ಸೂರ್ಯನನ್ನು ಒಂದು ಕ್ಷಣ ಕನ್ನಡ್ಕ ಹಾಕಿಕೊಂಡು ನೋಡಿದರೆ ಸಾಕು ಕಣ್ಣು ಭಸ್ಮವಾಗುವಷ್ಟು ಅನುಭವಾಗುತ್ತದೆ. ಆದರೆ ಸೂರ್ಯನನ್ನು ಕನ್ನಡ್ಕ ಇಲ್ಲದೆ ಬರಿ ಕಣ್ಣಿನಿಂದ 42 ನಿಮಿಷಗಳ ಕಾಲ ನೋಡಿ ಇದೀಗ ಬದರಿ ನಾರಾಯಣ್ ಒಂದು ಮಹತ್ವದ ಸಾಧನೆ ಮಾಡಿದ್ದಾರೆ.
ಗರದ ಮೈಸೂರಿನ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿ ಬದರಿ ನಾರಾಯಣ್ ಅವರು ಮಂಗಳವಾರ ಪ್ರಾಣಾಯಾಮ ಮಾಡುತ್ತಾ ಬರಿಗಣ್ಣಿನಲ್ಲಿ ಸೂರ್ಯನನ್ನು ವೀಕ್ಷಿಸಿದರು. ಇಂತಹ ಸುಡುಬಿಸಿಲಿನಲ್ಲೂ ಸಹ ಇವರು ಸುಮಾರು 42 ನಿಮಿಷಗಳ ಕಾಲ ಸೂರ್ಯನನ್ನು ವೀಕ್ಷಿಸಿದ್ದಾರೆ.
ಈ ಕುರಿತು ಮಾತನಾಡಿದ ಬದರಿ ನಾರಾಯಣ್ ಅವರು ” ಈ ಪ್ರಕ್ರಿಯೆಗೆ ಸೂರ್ಯ ಕಿರಣ ಕ್ರಿಯೆ ಎಂದು ಹೇಳುತ್ತೇವೆ. ಸೂರ್ಯನನ್ನು ನೇರವಾಗಿ ನೋಡುವುದು ಅಪಾಯಕಾರಿ. ಆದರೆ, ನಿರಂತರ ಪ್ರಾಣಾಯಾಮದ ಜೊತೆಗಿನ ಅಭ್ಯಾಸದ ಮೂಲಕ ನಾನು ಈ ಸಾಧನೆ ಮಾಡಿದ್ದೇನೆ. ಹೀಗಾಗಿ ಇದನ್ನು ಯಾರೂ ಪ್ರಯತ್ನಿಸಬಾರದು” ಎಂದು ವಿನಂತಿಸಿಕೊಂಡಿದ್ದಾರೆ. ಯೋಗ ಗುರು ಕೆ.ರಾಘವೇಂದ್ರ ಪೈ ಮಾತನಾಡಿ, ‘ಈ ಯೋಗಕ್ಕೆ ತ್ರಾಟಕ ಕ್ರಿಯೆ ಎನ್ನುತ್ತಾರೆ. ಇದನ್ನು ಹಠ ಯೋಗಿಗಳು ಮಾತ್ರ ಸಾಧಿಸಲು ಸಾಧ್ಯ’ ಎಂದು ತಿಳಿಸಿದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
