡಿದರೆ ಎಲ್ಲವನ್ನೂ ಹೇಳುತ್ತೇನೆ. ದಯವಿಟ್ಟು ನನಗೆ ಸಮಯ ಕೊಡಿ ಎಂದು ಮಾಧ್ಯಮವೊಂದಕ್ಕೆ ಅರುಣ್ ಹೇಳಿದ್ದಾನೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
