ಎಸ್.ಪಿ.ಬಿ ಜನಮನ ಗೆದ್ದ ಗಾಯರು. ಇವರ ಸಂಗೀತ ಕೊಡುಗೆ ಅಪಾರ. ಅವಿಸ್ಮರಣೀಯ. ಇತಿಹಾಸದ ದಾಖಲೆ.ಆದರೆ ಈ ಸರಸ್ವತಿ ಪುತ್ರನನ್ನು ವೇದಿಕೆಗೆ ತಂದವರು ಯಾರು ಗೊತ್ತೆ ? ಎಸ್ ಪಿ ಬಿ ಅವರನ್ನು ಮೊದಲು ಗುರುತಿಸಿದ್ದು ಎಸ್ ಜಾನಕಿ. ಇದನ್ನು ಎಸ್.ಪಿ.ಬಿ ಎಷ್ಟೊ ಬಾರಿ ಹೇಳಿದ್ದರು. ನೆನಪು ಮಾಡಿಕೊಂಡಿದ್ದರು. ಇಂಜಿನಿಯರ್ ಆಗಬೇಕೆಂದಿದ್ದೇ ಈಗ ಗಾಯಕನಾದೆ ಕಾರಣ ಜಾನಕಿಯವರು ಎಂದಿದ್ದರು.
ಹೈದರಾಬಾದ್ ನ ಯಾವುದೊ ಹಾಡಿನ ಸ್ಪರ್ಧೆಯಲ್ಲಿ ಮಹೇಂದ್ರ ಕಪೂರ್ ಎನ್ನುವ ಗಾಯಕ ಮೊದಲ ಸ್ಥಾನ ಪಡೆದರು. ಎಸ್ ಪಿ ಬಿ 2/ 3ನೇ ಸ್ಥಾನ ಪಡೆದಿದ್ದರು. ಆ ಶೋನಲ್ಲಿ ಜಾನಕಿ ಅವರು ತೀರ್ಪುಗಾರರಾಗುದ್ದರು.
ನಂ,1 ಆದರವನ್ನು ಬಿಟ್ಟು ಜಾನಕಿ ಅವರು ನಂತರದ ಸ್ಥಾನ ಪಡೆದ ಎಸ್.ಪಿ.ಬಿ ಅವರನ್ನು ಕರೆದು ಅವಕಾಶ ಕೊಡೋಣ ಎಂದು ಎಸ್ ಪಿ ಬಿಗೆ ಹಾಡುವ ಎಲ್ಲಾ ಅನುಕೂಲ ಮಾಡಿಕೊಟ್ಟು, ವೇದಿಕೆಗೆ ಕರೆದುಕೊಂಡು ಬಂದರು. ಬೆನ್ನುತಟ್ಟಿದ ಹುಡುಗ ಎತ್ತರಕ್ಕೆ ಬೆಳೆದಿದ್ದನ್ನು ನೋಡಿದರು, ಎಸ್.ಪಿ.ಬಿಚರಿತ್ರೆ ಆದರು, ಜಾನಕಿ ಹೆಮ್ಮೆ ಪಟ್ಟಿದ್ದರು.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
