ಅನೇಕ ಜನರು ತಮ್ಮ ಕಾಲು, ಕೈಗಳಿಗೆ ಕಪ್ಪು ದಾರವನ್ನು ಕಟ್ಟುವುದನ್ನು ನೀವು ನೋಡಿರಬೇಕು. ಇತ್ತೀಚೆಗೆ ಯುವಕ- ಯುವತಿಯರಲ್ಲಿ ಯಾರ ಕಾಲನ್ನು ನೋಡಿದ್ರೂ ಕಪ್ಪು ದಾರ ಕಾಣಿಸುತ್ತೆ. ಇದು ಪ್ಯಾಶನ್ ಅಲ್ಲಇದರ ಹಿಂದೆ ಇದೆ ಶಾಸ್ತ್ರದ ಕಾರಣ. ಹಾಗಾದರೆ ಯಾವ ಕಾಲಿಗೆ ಕಪ್ಪು ದಾರವನ್ನ ಯಾಕೆ ಕಟ್ಟಿಕೊಳ್ಳಬೇಕು ಮತ್ತು ಅದರ ಮಹತ್ವ ಏನು ಎಂದು ಪೂರ್ತಿಯಾಗಿ ಓದಿ ತಿಳಿದುಕೊಳ್ಳಿ.
ಜ್ಯೋತಿಷ್ಯದ ಪ್ರಕಾರ, ಕಪ್ಪು ಬಣ್ಣವು ದುಷ್ಟ ಕಣ್ಣಿನಿಂದ ರಕ್ಷಿಸುತ್ತದೆ. ಅದಕ್ಕಾಗಿಯೇ ಜನರು ಇದನ್ನು ತಪ್ಪಿಸಲು ಕಪ್ಪು ಟಿಕಾ, ಕಪ್ಪು ಬಟ್ಟೆ ಅಥವಾ ಕಪ್ಪು ದಾರವನ್ನು ಬಳಸುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಮಹಿಳೆಯರು ಯಾವಾಗಲೂ ಎಡಗಾಲಿಗೆ ಕಪ್ಪು ದಾರವನ್ನು ಕಟ್ಟಬೇಕು ಮತ್ತು ಪುರುಷರು ತಮ್ಮ ಬಲಗಾಲಿಗೆ ಕಪ್ಪು ದಾರವನ್ನು ಕಟ್ಟಬೇಕು. ಹಾಗೆ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
ಧರ್ಮಗ್ರಂಥಗಳ ಪ್ರಕಾರ ಈ ಕಪ್ಪು ದಾರವನ್ನು ಕಟ್ಟುವುದರಿಂದ ಅನೇಕ ಪ್ರಯೋಜನಗಳಿವೆ. ಶನಿದೋಷದ ಋಣಾತ್ಮಕ ಪರಿಣಾಮಗಳಿಂದಲೂ ನಮ್ಮನ್ನು ರಕ್ಷಿಸುತ್ತದೆ.
ನಮ್ಮ ದೇಹವು ಪಂಚಭೂತಗಳ ಆಧಾರವಾಗಿದೆ, ಪಂಚಭೂತಗಳು ಅಂದರೆ ಭೂಮಿ, ನೀರು, ಆಕಾಶ, ಬೆಂಕಿ ಮತ್ತು ಗಾಳಿ ಮತ್ತು ಇವುಗಳಿಂದ ಪ್ರತಿಯೊಂದು ಜೀವಿಗಳ ಜೀವನ ನಡೆಯುತ್ತದೆ. ಪಂಚಭೂತದಿಂದ ಬರುವ ಶಕ್ತಿ ಯಾವಾಗಲೂ ನಮ್ಮ ಜೊತೆ ಇರಬೇಕು ಅನ್ನುವ ಕಾರಣಕ್ಕೆ ಮಹಿಳೆಯರು ಮತ್ತು ಪುರುಷರು ಕಾಲುಗಳಿಗೆ ಕಪ್ಪು ದಾರವನ್ನ ಕಟ್ಟಿಕೊಳ್ಳುತ್ತಾರೆ.
ಕಪ್ಪು ದಾರಕ್ಕೆ ದುಷ್ಟ ಶಕ್ತಿಯನ್ನು ತಡೆಯುವ ಸಾಮರ್ಥ್ಯವಿದೆ. ಕಪ್ಪು ದಾರಕ್ಕೆ ಶಾಖ ಹೀರುವ ಗುಣವಿದೆ. ಈ ಕಾರಣಕ್ಕೂ ದಾರ ಕಟ್ಟಿಕೊಳ್ಳುತ್ತಾರೆ. ಕಾಲು ವಿಪರೀತವಾಗಿ ನೋವಾಗುತ್ತಿದ್ದರೆ ಕಪ್ಪು ದಾರ ಕಟ್ಟಿಕೊಂಡಾಗ ನೋವು ಕಡಿಮೆಯಾಗುತ್ತದೆ. ನೋವು ನಿವಾರಣೆ ಮಾಡಲು ಕಾಲಿಗೆ ದಾರ ಕಟ್ಟುವ ನಂಬಿಕೆಯಿದೆ.
ಕೆಲವರಿಗೆ ಆರ್ಥಿಕ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಎಷ್ಟು ದುಡಿದರೂ ಹಣ ಕೂಡಿಡಲು ಆಗುತ್ತಿಲ್ಲ. ಅಥವಾ ಕೈಯಲ್ಲಿ ಹಣ ನಿಲ್ಲುತ್ತಿಲ್ಲ. ಒಂದಲ್ಲ ಒಂದು ಸಮಸ್ಯೆ ಶುರುವಾಗುತ್ತದೆ. ಹೀಗಾಗಿ ಇದನ್ನು ಪರಿಹರಿಸಲು ಕಪ್ಪು ದಾರವನ್ನು ಕಟ್ಟಿಕೊಳ್ಳಬೇಕೆಂದು ಜೋತಿಷ್ಯ ಹೇಳುತ್ತದೆ.
copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ
