ಶ್ರಾದ್ಧ ಅಂದ್ರೆ ಹೇಗಿರುತ್ತೆ? ಪಾಯಸ, ವಡೆ, ಬಗೆ ಬಗೆಯ ಖಾದ್ಯಗಳ ಜೊತೆ ಒಂದಿಷ್ಟು ಗೆಸ್ಟು ಇದ್ದೆ ಇರ್ತಾರೆ! ಆದ್ರೆ ಇಲ್ಲೊಬ್ಬರು ಕವಿಗಳನ್ನ ಕರೆಸಿ, ದಕ್ಷಿಣೆಕೊಟ್ಟು, ತಮ್ಮ ತಂದೆಯ ತಿಥಿಯನ್ನ ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ.
ವಿಭಿನ್ನ ರೀತಿಯಲ್ಲಿ ತಮ್ಮ ತಂದೆಯ ಶ್ರಾದ್ಧ ಆಚರಿಸಿಕೊಂಡಿದ್ದು ಮೂಡುಬಿದಿರೆಯ ಅರವಿಂದ ಚೊಕ್ಕಾಡಿ, ಕಾಲಂಇಸ್ಟ್, ಸಾಹಿತಿ, ಶಿಕ್ಷಕರೂ ಆಗಿರುವ ಅರವಿಂದ ಚೊಕ್ಕಾಡಿ ತಮ್ಮತಂದೆಯ ಅಗಲುವಿಕೆಯನ್ನ ಜೀವಂತವಾಗಿಸಿಡೋದಕ್ಕೆ ಇಂತಹುದೊಂದು ಹೊಸ ರೀತಿಯಲ್ಲಿ ಶ್ರಾದ್ಧ ಆಚರಿಸಿದರು.ಬಂದ ಕವಿಗಳಿಂದ ಕಾವ್ಯವಾಚಿಸಿ, ಅವರಿಗೆ ನೂರಾ ಒಂದು ರೂಪಾಯಿ ದಕ್ಷಿಣೆ ಕೊಟ್ಟು, ಗುಲಾಬಿಗಿಡಗಳನ್ನೂ ಕೊಟ್ಟಿದ್ದಾರೆ.
ಕವಿಗೋಷ್ಠಿ ಬಳಿಕ ನಡೆದ ಭೋಜನ ಕೂಟದಲ್ಲಿ ಸಹಪಂಕ್ತಿ ಅನುಸರಿಸಲಾಯಿತು. ಯಾವುದೇ ಜಾತಿ, ಮತ ಬೇಧವಿಲ್ಲದೇ ನೆರೆದವರೆಲ್ಲರೂ ಭೋಜನ ಸವಿದರು. ಒಟ್ಟಿನಲ್ಲಿ ಗೌಜಿ ಗದ್ದಲದ ನಡುವೆ ನಡೆಯುವ ಶ್ರಾದ್ಧ ಇಲ್ಲಿ ಮಾತ್ರ ವಿಭಿನ್ನವಾಗಿ ಆಚರಿಸಲ್ಪಟ್ಟಿತು. ಕವಿಗಳಿಂದ ಕವನ ವಾಚಿಸಿ ಕನ್ನಡ ಪ್ರೇಮದ ಜೊತೆಗೆ ತಂದೆಯ ನೆನಪು ಸದಾ ಹಸಿರಾಗಿರುವಂತೆ ಮಾಡಿದ ಚೊಕ್ಕಾಡಿ ಅವರಿಗೊಂದು ಮೆಚ್ಚುಗೆ ನೀಡಲೇಬೇಕು.
ನಲವತ್ತಕ್ಕೂ ಹೆಚ್ಚು ಕವಿಗಳು ಭಾಗಿಯಾಗಿದ್ದು, ಯಾವುದೆ ಮತ, ಧರ್ಮ ಹಾಗೂ ಜಾತಿಯ ಬೇಧವಿಲ್ಲದೆ ಸಹಪಂಕ್ತಿ ಭೋಜನ ಸವಿದಿದ್ದಾರೆ. ಒಟ್ಟಿನಲ್ಲಿ ಗೌಜಿನಲ್ಲೇ ಮುಗಿದುಹೋಗುವ ಶ್ರಾದ್ಧದಲ್ಲಿ ಕವಿಗಳಿಂದ ಕವನವಾಚಿಸಿ ಕನ್ನಡ ಪ್ರೇಮ ಮೆರೆದ ಚೊಕ್ಕಾಡಿಯವರಿಗೊಂದು ಸಲಾಂ ಹೇಳೋಣ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
