fbpx
ಸಮಾಚಾರ

ಮೃತ ದೇಹದ ವ್ಯಕ್ತಿಯ ಕಾಲಿನ ಹೆಬ್ಬೆರಳು ಏಕೆ ಕಟ್ಟುತ್ತಾರೆ? ವೈಜ್ಞಾನಿಕ ಕಾರಣ ಮತ್ತು ಹಿರಿಯರ ನಂಬಿಕೆ ಇಲ್ಲಿದೆ

ಒಬ್ಬ ವ್ಯಕ್ತಿ ಸತ್ತ ಮೇಲೆ ಕೂಡ ಹಲವಾರು ಬಗೆಯ ಶವಸಂಸ್ಕಾರ ಪೂಜೆ ಮಾಡುತ್ತಾರೆ. ವ್ಯಕ್ತಿ ಸತ್ತ ಮೇಲೆ ಆತನ ಮೃತ ದೇಹಕ್ಕೆ ಸ್ನಾನವನ್ನು ಮಾಡಿಸುತ್ತಾರೆ. ಅಲಂಕಾರವನ್ನು ಮಾಡುತ್ತಾರೆ. ಮೃತ ದೇಹದ ಮೆರವಣಿಗೆ ಮಾಡುತ್ತಾರೆ.

ವ್ಯಕ್ತಿ ಸತ್ತ ಮೇಲೆ ಮೊದಲಿಗೆ ಆತನ ಎರಡು ಕಾಲಿನ ಬೆರಳುಗಳನ್ನು ಜೋಡಿಸಿ ಒಂದೇ ಕಡೆಗೆ ಮಾಡಿ ಅವುಗಳನ್ನು ಚಿಕ್ಕ ದಾರದಿಂದ ಕಟ್ಟಲಾಗುತ್ತದೆ. ಈ ವಿಚಾರವು ನಮಗೆ ನಿಜಕ್ಕೂ ಅಚ್ಚರಿಯನ್ನು ಉಂಟು ಮಾಡುತ್ತದೆ. ಹೀಗೆ ಕಟ್ಟಿದ ಈ ದಾರವನ್ನು ದೇಹವನ್ನು ದಹನ ಮಾಡುವವರೆಗೆ ಹಾಗೆ ಇಡುತ್ತಾರೆ.

ಇವುಗಳು ವೈಜ್ಞಾನಿಕವಾದ ಕಾರಣಗಳನ್ನು ಒಳಗೊಂಡಿರುತ್ತದೆ. ಹಿರಿಯರು ಬೆಳೆಸಿಕೊಂಡು ಬಂದಂತಹ ಕೆಲವು ಕಾರ್ಯಗಳಿಗೆ ತನ್ನದೇ ಆದ ಮಹತ್ವವಿದೆ ಇತಿಹಾಸವಿದೆ ಹಾಗೆಯೇ ಹಿನ್ನಲೆ ಕೂಡ ಇದೆ.

ಇನ್ನೂ ನಾವು ವೈಜ್ಞಾನಿಕ ದೃಷ್ಟಿಕೋನದಿಂದ ತಿಳಿಯಬೇಕೆಂದರೆ, ವ್ಯಕ್ತಿ ಸತ್ತ ಮೇಲೆ ಆತನ ದೇಹದಲ್ಲಿರುವ ಯಾವುದೇ ಅಂಗಗಳೂ ಸಂಪೂರ್ಣವಾಗಿ ಸತ್ತು ಹೋಗಿ ಕೆಲಸವನ್ನು ಮಾಡುವುದನ್ನು ನಿಲ್ಲಿಸಿರುತ್ತವೆ. ಆತನ ದೇಹವು ಕೂಡ ಪೂರ್ತಿಯಾಗಿ ತಂಪಾಗಿ ಹೋಗಿರುತ್ತದೆ. ಹೀಗಾಗಿ ಆತನ ದೇಹದಲ್ಲಿ ರಕ್ತ ಸಂಚಾರ ಸ್ಥಗಿತಗೊಂಡಿರುತ್ತದೆ. ಇದೆ ಕಾರಣದಿಂದ ದೇಹವು ಬಿಗಿಯಾಗುತ್ತಾ ಬರುತ್ತದೆ.

ಆದ್ದರಿಂದ ಸತ್ತ ಮೇಲೆ ತಕ್ಷಣವೇ ಜನರು ಮೃತ ದೇಹದ ಕಾಲುಗಳನ್ನು ಮಡಚುತ್ತಾರೆ ಇನ್ನೂ ಕೆಲವರು ದೇಹವನ್ನು ಉದ್ದವಾಗಿ ಮಲಗಿಸಿ ಅವರ ಕಾಲಿನ ಹೆಬ್ಬೆರಳುಗಳನ್ನು ಕಟ್ಟುತ್ತಾರೆ. ಒಂದು ವೇಳೆ ನೀವು ಈ ರೀತಿ ಮಾಡದೇ ಇದ್ದರೆ ಕಾಲುಗಳು ಅಗಲವಾಗುತ್ತಾ ಹೋಗುತ್ತವೆ ಇದರಿಂದ ಅವುಗಳನ್ನು ಮತ್ತೆ ಜೋಡಿಸಲು ಬಲು ಕಷ್ಟವಾಗುತ್ತದೆ. ಆದ್ದರಿಂದ ನಮ್ಮ ಹಿಂದೂ ಸಂಪ್ರದಾಯದಲ್ಲಿ ಈ ರೀತಿ ಮಾಡುತ್ತಾರೆ.

ಆತ್ಮ ಇದೇ ಲೋಕದಲ್ಲಿ ಸುತ್ತುತ್ತಾ ಇರುತ್ತದೆ ಎಂದು ಹಿಂದೂ ಪುರಾಣದಲ್ಲಿ ಹೇಳಲಾಗುತ್ತದೆ. ಆದರೆ ಆತ್ಮ ಮತ್ತೆ ಮನೆಗೆ ಮರಳಬಾರದು ಎನ್ನುವ ಉದ್ದೇಶದಿಂದ ವ್ಯಕ್ತಿ ಸತ್ತ ನಂತರ ಆತನ ಕಾಲಿನ ಹೆಬ್ಬೆರಳುಗಳಿಗೆ ಈ ರೀತಿ ಹಗ್ಗದಿಂದ ಕಟ್ಟುತ್ತಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top